ಇಲ್ಲಿನ ಪ್ರವಾಸಿ ಮಂದಿರದಲ್ಲಿ ಗುರುವಾರ ನೆರೆ ಸಂತ್ರಸ್ತರು ಯಡಿಯೂರಪ್ಪ ಅವರನ್ನು ಭೇಟಿಯಾಗಲು ಬಂದಿದ್ದರು. ಅಲ್ಲಿ ಸೇರಿದ್ದ ಅಧಿಕಾರಿಗಳು, ಪೊಲೀಸರು ಹಾಗೂ ಜನಪ್ರತಿನಿಧಿಗಳನ್ನು ಕಂಡ ಅವರು ಮಾತನಾಡಿಸಲು ಹಿಂದೇಟು ಹಾಕಿದರು. ಇದನ್ನು ನೋಡಿದ ಯಡಿಯೂರಪ್ಪ ಅವರೇ ಸ್ವತಃ ಮುಂದೆ ಬಂದು, ತಮ್ಮ ಪರಿಚಯ ಮಾಡಿಕೊಂಡು, ಮಾತನಾಡಿಸಿದರು.