<p><strong>ಹುಕ್ಕೇರಿ</strong>: ‘ಸಹಕಾರ ತತ್ವದಡಿ ತಾಲ್ಲೂಕಿನ ಜನರಿಗೆ ವಿದ್ಯುತ್ ಸರಬರಾಜು ಮಾಡುವ ಸಂಘ ಸೇರಿದಂತೆ ರೈತಪರ ಸಹಕಾರ ಸಂಸ್ಥೆಗಳನ್ನು ಸ್ಥಾಪಿಸಿದ ಶ್ರೇಯಸ್ಸು ದಿ.ಅಪ್ಪಣಗೌಡ ಪಾಟೀಲ ಅವರಿಗೆ ಸಲ್ಲುತ್ತದೆ’ ಎಂದು ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘದ ನಿರ್ದೇಶಕ ಪೃಥ್ವಿ ಕತ್ತಿ ಹೇಳಿದರು.</p>.<p>ಸ್ಥಳೀಯ ವಿದ್ಯುತ್ ಸಹಕಾರ ಸಂಘದ ಆವರಣದಲ್ಲಿ ದಿ.ಅಪ್ಪಣ್ಣಗೌಡರ 51ನೇ ಪುಣ್ಯಸ್ಮರಣೆ ನಿಮಿತ್ಯ ಅವರ ಪುತ್ಥಳಿಗೆ ಗುರುವಾರ ಪೂಜೆ ಸಲ್ಲಿಸಿ ಮಾತನಾಡಿ, ‘ಅಪ್ಪಣಗೌಡರು ತಾಲ್ಲೂಕಿನಲ್ಲಿ ಸಹಕಾರ ಕ್ಷೇತ್ರಕ್ಕೆ ಭದ್ರಬುನಾದಿ ಹಾಕಿದ್ದಾರೆ’ ಎಂದರು.</p>.<p>‘ದೇಶದಲ್ಲಿ ಇಂತಹ 5 ಸಂಘಗಳನ್ನು ಅರವತ್ತರ ದೇಶಕದಲ್ಲಿ ಸ್ಥಾಪಿಸಲಾಯಿತು. ಆದರೆ ಅವು ಮುಚ್ಚಿಹೋಗಿ ಇದೊಂದು ಸಂಘ ಉಳಿದಿದೆ. ಇದಕ್ಕೆ ದಿ.ಅಪ್ಪಣ್ಣಗೌಡರ ನಿಸ್ವಾರ್ಥ ಮತ್ತು ಸಮಾಜಮುಖಿ ಕೆಲಸ ಕಾರಣ’ ಎಂದರು.</p>.<p>ಸಂಘದ ಉಪಾಧ್ಯಕ್ಷ ಅಜಿತ ಮುನ್ನೋಳಿ ಮತ್ತು ನಿರ್ದೇಶಕ ಕಲಗೌಡ ಪಾಟೀಲ ಹಾಗು ಸತ್ಯಪ್ಪ ನಾಯಿಕ ಮಾತನಾಡಿ, ಈ ಸಂಘದಿಂದ ಗ್ರಾಹಕರಿಗೆ ಗುಣಮಟ್ಟದ ಹಾಗೂ ತ್ವರಿತ ಸೇವೆ ಸಲ್ಲಿಸಲು ಅನುಕೂಲವಾಗಿದೆ. ಸಂಘ ಉಳಿಸಿ ಬೆಳೆಸಲು ಗ್ರಾಹಕರು ಬಾಕಿ ಬಿಲ್ ತುಂಬುವಂತೆ ವಿನಂತಿಸಿದರು.</p>.<p>ನಿರ್ದೇಶಕರಾದ ಕೆಂಪಣ್ಣ ವಾಸೇದಾರ, ಶಿವನಗೌಡ ಮದವಾಲ, ಮಹಾದೇವ ಕ್ಷೀರಸಾಗರ, ಶ್ರೀಮಂತ ಸನ್ನಾಯಿಕ, ಖಂಡರಾದ ಗೌಸ್ಆಜಂ ನಾಯಿಕವಾಡಿ, ಗುರುಸಿದ್ದ ಮೂಡಲಗಿ, ವ್ಯವಸ್ಥಾಪಕ ದುರದುಂಡಿ ನಾಯಿಕ, ಅಕೌಂಟ್ ಆಫೀಸರ ಎಸ್.ಎನ್.ಹಿರೇಮಠ, ಎಂಜನಿಯರುಗಳಾದ ಎನ್.ಜೆ.ಖೆಮಲಾಪುರೆ, ಎನ್.ಎಸ್.ಸರದೇಸಾಯಿ. ಉದಯ ಮಗದುಮ್ಮ, ಬಿ.ಎಂ.ಮಗದುಮ್ಮ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಕ್ಕೇರಿ</strong>: ‘ಸಹಕಾರ ತತ್ವದಡಿ ತಾಲ್ಲೂಕಿನ ಜನರಿಗೆ ವಿದ್ಯುತ್ ಸರಬರಾಜು ಮಾಡುವ ಸಂಘ ಸೇರಿದಂತೆ ರೈತಪರ ಸಹಕಾರ ಸಂಸ್ಥೆಗಳನ್ನು ಸ್ಥಾಪಿಸಿದ ಶ್ರೇಯಸ್ಸು ದಿ.ಅಪ್ಪಣಗೌಡ ಪಾಟೀಲ ಅವರಿಗೆ ಸಲ್ಲುತ್ತದೆ’ ಎಂದು ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘದ ನಿರ್ದೇಶಕ ಪೃಥ್ವಿ ಕತ್ತಿ ಹೇಳಿದರು.</p>.<p>ಸ್ಥಳೀಯ ವಿದ್ಯುತ್ ಸಹಕಾರ ಸಂಘದ ಆವರಣದಲ್ಲಿ ದಿ.ಅಪ್ಪಣ್ಣಗೌಡರ 51ನೇ ಪುಣ್ಯಸ್ಮರಣೆ ನಿಮಿತ್ಯ ಅವರ ಪುತ್ಥಳಿಗೆ ಗುರುವಾರ ಪೂಜೆ ಸಲ್ಲಿಸಿ ಮಾತನಾಡಿ, ‘ಅಪ್ಪಣಗೌಡರು ತಾಲ್ಲೂಕಿನಲ್ಲಿ ಸಹಕಾರ ಕ್ಷೇತ್ರಕ್ಕೆ ಭದ್ರಬುನಾದಿ ಹಾಕಿದ್ದಾರೆ’ ಎಂದರು.</p>.<p>‘ದೇಶದಲ್ಲಿ ಇಂತಹ 5 ಸಂಘಗಳನ್ನು ಅರವತ್ತರ ದೇಶಕದಲ್ಲಿ ಸ್ಥಾಪಿಸಲಾಯಿತು. ಆದರೆ ಅವು ಮುಚ್ಚಿಹೋಗಿ ಇದೊಂದು ಸಂಘ ಉಳಿದಿದೆ. ಇದಕ್ಕೆ ದಿ.ಅಪ್ಪಣ್ಣಗೌಡರ ನಿಸ್ವಾರ್ಥ ಮತ್ತು ಸಮಾಜಮುಖಿ ಕೆಲಸ ಕಾರಣ’ ಎಂದರು.</p>.<p>ಸಂಘದ ಉಪಾಧ್ಯಕ್ಷ ಅಜಿತ ಮುನ್ನೋಳಿ ಮತ್ತು ನಿರ್ದೇಶಕ ಕಲಗೌಡ ಪಾಟೀಲ ಹಾಗು ಸತ್ಯಪ್ಪ ನಾಯಿಕ ಮಾತನಾಡಿ, ಈ ಸಂಘದಿಂದ ಗ್ರಾಹಕರಿಗೆ ಗುಣಮಟ್ಟದ ಹಾಗೂ ತ್ವರಿತ ಸೇವೆ ಸಲ್ಲಿಸಲು ಅನುಕೂಲವಾಗಿದೆ. ಸಂಘ ಉಳಿಸಿ ಬೆಳೆಸಲು ಗ್ರಾಹಕರು ಬಾಕಿ ಬಿಲ್ ತುಂಬುವಂತೆ ವಿನಂತಿಸಿದರು.</p>.<p>ನಿರ್ದೇಶಕರಾದ ಕೆಂಪಣ್ಣ ವಾಸೇದಾರ, ಶಿವನಗೌಡ ಮದವಾಲ, ಮಹಾದೇವ ಕ್ಷೀರಸಾಗರ, ಶ್ರೀಮಂತ ಸನ್ನಾಯಿಕ, ಖಂಡರಾದ ಗೌಸ್ಆಜಂ ನಾಯಿಕವಾಡಿ, ಗುರುಸಿದ್ದ ಮೂಡಲಗಿ, ವ್ಯವಸ್ಥಾಪಕ ದುರದುಂಡಿ ನಾಯಿಕ, ಅಕೌಂಟ್ ಆಫೀಸರ ಎಸ್.ಎನ್.ಹಿರೇಮಠ, ಎಂಜನಿಯರುಗಳಾದ ಎನ್.ಜೆ.ಖೆಮಲಾಪುರೆ, ಎನ್.ಎಸ್.ಸರದೇಸಾಯಿ. ಉದಯ ಮಗದುಮ್ಮ, ಬಿ.ಎಂ.ಮಗದುಮ್ಮ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>