<p><strong>ಬೆಳಗಾವಿ</strong>: ಇಲ್ಲಿನ ಆರ್ಪಿಡಿ ಕಾಲೇಜಿನಲ್ಲಿ ಭಾನುವಾರ ನಡೆಯುವ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಮತ ಎಣಿಕೆ ಕಾರ್ಯಕ್ಕೆ ಬರುವವರ ವಾಹನಗಳ ಸಂಚಾರ ಹಾಗೂ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕೆ.ತ್ಯಾಗರಾಜನ್ ತಿಳಿಸಿದ್ದಾರೆ.</p>.<p><strong>* ಅಭ್ಯರ್ಥಿಗಳು</strong>: ಕಾಲೇಜಿನ 1ನೇ ಗೇಟ್ ಮೂಲಕ ಪ್ರವೇಶಿಸಿ ಆಫೀಸ್ ಕಟ್ಟಡದ ಸಮೀಪದ ಮೈದಾನದಲ್ಲಿ ನಿಲ್ಲಿಸಬೇಕು.</p>.<p><strong>* ಮಾಧ್ಯಮ ಪ್ರತಿನಿಧಿಗಳು:</strong> ಭಾಗ್ಯ ನಗರ 2ನೇ ಕ್ರಾಸ್– ಲೋಕಮಾನ್ಯ ಮಲ್ಟಿಪರ್ಪಸ್ ಕೋ-ಆಪ್ ಸೊಸೈಟಿ ದಾಟಿ ಎಡತಿರುವು ಪಡೆದು ಮಾವಿನ ತೋಟದ ಗೇಟ್ ಮೂಲಕ ಪ್ರವೇಶಿಸಿ, ನಿಗದಿತ ಸ್ಥಳದಲ್ಲಿ ನಿಲ್ಲಿಸಬೇಕು.</p>.<p>* ಏಜೆಂಟರು ಮತ್ತು ಎಣಿಕೆ ಕರ್ತವ್ಯಕ್ಕೆ ನಿಯೋಜಿತ ಅಧಿಕಾರಿ, ಸಿಬ್ಬಂದಿ: ಭಾಗ್ಯ ನಗರ 2ನೇ ಕ್ರಾಸ್– ಲೋಕಮಾನ್ಯ ಮಲ್ಟಿಪರ್ಪಸ್ ಕೋ-ಆಪ್ ಸೊಸೈಟಿ ದಾಟಿ ಎಡತಿರುವು ಪಡೆದು ಮಾವಿನ ತೋಟದ ಗೇಟ್ ಮೂಲಕ ಪ್ರವೇಶಿಸಿ, ಮೈದಾನದಲ್ಲಿ ವಾಹನಗಳನ್ನು ನಿಲ್ಲಿಸಬೇಕು.</p>.<p>* ಗೋವಾವೇಸ್ ವೃತ್ತದಿಂದ ಬಿಗ್ ಬಜಾರ್ ವೃತ್ತದವರೆಗಿನ ಅಟಲ್ ಬಿಹಾರಿ ವಾಜಪೇಯಿ ರಸ್ತೆಯಲ್ಲಿ ಎರಡೂ ಬದಿಯಲ್ಲಿ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ.</p>.<p>* ಶಹಾಪುರ ಹಾಗೂ ಗೋವಾವೇಸ್ ವೃತ್ತದಿಂದ ಆರ್ಪಿಡಿ ಕಾಲೇಜು ಮಾರ್ಗವಾಗಿ ಖಾನಾಪುರ, ಪೀರನವಾಡಿ ಕಡೆಗೆ ಸಂಚರಿಸುವ ಎಲ್ಲ ಮಾದರಿ ವಾಹಗಳು ಗೋವಾವೇಸ್ ಈಜುಕೊಳ್ಳ ರಸ್ತೆಯಲ್ಲಿ ಬಲ ತಿರುವು ಪಡೆದು 1ನೇ ರೈಲ್ವೆ ಗೇಟ್ನಿಂದ ಕಾಂಗ್ರೆಸ್ ರಸ್ತೆ ಸೇರಬೇಕು.</p>.<p>* ಮಹಾರಾಷ್ಟ್ರದಿಂದ ಗೋವಾಕ್ಕೆ ಹೋಗುವವರು ಹಿಂಡಾಲ್ಕೊ ಕೆಳಸೇತುವೆ–ಬಾಕ್ಸೈಟ್ ರಸ್ತೆ ಮೂಲಕ ಹಿಂಡಲಗಾ ಅರಣ್ಯ ಘಟಕ ನಾಕಾ, ಹಿಂಡಲಗಾ ಗಣೇಶ ಮಂದಿರ, ಗಾಂಧಿ ವೃತ್ತ, ಗ್ಲೋಬ್ ವೃತ್ತ– ಗೋಗಟೆ ವೃತ್ತದ ಮೂಲಕ ಕಾಂಗ್ರೆಸ್ ರಸ್ತೆ ಸೇರಿ ಸಾಗಬೇಕು.</p>.<p>* ಗೋವಾ ಕಡೆಯಿಂದ ಮಹಾರಾಷ್ಟ್ರ ಕಡೆಗೆ ಹೋಗಲು 3ನೇ ರೈಲ್ವೆ ಗೇಟ್ ಹತ್ತಿರ ಎಡತಿರುವು ಪಡೆದು ಕಾಂಗ್ರೆಸ್ ರಸ್ತೆ– ಗೋಗಟೆ ವೃತ್ತ– ಗಾಂಧಿ ವೃತ್ತ– ಹಿಂಡಲಗಾ ಗಣೇಶ ಮಂದಿರ, ಹಿಂಡಲಗಾ ಅರಣ್ಯ ಘಟಕ ನಾಕಾ, ಬಾಕ್ಸೈಟ್ ರಸ್ತೆ ಮೂಲಕ ಎನ್ಎಚ್–4 ಸೇರಬೇಕು.</p>.<p>* ಕೇಂದ್ರಕ್ಕೆ ಬರುವವರು ಮೊಬೈಲ್ ಫೋನ್, ಗುಟ್ಕಾ ಪಾಕೆಟ್, ಇಂಕ್ಪೆನ್, ಕ್ಯಾಮೆರಾ, ಬೆಂಕಿಪೊಟ್ಟಣ, ಸಿಗರೇಟ್, ಲೈಟರ್ ಮೊದಲಾದ ನಿಷೇಧಿತ ವಸ್ತುಗಳನ್ನು ತರುವಂತಿಲ್ಲ.</p>.<p>* 48 ಗಂಟೆಗಿಂತ ಹಳೆಯದಲ್ಲದ ಕೋವಿಡ್ ನೆಗೆಟಿವ್ ವರದಿ ಕಡ್ಡಾಯ.</p>.<p>* ಗುರುತಿನ ಚೀಟಿ/ಪಾಸ್ ತರಬೇಕು. ಕೋವಿಡ್–19 ನಿಯಮಾವಳಿ ಕಟ್ಟುನಿಟ್ಟಾಗಿ ಪಾಲಿಸಬೇಕು. ಸೂಚಿಸಿದ ಮಾರ್ಗದಲ್ಲೇ ಸಂಚರಿಸಬೇಕು.</p>.<p>* ಮತ ಎಣಿಕೆ ಸಂದರ್ಭದಲ್ಲಿ ಕೇಂದ್ರದ ಸುತ್ತಮುತ್ತ ಜನರು ಜಮಾವಣೆ ಆಗುವುದನ್ನು ನಿಷೇಧಿಸಲಾಗಿದೆ. ವಿಜಯೋತ್ಸವಕ್ಕೆ ಅವಕಾಶವಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ</strong>: ಇಲ್ಲಿನ ಆರ್ಪಿಡಿ ಕಾಲೇಜಿನಲ್ಲಿ ಭಾನುವಾರ ನಡೆಯುವ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಮತ ಎಣಿಕೆ ಕಾರ್ಯಕ್ಕೆ ಬರುವವರ ವಾಹನಗಳ ಸಂಚಾರ ಹಾಗೂ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕೆ.ತ್ಯಾಗರಾಜನ್ ತಿಳಿಸಿದ್ದಾರೆ.</p>.<p><strong>* ಅಭ್ಯರ್ಥಿಗಳು</strong>: ಕಾಲೇಜಿನ 1ನೇ ಗೇಟ್ ಮೂಲಕ ಪ್ರವೇಶಿಸಿ ಆಫೀಸ್ ಕಟ್ಟಡದ ಸಮೀಪದ ಮೈದಾನದಲ್ಲಿ ನಿಲ್ಲಿಸಬೇಕು.</p>.<p><strong>* ಮಾಧ್ಯಮ ಪ್ರತಿನಿಧಿಗಳು:</strong> ಭಾಗ್ಯ ನಗರ 2ನೇ ಕ್ರಾಸ್– ಲೋಕಮಾನ್ಯ ಮಲ್ಟಿಪರ್ಪಸ್ ಕೋ-ಆಪ್ ಸೊಸೈಟಿ ದಾಟಿ ಎಡತಿರುವು ಪಡೆದು ಮಾವಿನ ತೋಟದ ಗೇಟ್ ಮೂಲಕ ಪ್ರವೇಶಿಸಿ, ನಿಗದಿತ ಸ್ಥಳದಲ್ಲಿ ನಿಲ್ಲಿಸಬೇಕು.</p>.<p>* ಏಜೆಂಟರು ಮತ್ತು ಎಣಿಕೆ ಕರ್ತವ್ಯಕ್ಕೆ ನಿಯೋಜಿತ ಅಧಿಕಾರಿ, ಸಿಬ್ಬಂದಿ: ಭಾಗ್ಯ ನಗರ 2ನೇ ಕ್ರಾಸ್– ಲೋಕಮಾನ್ಯ ಮಲ್ಟಿಪರ್ಪಸ್ ಕೋ-ಆಪ್ ಸೊಸೈಟಿ ದಾಟಿ ಎಡತಿರುವು ಪಡೆದು ಮಾವಿನ ತೋಟದ ಗೇಟ್ ಮೂಲಕ ಪ್ರವೇಶಿಸಿ, ಮೈದಾನದಲ್ಲಿ ವಾಹನಗಳನ್ನು ನಿಲ್ಲಿಸಬೇಕು.</p>.<p>* ಗೋವಾವೇಸ್ ವೃತ್ತದಿಂದ ಬಿಗ್ ಬಜಾರ್ ವೃತ್ತದವರೆಗಿನ ಅಟಲ್ ಬಿಹಾರಿ ವಾಜಪೇಯಿ ರಸ್ತೆಯಲ್ಲಿ ಎರಡೂ ಬದಿಯಲ್ಲಿ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ.</p>.<p>* ಶಹಾಪುರ ಹಾಗೂ ಗೋವಾವೇಸ್ ವೃತ್ತದಿಂದ ಆರ್ಪಿಡಿ ಕಾಲೇಜು ಮಾರ್ಗವಾಗಿ ಖಾನಾಪುರ, ಪೀರನವಾಡಿ ಕಡೆಗೆ ಸಂಚರಿಸುವ ಎಲ್ಲ ಮಾದರಿ ವಾಹಗಳು ಗೋವಾವೇಸ್ ಈಜುಕೊಳ್ಳ ರಸ್ತೆಯಲ್ಲಿ ಬಲ ತಿರುವು ಪಡೆದು 1ನೇ ರೈಲ್ವೆ ಗೇಟ್ನಿಂದ ಕಾಂಗ್ರೆಸ್ ರಸ್ತೆ ಸೇರಬೇಕು.</p>.<p>* ಮಹಾರಾಷ್ಟ್ರದಿಂದ ಗೋವಾಕ್ಕೆ ಹೋಗುವವರು ಹಿಂಡಾಲ್ಕೊ ಕೆಳಸೇತುವೆ–ಬಾಕ್ಸೈಟ್ ರಸ್ತೆ ಮೂಲಕ ಹಿಂಡಲಗಾ ಅರಣ್ಯ ಘಟಕ ನಾಕಾ, ಹಿಂಡಲಗಾ ಗಣೇಶ ಮಂದಿರ, ಗಾಂಧಿ ವೃತ್ತ, ಗ್ಲೋಬ್ ವೃತ್ತ– ಗೋಗಟೆ ವೃತ್ತದ ಮೂಲಕ ಕಾಂಗ್ರೆಸ್ ರಸ್ತೆ ಸೇರಿ ಸಾಗಬೇಕು.</p>.<p>* ಗೋವಾ ಕಡೆಯಿಂದ ಮಹಾರಾಷ್ಟ್ರ ಕಡೆಗೆ ಹೋಗಲು 3ನೇ ರೈಲ್ವೆ ಗೇಟ್ ಹತ್ತಿರ ಎಡತಿರುವು ಪಡೆದು ಕಾಂಗ್ರೆಸ್ ರಸ್ತೆ– ಗೋಗಟೆ ವೃತ್ತ– ಗಾಂಧಿ ವೃತ್ತ– ಹಿಂಡಲಗಾ ಗಣೇಶ ಮಂದಿರ, ಹಿಂಡಲಗಾ ಅರಣ್ಯ ಘಟಕ ನಾಕಾ, ಬಾಕ್ಸೈಟ್ ರಸ್ತೆ ಮೂಲಕ ಎನ್ಎಚ್–4 ಸೇರಬೇಕು.</p>.<p>* ಕೇಂದ್ರಕ್ಕೆ ಬರುವವರು ಮೊಬೈಲ್ ಫೋನ್, ಗುಟ್ಕಾ ಪಾಕೆಟ್, ಇಂಕ್ಪೆನ್, ಕ್ಯಾಮೆರಾ, ಬೆಂಕಿಪೊಟ್ಟಣ, ಸಿಗರೇಟ್, ಲೈಟರ್ ಮೊದಲಾದ ನಿಷೇಧಿತ ವಸ್ತುಗಳನ್ನು ತರುವಂತಿಲ್ಲ.</p>.<p>* 48 ಗಂಟೆಗಿಂತ ಹಳೆಯದಲ್ಲದ ಕೋವಿಡ್ ನೆಗೆಟಿವ್ ವರದಿ ಕಡ್ಡಾಯ.</p>.<p>* ಗುರುತಿನ ಚೀಟಿ/ಪಾಸ್ ತರಬೇಕು. ಕೋವಿಡ್–19 ನಿಯಮಾವಳಿ ಕಟ್ಟುನಿಟ್ಟಾಗಿ ಪಾಲಿಸಬೇಕು. ಸೂಚಿಸಿದ ಮಾರ್ಗದಲ್ಲೇ ಸಂಚರಿಸಬೇಕು.</p>.<p>* ಮತ ಎಣಿಕೆ ಸಂದರ್ಭದಲ್ಲಿ ಕೇಂದ್ರದ ಸುತ್ತಮುತ್ತ ಜನರು ಜಮಾವಣೆ ಆಗುವುದನ್ನು ನಿಷೇಧಿಸಲಾಗಿದೆ. ವಿಜಯೋತ್ಸವಕ್ಕೆ ಅವಕಾಶವಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>