<p><strong>ಕಾಗವಾಡ:</strong> ಅಥಣಿ ತಾಲ್ಲೂಕಿನ ನಾಗನೂರು ಪಿಎ ಗ್ರಾಮದ ಸಂಜಯ ಕಾಂಬಳೆ ಎಂಬುವವರ ಇಬ್ಬರು ಮಕ್ಕಳು ಅಗ್ರಾಣಿ ಹಳ್ಳ ದಾಟುವ ವೇಳೆ ಮೃತಪಟ್ಟಿದ್ದು, ಶನಿವಾರ ಅವರ ಕುಟುಂಬವನ್ನು ಶಾಸಕ ರಾಜು ಕಾಗೆ ಭೇಟಿ ಮಾಡಿ ಸಾಂತ್ವನ ಹೇಳಿ ಪರಿಹಾರ ವಿತರಿಸಿದರು.</p>.<p>ಈ ದುರ್ಘಟನೆಯಲ್ಲಿ ನಾಗನೂರ ಪಿಎ ಗ್ರಾಮದ ಬಾಲಕರಾದ ಗಣೇಶ ಕಾಂಬಳೆ ಹಾಗೂ ದೀಪಕ ಕಾಂಬಳೆ ಇಬ್ಬರು ಮೃತಪಟ್ಟಿದ್ದರು. ಸಂಜಯಕಾಂಬಳೆಗೆ ಸೇರಿದ ಒಂದು ಎತ್ತು ಕೂಡ ಮೃತಪಟ್ಟಿತ್ತು. ಅವರ ಕುಟುಂಬಕ್ಕೆ ಸರ್ಕಾರದಿಂದ ₹ 10 ಲಕ್ಷ ಪರಿಹಾರದ ಆದೇಶ ಪ್ರತಿಯನ್ನು ಕುಟುಂಬಕ್ಕೆ ಶಾಸಕ ರಾಜು ಕಾಗೆ ಹಸ್ತಾಂತರಿಸಿದರು.</p>.<p>‘ಇಂದೇ ಮೃತ ಕುಟುಂಬಕ್ಕೆ ಪರಿಹಾರದ ಹಣ ಅವರ ಖಾತೆಗೆ ಜಮೆಯಾಗಲಿದೆ. ಈಗಾಗಲೇ ಈ ಹಳ್ಳಕ್ಕೆ ಸೇತುವೆ ಹಾಗೂ ರಸ್ತೆ ನಿರ್ಮಾಣ ಮಾಡಲು ನಾನು, ತಹಶೀಲ್ದಾರ್, ಪೊಲೀಸ್ ಇಲಾಖೆ ಅಧಿಕಾರಿಗಳು ಹಲವು ಬಾರಿ ಗ್ರಾಮಸ್ಥರ ಮನವೊಲಿಸಲು ಮುಂದಾದರೂ ರಸ್ತೆ ನಿರ್ಮಾಣಕ್ಕೆ ಸಹಕಾರ ನೀಡಿಲ್ಲ. ಈ ಘಟನೆಗೆ ಗ್ರಾಮಸ್ಥರೇ ನೇರ ಕಾರಣ. ಈಗಲಾದರೂ ಗ್ರಾಮಸ್ಥರು ಸೇತುವೆ ಮತ್ತು ರಸ್ತೆ ನಿರ್ಮಾಣಕ್ಕೆ ಸಹಕಾರ ನೀಡಬೇಕು’ ಎಂದರು. <br><br> ಈ ವೇಳೆ ತಹಶೀಲ್ದಾರ್ ಸಿದರಾಯ ಬೋಸಗಿ, ಪಂಚಾಯತ್ ರಾಜ್ ಎಇಇ ಈರಣ್ಣ ವಾಲಿ, ಮುಖಂಡರಾದ ವಿನಾಯಕ ಬಾಗಡಿ, ಖಂಡೇರಾವ ಘೋರ್ಪಡೆ ಸೇರಿದಂತೆ ಗ್ರಾಮದ ಮುಖಂಡರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾಗವಾಡ:</strong> ಅಥಣಿ ತಾಲ್ಲೂಕಿನ ನಾಗನೂರು ಪಿಎ ಗ್ರಾಮದ ಸಂಜಯ ಕಾಂಬಳೆ ಎಂಬುವವರ ಇಬ್ಬರು ಮಕ್ಕಳು ಅಗ್ರಾಣಿ ಹಳ್ಳ ದಾಟುವ ವೇಳೆ ಮೃತಪಟ್ಟಿದ್ದು, ಶನಿವಾರ ಅವರ ಕುಟುಂಬವನ್ನು ಶಾಸಕ ರಾಜು ಕಾಗೆ ಭೇಟಿ ಮಾಡಿ ಸಾಂತ್ವನ ಹೇಳಿ ಪರಿಹಾರ ವಿತರಿಸಿದರು.</p>.<p>ಈ ದುರ್ಘಟನೆಯಲ್ಲಿ ನಾಗನೂರ ಪಿಎ ಗ್ರಾಮದ ಬಾಲಕರಾದ ಗಣೇಶ ಕಾಂಬಳೆ ಹಾಗೂ ದೀಪಕ ಕಾಂಬಳೆ ಇಬ್ಬರು ಮೃತಪಟ್ಟಿದ್ದರು. ಸಂಜಯಕಾಂಬಳೆಗೆ ಸೇರಿದ ಒಂದು ಎತ್ತು ಕೂಡ ಮೃತಪಟ್ಟಿತ್ತು. ಅವರ ಕುಟುಂಬಕ್ಕೆ ಸರ್ಕಾರದಿಂದ ₹ 10 ಲಕ್ಷ ಪರಿಹಾರದ ಆದೇಶ ಪ್ರತಿಯನ್ನು ಕುಟುಂಬಕ್ಕೆ ಶಾಸಕ ರಾಜು ಕಾಗೆ ಹಸ್ತಾಂತರಿಸಿದರು.</p>.<p>‘ಇಂದೇ ಮೃತ ಕುಟುಂಬಕ್ಕೆ ಪರಿಹಾರದ ಹಣ ಅವರ ಖಾತೆಗೆ ಜಮೆಯಾಗಲಿದೆ. ಈಗಾಗಲೇ ಈ ಹಳ್ಳಕ್ಕೆ ಸೇತುವೆ ಹಾಗೂ ರಸ್ತೆ ನಿರ್ಮಾಣ ಮಾಡಲು ನಾನು, ತಹಶೀಲ್ದಾರ್, ಪೊಲೀಸ್ ಇಲಾಖೆ ಅಧಿಕಾರಿಗಳು ಹಲವು ಬಾರಿ ಗ್ರಾಮಸ್ಥರ ಮನವೊಲಿಸಲು ಮುಂದಾದರೂ ರಸ್ತೆ ನಿರ್ಮಾಣಕ್ಕೆ ಸಹಕಾರ ನೀಡಿಲ್ಲ. ಈ ಘಟನೆಗೆ ಗ್ರಾಮಸ್ಥರೇ ನೇರ ಕಾರಣ. ಈಗಲಾದರೂ ಗ್ರಾಮಸ್ಥರು ಸೇತುವೆ ಮತ್ತು ರಸ್ತೆ ನಿರ್ಮಾಣಕ್ಕೆ ಸಹಕಾರ ನೀಡಬೇಕು’ ಎಂದರು. <br><br> ಈ ವೇಳೆ ತಹಶೀಲ್ದಾರ್ ಸಿದರಾಯ ಬೋಸಗಿ, ಪಂಚಾಯತ್ ರಾಜ್ ಎಇಇ ಈರಣ್ಣ ವಾಲಿ, ಮುಖಂಡರಾದ ವಿನಾಯಕ ಬಾಗಡಿ, ಖಂಡೇರಾವ ಘೋರ್ಪಡೆ ಸೇರಿದಂತೆ ಗ್ರಾಮದ ಮುಖಂಡರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>