<p><strong>ಕಾಗವಾಡ</strong>:‘ದಲಿತರು ಆರ್ಥಿಕವಾಗಿ ಸದೃಢವಾಗಬೇಕು. ಇಂದಿನ ಪೀಳಿಗೆಯನ್ನು ಸಾಮಾಜಿಕ,ರಾಜಕೀಯ ಮತ್ತು ಆರ್ಥಿಕವಾಗಿ ಸಧೃಢಗೊಳಿಸುವಲ್ಲಿ ಎಲ್ಲರ ಪಾತ್ರ ಬಹುಮುಖ್ಯವಾಗಿದೆ’ ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರ ಮರಿಮೊಮ್ಮಗ ಡಾ.ಬಿ.ಆರ್.ಅಂಬೇಡ್ಕರ್ ಮಲ್ಟಿ ಸ್ಟೇಟ್ ಕೋ ಆಪ್ ಕ್ರೇಡಿಟ್ ಸೊಸೈಟಿ ಅಧ್ಯಕ್ಷ ರಾಜರತ್ನ ಅಂಬೇಡ್ಕರ್ ಹೇಳಿದರು.<br><br>ಪಟ್ಟಣದ ಅಮ್ರಪಾಲಿ ಬುದ್ದ ವಿಹಾರದ ಆವರಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಮೂರ್ತಿ ಅನಾವರಣಗೊಳಿಸಿ ‘ನಮ್ಮ ನಡೆ ಆರ್ಥಿಕ ಉನ್ನತಿ ಕಡೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅವರು ಮುಂದೆ ಮಾತನಾಡುತ್ತಾ, ಇಂದಿನ ಪೀಳಿಗೆಯನ್ನು ಸಾಮಾಜಿಕ,ರಾಜಕೀಯ ಮತ್ತು ಆರ್ಥಿಕವಾಗಿ ಸಧೃಢಗೊಳಿಸುವಲ್ಲಿ ಎಲ್ಲರ ಪಾತ್ರ ಬಹುಮುಖ್ಯವಾಗಿದೆ ಎಂದರು.<br><br>‘ಬಾಬಾಸಾಹೇಬ್ ಅಂಬೇಡ್ಕರ್ ಅವರು ಬರೆದ ಪ್ರಾಬ್ಲಮ್ ಆಪ್ ರೂಪೆ ಪುಸ್ತಕವನ್ನ ಓದಿ ಬ್ರಾಹ್ಮಣರು 58 ಬ್ಯಾಂಕ್ ಸ್ಥಾಪನೆ ಮಾಡಿ ಇವತ್ತಿಗೆ ನೂರು ವರ್ಷ ಕಳೆದಿದೆ. ಅದರಿಂದ ಅವರು ಆರ್ಥಿಕ ಉನ್ನತಿ ಪಡೆದಿದ್ದಾರೆ. ಆದರೆ ನಾವು ಇನ್ನೂ ಆರ್ಥಿಕತೆಯಲ್ಲಿ ಹಿಂದುಳಿದ್ದೇವೆ. ಇದು ಎಂತಹ ವಿಪರ್ಯಾಸವಾಗಿದೆ’ ಎಂದರು.</p>.<p>‘ಕೇಂದ್ರ ಸರ್ಕಾರ ಬ್ಯಾಂಕುಗಳ ಮೂಲಕ ಅದಾನಿ, ಅಂಬಾನಿಯವರ ₹62,000 ಸಾವಿರ ಕೋಟಿ ಮನ್ನಾ ಮಾಡಿದೆ. ಆದರೆ ದಲಿತ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ₹30 ಲಕ್ಷ ಸಾಲ ಕೇಳಿದರೆ ನಿರಾಕರಣೆ ಮಾಡಲಿದೆ. ಅಷ್ಟೇ ಅಲ್ಲದೇ ಕೇಂದ್ರ ಸರ್ಕಾರ ಎಲ್ಲ ಕ್ಷೇತ್ರಗಳಲ್ಲಿ ಖಾಸಗೀಕರಣ ಮಾಡಿ ದಲಿತರು ಅಧೋಗತಿಗೆ ಬಂದು ನಿಲ್ಲುವ ಪರಿಸ್ಥಿತಿ ತಂದೊಡ್ಡಿದ್ದಾರೆ. ಹೀಗಾಗಿ ದಲಿತ ವರ್ಗ ಆರ್ಥಿಕವಾಗಿ ಮುನ್ನುಗ್ಗಬೇಕೆನ್ನುವ ಉದ್ದೇಶದಿಂದ ಡಾ.ಬಿ.ಆರ್.ಅಂಬೇಡ್ಕರ್ ಮಲ್ಟಿ ಸ್ಟೇಟ್ ಕೋ ಆಪ್ ಕ್ರೇಡಿಟ್ ಸೊಸೈಟಿ ಪ್ರಾರಂಭ ಮಾಡಿದ್ದೇನೆ’ ಎಂದರು.<br><br>ಪ್ರಾಚಾರ್ಯ ಡಾ.ಯಶ್ ಕಶ್ಯಪ್ ಯನ ಮಹಾಸ್ತಾವೀರ, ವೈಶಾಲಿ ಬುದ್ದ ವಿಹಾರ ಜಯಸಿಂಗಪೂರ, ನಾಗರತ್ನ ಭಂತೇಜಿ, ಭಂತೇ ಜ್ಞಾನಜ್ಯೋತಿ ಧಮ್ಮ ಭೂಮಿ ಗೂಗವಾಡ, ಆಚಾರ್ಯ ಭಿಕ್ಕು ಗೋವಿಂದೋ, ಎಐಜಿ ಪೌಂಢೇಷನ್ ಸಂಸ್ಥಾಪಕ ಅರವಿಂದ ಘಟ್ಟಿ, ಅನೀಲ ಪ್ರಧಾನ,ಲಖನ ವರ್ಧನ, ಭಾಸ್ಕರ್ ಸಾವಂತ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾಗವಾಡ</strong>:‘ದಲಿತರು ಆರ್ಥಿಕವಾಗಿ ಸದೃಢವಾಗಬೇಕು. ಇಂದಿನ ಪೀಳಿಗೆಯನ್ನು ಸಾಮಾಜಿಕ,ರಾಜಕೀಯ ಮತ್ತು ಆರ್ಥಿಕವಾಗಿ ಸಧೃಢಗೊಳಿಸುವಲ್ಲಿ ಎಲ್ಲರ ಪಾತ್ರ ಬಹುಮುಖ್ಯವಾಗಿದೆ’ ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರ ಮರಿಮೊಮ್ಮಗ ಡಾ.ಬಿ.ಆರ್.ಅಂಬೇಡ್ಕರ್ ಮಲ್ಟಿ ಸ್ಟೇಟ್ ಕೋ ಆಪ್ ಕ್ರೇಡಿಟ್ ಸೊಸೈಟಿ ಅಧ್ಯಕ್ಷ ರಾಜರತ್ನ ಅಂಬೇಡ್ಕರ್ ಹೇಳಿದರು.<br><br>ಪಟ್ಟಣದ ಅಮ್ರಪಾಲಿ ಬುದ್ದ ವಿಹಾರದ ಆವರಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಮೂರ್ತಿ ಅನಾವರಣಗೊಳಿಸಿ ‘ನಮ್ಮ ನಡೆ ಆರ್ಥಿಕ ಉನ್ನತಿ ಕಡೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅವರು ಮುಂದೆ ಮಾತನಾಡುತ್ತಾ, ಇಂದಿನ ಪೀಳಿಗೆಯನ್ನು ಸಾಮಾಜಿಕ,ರಾಜಕೀಯ ಮತ್ತು ಆರ್ಥಿಕವಾಗಿ ಸಧೃಢಗೊಳಿಸುವಲ್ಲಿ ಎಲ್ಲರ ಪಾತ್ರ ಬಹುಮುಖ್ಯವಾಗಿದೆ ಎಂದರು.<br><br>‘ಬಾಬಾಸಾಹೇಬ್ ಅಂಬೇಡ್ಕರ್ ಅವರು ಬರೆದ ಪ್ರಾಬ್ಲಮ್ ಆಪ್ ರೂಪೆ ಪುಸ್ತಕವನ್ನ ಓದಿ ಬ್ರಾಹ್ಮಣರು 58 ಬ್ಯಾಂಕ್ ಸ್ಥಾಪನೆ ಮಾಡಿ ಇವತ್ತಿಗೆ ನೂರು ವರ್ಷ ಕಳೆದಿದೆ. ಅದರಿಂದ ಅವರು ಆರ್ಥಿಕ ಉನ್ನತಿ ಪಡೆದಿದ್ದಾರೆ. ಆದರೆ ನಾವು ಇನ್ನೂ ಆರ್ಥಿಕತೆಯಲ್ಲಿ ಹಿಂದುಳಿದ್ದೇವೆ. ಇದು ಎಂತಹ ವಿಪರ್ಯಾಸವಾಗಿದೆ’ ಎಂದರು.</p>.<p>‘ಕೇಂದ್ರ ಸರ್ಕಾರ ಬ್ಯಾಂಕುಗಳ ಮೂಲಕ ಅದಾನಿ, ಅಂಬಾನಿಯವರ ₹62,000 ಸಾವಿರ ಕೋಟಿ ಮನ್ನಾ ಮಾಡಿದೆ. ಆದರೆ ದಲಿತ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ₹30 ಲಕ್ಷ ಸಾಲ ಕೇಳಿದರೆ ನಿರಾಕರಣೆ ಮಾಡಲಿದೆ. ಅಷ್ಟೇ ಅಲ್ಲದೇ ಕೇಂದ್ರ ಸರ್ಕಾರ ಎಲ್ಲ ಕ್ಷೇತ್ರಗಳಲ್ಲಿ ಖಾಸಗೀಕರಣ ಮಾಡಿ ದಲಿತರು ಅಧೋಗತಿಗೆ ಬಂದು ನಿಲ್ಲುವ ಪರಿಸ್ಥಿತಿ ತಂದೊಡ್ಡಿದ್ದಾರೆ. ಹೀಗಾಗಿ ದಲಿತ ವರ್ಗ ಆರ್ಥಿಕವಾಗಿ ಮುನ್ನುಗ್ಗಬೇಕೆನ್ನುವ ಉದ್ದೇಶದಿಂದ ಡಾ.ಬಿ.ಆರ್.ಅಂಬೇಡ್ಕರ್ ಮಲ್ಟಿ ಸ್ಟೇಟ್ ಕೋ ಆಪ್ ಕ್ರೇಡಿಟ್ ಸೊಸೈಟಿ ಪ್ರಾರಂಭ ಮಾಡಿದ್ದೇನೆ’ ಎಂದರು.<br><br>ಪ್ರಾಚಾರ್ಯ ಡಾ.ಯಶ್ ಕಶ್ಯಪ್ ಯನ ಮಹಾಸ್ತಾವೀರ, ವೈಶಾಲಿ ಬುದ್ದ ವಿಹಾರ ಜಯಸಿಂಗಪೂರ, ನಾಗರತ್ನ ಭಂತೇಜಿ, ಭಂತೇ ಜ್ಞಾನಜ್ಯೋತಿ ಧಮ್ಮ ಭೂಮಿ ಗೂಗವಾಡ, ಆಚಾರ್ಯ ಭಿಕ್ಕು ಗೋವಿಂದೋ, ಎಐಜಿ ಪೌಂಢೇಷನ್ ಸಂಸ್ಥಾಪಕ ಅರವಿಂದ ಘಟ್ಟಿ, ಅನೀಲ ಪ್ರಧಾನ,ಲಖನ ವರ್ಧನ, ಭಾಸ್ಕರ್ ಸಾವಂತ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>