ಇಲ್ಲಿನ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಜನರಿಗೊಂದು ನಿಯಮ, ಬಿಜೆಪಿಯವರಿಗೊಂದು ನಿಯಮ ಇಲ್ಲ. ಕೇಂದ್ರ ಗೃಹ ಸಚಿವ ಅಮಿತ್ ಶಾ ಸಮಾವೇಶಕ್ಕೆ ಜಿಲ್ಲಾ ಕ್ರೀಡಾಂಗಣದಲ್ಲಿ 3–4 ಲಕ್ಷ ಜನ ಸೇರಿಸುವುದಾಗಿ ಹೇಳುತ್ತಿದ್ದಾರೆ. ಅಲ್ಲಿ ಗರಿಷ್ಠ 50ಸಾವಿರ ಮಂದಿ ಸೇರಿಸಬಹುದು. ಇದೂ ಕೋವಿಡ್ ನಿಯಮ ಉಲ್ಲಂಘಿಸಿದಂತಾಗುತ್ತದೆ. ಸರ್ಕಾರವು ಮಾರ್ಗಸೂಚಿ ಹಿಂಪಡೆಯಬೇಕು ಅಥವಾ ಸಮಾವೇಶ ರದ್ದುಪಡಿಸಬೇಕು’ ಎಂದು ಒತ್ತಾಯಿಸಿದರು.