‘ಬೆಳಗಾವಿ ದೊಡ್ಡ ಜಿಲ್ಲೆಯಾಗಿದ್ದು, ಕೋವಿಡ್ ನಿರ್ವಹಣೆ ವೇಳೆ ತಾಲ್ಲೂಕು–ಜಿಲ್ಲಾಸ್ಪತ್ರೆ ನಡುವೆ ಯಾವ ರೀತಿ ಸಮನ್ವಯ ಸಾಧಿಸಲಾಗುತ್ತಿದೆ’ ಎಂಬ ಸಿ.ಎಂ ಪ್ರಶ್ನೆಗೆ, ‘ಮಾರ್ಗಸೂಚಿ ಪ್ರಕಾರವೇ ಸೋಂಕಿತರ ಪತ್ತೆ ಹಾಗೂ ಚಿಕಿತ್ಸೆ ನಡೆಯುತ್ತಿದೆ. ಸಮನ್ವಯ ಕೊರತೆ ಕಂಡುಬಂದಿಲ್ಲ. ಡಿಎಚ್ಒ, ಸರ್ವೇಕ್ಷಣಾಧಿಕಾರಿ, ಆರ್.ಸಿ.ಎಚ್. ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿದ್ದಾರೆ. ಕೆಲವೊಮ್ಮೆ ಔಷಧಿ ಪೂರೈಕೆ ವಿಳಂಬವಾಗಿದ್ದರೂ ತೊಂದರೆ ಆಗಿಲ್ಲ’ ಎಂದು ತಿಳಿಸಿದರು.