<p><strong>ಬೆಳಗಾವಿ: </strong>ನಗರದ ಹಳೆಯ ಸಗಟು ತರಕಾರಿ ಮಾರುಕಟ್ಟೆಯಲ್ಲೇ ಮಳಿಗೆಗಳನ್ನು ಆರಂಭಿಸಿ ವ್ಯಾಪಾರ ನಡೆಸಲು ಅನುಕೂಲ ಕಲ್ಪಿಸಬೇಕು ಎಂದು ಆಗ್ರಹಿಸಿ ವ್ಯಾಪಾರಸ್ಥರುಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ಮಾಡಿದರು.</p>.<p>‘ಎಪಿಎಂಸಿ ಆವರಣದಲ್ಲಿ ನಿರ್ಮಿಸಲಾಗಿರುವ ಸಗಟು ತರಕಾರಿ ಮಾರುಕಟ್ಟೆಯಲ್ಲಿ ಕೆಲವೇ ಜನರಿಗೆ ಮಾತ್ರ ಮಳಿಗಳು ಲಭ್ಯವಾಗಿವೆ. ಆದರೆ, ಇನ್ನುಳಿದ ವ್ಯಾಪಾರಿಗಳಿಗೆ 6 ತಿಂಗಳ ಬಳಿಕ ಹೊಸ ಅಂಗಡಿ ಆರಂಭಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ, ಯಾರಿಗೆ ಅಂಗಡಿಗಳು ಸಿಕ್ಕಿಲ್ಲವೋ ಅವರಿಗೆ ಹಳೆಯ ಮಾರುಕಟ್ಟೆಯಲ್ಲಿ ಮಳಿಗೆ ಆರಂಭಿಸಲು ಅನುಮತಿ ನೀಡಬೇಕು’ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.</p>.<p>‘ಎಪಿಎಂಸಿಯಲ್ಲಿ ವ್ಯಾಪಾರ ನಡೆಸುವವರ ಅಂಗಡಿಗಳು ರವಿವಾರ ಪೇಟೆಯಲ್ಲಿಯೂ ಇವೆ. ಹೀಗಾಗಿ, ನಮಗೂ ಬೇರೆ ಕಡೆ ಅವಕಾಶ ಮಾಡಿಕೊಡಬೇಕು. ಹಳೆಯ ಮಾರುಕಟ್ಟೆ ನಗರದ ಮಧ್ಯ ಭಾಗದಲ್ಲಿದ್ದು, ತರಕಾರಿ ಮಾರಾಟ ಹಾಗೂ ಖರೀದಿಗೆ ಅತ್ಯಂತ ಸೂಕ್ತ ಸ್ಥಳವಾಗಿದೆ.ಹೊಸ ಮಾರುಕಟ್ಟೆ ನಗರದಿಂದ 7–8 ಕಿ.ಮೀ. ದೂರದಲ್ಲಿದೆ. ಇದರಿಂದ ಅಲ್ಲಿ ಹೋಗಿ–ಬರುಲು ಸಮಸ್ಯೆಯಾಗುತ್ತಿದೆ. ವಾಹನಗಳಲ್ಲಿ ತರಕಾರಿ ತೆಗೆದುಕೊಂಡು ಹೋಗಲು ಹೆಚ್ಚು ಬಾಡಿಗೆ ನೀಡಬೇಕಾಗಿರುವುದರಿಂದ ರೈತರು ಕೂಡ ತೊಂದರೆ ಅನುಭವಿಸುತ್ತಿದ್ದಾರೆ’ ಎಂದು ಆರೋಪಿಸಿದರು.</p>.<p>ವ್ಯಾಪಾರಿಗಳಾದ ಆರ್.ಕೆ. ಪಾವಸೆ,ಜಮೀರುದ್ದಿನ್ ಹಂಚಿನಮನಿ, ಕುಮಾರ ಜೋಶಿ,ಸಂಜಯ ಪಾಟೀಲ,ಇಸ್ಮಾಯಿಲ್ ಬಾಗವಾನ್, ಆಸಿಫ್ ಹಂಚಿನಮನಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ: </strong>ನಗರದ ಹಳೆಯ ಸಗಟು ತರಕಾರಿ ಮಾರುಕಟ್ಟೆಯಲ್ಲೇ ಮಳಿಗೆಗಳನ್ನು ಆರಂಭಿಸಿ ವ್ಯಾಪಾರ ನಡೆಸಲು ಅನುಕೂಲ ಕಲ್ಪಿಸಬೇಕು ಎಂದು ಆಗ್ರಹಿಸಿ ವ್ಯಾಪಾರಸ್ಥರುಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ಮಾಡಿದರು.</p>.<p>‘ಎಪಿಎಂಸಿ ಆವರಣದಲ್ಲಿ ನಿರ್ಮಿಸಲಾಗಿರುವ ಸಗಟು ತರಕಾರಿ ಮಾರುಕಟ್ಟೆಯಲ್ಲಿ ಕೆಲವೇ ಜನರಿಗೆ ಮಾತ್ರ ಮಳಿಗಳು ಲಭ್ಯವಾಗಿವೆ. ಆದರೆ, ಇನ್ನುಳಿದ ವ್ಯಾಪಾರಿಗಳಿಗೆ 6 ತಿಂಗಳ ಬಳಿಕ ಹೊಸ ಅಂಗಡಿ ಆರಂಭಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ, ಯಾರಿಗೆ ಅಂಗಡಿಗಳು ಸಿಕ್ಕಿಲ್ಲವೋ ಅವರಿಗೆ ಹಳೆಯ ಮಾರುಕಟ್ಟೆಯಲ್ಲಿ ಮಳಿಗೆ ಆರಂಭಿಸಲು ಅನುಮತಿ ನೀಡಬೇಕು’ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.</p>.<p>‘ಎಪಿಎಂಸಿಯಲ್ಲಿ ವ್ಯಾಪಾರ ನಡೆಸುವವರ ಅಂಗಡಿಗಳು ರವಿವಾರ ಪೇಟೆಯಲ್ಲಿಯೂ ಇವೆ. ಹೀಗಾಗಿ, ನಮಗೂ ಬೇರೆ ಕಡೆ ಅವಕಾಶ ಮಾಡಿಕೊಡಬೇಕು. ಹಳೆಯ ಮಾರುಕಟ್ಟೆ ನಗರದ ಮಧ್ಯ ಭಾಗದಲ್ಲಿದ್ದು, ತರಕಾರಿ ಮಾರಾಟ ಹಾಗೂ ಖರೀದಿಗೆ ಅತ್ಯಂತ ಸೂಕ್ತ ಸ್ಥಳವಾಗಿದೆ.ಹೊಸ ಮಾರುಕಟ್ಟೆ ನಗರದಿಂದ 7–8 ಕಿ.ಮೀ. ದೂರದಲ್ಲಿದೆ. ಇದರಿಂದ ಅಲ್ಲಿ ಹೋಗಿ–ಬರುಲು ಸಮಸ್ಯೆಯಾಗುತ್ತಿದೆ. ವಾಹನಗಳಲ್ಲಿ ತರಕಾರಿ ತೆಗೆದುಕೊಂಡು ಹೋಗಲು ಹೆಚ್ಚು ಬಾಡಿಗೆ ನೀಡಬೇಕಾಗಿರುವುದರಿಂದ ರೈತರು ಕೂಡ ತೊಂದರೆ ಅನುಭವಿಸುತ್ತಿದ್ದಾರೆ’ ಎಂದು ಆರೋಪಿಸಿದರು.</p>.<p>ವ್ಯಾಪಾರಿಗಳಾದ ಆರ್.ಕೆ. ಪಾವಸೆ,ಜಮೀರುದ್ದಿನ್ ಹಂಚಿನಮನಿ, ಕುಮಾರ ಜೋಶಿ,ಸಂಜಯ ಪಾಟೀಲ,ಇಸ್ಮಾಯಿಲ್ ಬಾಗವಾನ್, ಆಸಿಫ್ ಹಂಚಿನಮನಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>