ರೈಲು ಹಳಿ ದುರಸ್ತಿ ಬಹುತೇಕ ಪೂರ್ಣ
ಹಾಸನ: ಬೆಂಗಳೂರು–ಮಂಗಳೂರು ಮಾರ್ಗದ ಯಡಕುಮೇರಿ ಮತ್ತು ಕಡಗರವಳ್ಳಿ ಮಧ್ಯೆ ರೈಲ್ವೆ ಹಳಿ ಬಳಿ ಭೂಕುಸಿತವಾಗಿದ್ದ ಸ್ಥಳದಲ್ಲಿ ದುರಸ್ತಿ ಕಾಮಗಾರಿ ಪೂರ್ಣಗೊಳ್ಳುವ ಹಂತಕ್ಕೆ ತಲುಪಿದೆ. ಹಳಿ ಕೆಳಗೆ ಸುಮಾರು 500 ಮೀಟರ್ ಆಳಕ್ಕೆ ಕುಸಿದಿದ್ದ ಮಣ್ಣನ್ನು ತೆರವುಗೊಳಿಸಲಾಗಿದ್ದು, ಕಲ್ಲಿನಿಂದ ಕ್ರಿಬ್ ಗೋಡೆ ನಿರ್ಮಿಸಲಾಗಿದೆ. ಹಳಿಯ ಪಕ್ಕದಲ್ಲಿ ತಡೆಗೋಡೆ ನಿರ್ಮಾಣ ಭರದಿಂದ ಸಾಗಿದೆ. ಜುಲೈ 26ರಿಂದ ಈ ಮಾರ್ಗದಲ್ಲಿ ರೈಲುಗಳ ಸಂಚಾರ ಸ್ಥಗಿತವಾಗಿತ್ತು. ‘ಸತತ ಕಾರ್ಯಾಚರಣೆಯ ಬಳಿಕ ದುರಸ್ತಿ ಬಹುತೇಕ ಪೂರ್ಣಗೊಂಡಿದೆ.ಆಗಸ್ಟ್ 8ರವರೆಗೆ ಈ ಮಾರ್ಗದ ರೈಲುಗಳ ಸಂಚಾರ ರದ್ದುಗೊಳಿಸ ಲಾಗಿದ್ದು, ಆಗಸ್ಟ್ 9ರಿಂದ ಆರಂಭವಾಗುವ ಸಾಧ್ಯತೆ ಇದೆ’ ಎಂದು ನೈರುತ್ಯ ರೈಲ್ವೆ ಮೂಲಗಳು ತಿಳಿಸಿವೆ.