ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್ ಸಂಕಷ್ಟ ನೆನೆದು ಭಾವುಕರಾದ ಐಹೊಳೆ

Last Updated 16 ಜನವರಿ 2021, 14:32 IST
ಅಕ್ಷರ ಗಾತ್ರ

ರಾಯಬಾಗ: ಪಟ್ಟಣದ ತಾಲ್ಲೂಕು ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ಕಾರ್ಯಕ್ರಮಕ್ಕೆ ಶಾಸಕ ಡಿ.ಎಂ. ಐಹೊಳೆ ಶನಿವಾರ ಚಾಲನೆ ನೀಡಿದರು.

ಕೊರೊನಾ ಸೇನಾನಿ ಡಾ.ರಮೇಶ ರಂಗಣ್ಣವರ ಮೊದಲ ಲಸಿಕೆ ಪಡೆದರು.

ಈ ವೇಳೆ ಮಾತನಾಡಿದ ಶಾಸಕರು, ‘ದೇಶದಾದ್ಯಂತ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿರುವ ಪ್ರಧಾನಿ ಮೋದಿ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ಹೊಂದಿದ ರಾಷ್ಟ್ರದಲ್ಲಿ ಜನರ ಆರೋಗ್ಯದ ಬಗ್ಗೆ ಮೋದಿ ಕಾಳಜಿ ವಹಿಸಿದ್ದಾರೆ’ ಎಂದರು.

ಲಾಕ್‌ಡೌನ್‌ ಸಂದರ್ಭ ಜನರು ಅನುಭವಿಸಿದ ಸಂಕಷ್ಟ ನೆನೆದು ಭಾವುಕರಾದರು.

ತಾ.ಪಂ. ಅಧ್ಯಕ್ಷೆ ಸುಜಾತಾ ಪಾಟೀಲ, ತಹಶೀಲ್ದಾರ್ ನೇಮಿನಾಥ ಗೆಜ್ಜೆ, ತಾಲ್ಲೂಕು ವೈದ್ಯಾಧಿಕಾರಿ ಡಾ.ಎಸ್.ಎಸ್. ಬಾನೆ, ಸಿಪಿಐ ಕೆ.ಎಸ್. ಹಟ್ಟಿ, ತಾ.ಪಂ. ಇಒ ಪ್ರಕಾಶ ವಡ್ಡರ, ಬಿಇಒ ಪ್ರಭಾವತಿ ಪಾಟೀಲ, ಟಿಎಚ್‌ಒ ಶಂಕರಗೌಡ ಪಾಟೀಲ, ಡಾ.ಸಂಧ್ಯಾ ಪಾಟೀಲ, ಡಾ.ರಾಘವ ರಾವಳಕರ, ಡಾ.ವಿನೋದ್ ಗಸ್ತಿ, ಡಾ.ಸದಾಶಿವ ಖಣದಾಳೆ, ಎಸ್.ಎಸ್. ಕಾಂಬಳೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT