ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಬೆಳಗಾವಿ | ವಂದೇ ಭಾರತ್‌: ಸಮಯ ಹೊಂದಾಣಿಕೆಗೆ ಕಸರತ್ತು

ಇನ್ನೂ ಬೆಳಗಾವಿ ತಲುಪದ ಬೆಂಗಳೂರು– ಧಾರವಾಡ ರೈಲು
Published : 18 ಏಪ್ರಿಲ್ 2025, 5:46 IST
Last Updated : 18 ಏಪ್ರಿಲ್ 2025, 5:46 IST
ಫಾಲೋ ಮಾಡಿ
Comments
ಜಗದೀಶ ಶೆಟ್ಟರ್‌
ಜಗದೀಶ ಶೆಟ್ಟರ್‌
ಬೆಳಗಿನ ಅವಧಿಯಲ್ಲೇ ಬೆಳಗಾವಿಯಿಂದ ಬೆಂಗಳೂರಿಗೆ ವಂದೇ ಭಾರತ್‌ ರೈಲಿನ ಸೇವೆ ಸಿಕ್ಕರೆ ಬಹಳ ಅನುಕೂಲವಾಗುತ್ತದೆ
ಅಮನ್‌ ನದಾಫ್‌ ಉದ್ಯಮಿ
ಸಮಯ ಹೊಂದಿಸುವುದೇ ಕಷ್ಟ
‘ಬೆಂಗಳೂರು–ಧಾರವಾಡ ರೈಲಿನ ಸೇವೆ ಬೆಳಗಾವಿಗೆ ವಿಸ್ತರಿಸಲು ನಾವೂ ಪ್ರಯತ್ನ ನಡೆಸಿದ್ದೇವೆ. ಆದರೆ ಸಮಯ ಹೊಂದಿಸುವುದೇ ಕಷ್ಟವಾಗಿದೆ. ಪ್ರಸ್ತುತ ಬೆಂಗಳೂರಿನಿಂದ ಬೆಳಿಗ್ಗೆ 5.45ಕ್ಕೆ ಹೊರಡುತ್ತಿರುವ ರೈಲು ಮಧ್ಯಾಹ್ನ 12.10ಕ್ಕೆ ಧಾರವಾಡ ತಲುಪುತ್ತಿದೆ. ಇಲ್ಲಿಂದ 1.15ಕ್ಕೆ ಹೊರಟು ಸಂಜೆ 7.45ಕ್ಕೆ ಬೆಂಗಳೂರು ತಲುಪುತ್ತಿದೆ. ಧಾರವಾಡದಿಂದ ಬೆಳಗಾವಿಗೆ ಇದೇ ರೈಲು ವಿಸ್ತರಣೆಯಾದರೆ ಕನಿಷ್ಠ 5 ತಾಸು(ಎರಡು ಬದಿ ಪ್ರಯಾಣಕ್ಕೆ 4 ತಾಸು ನಿರ್ವಹಣೆಗೆ 1 ತಾಸು) ಹೆಚ್ಚುವರಿ ಬೇಕು. ಮಧ್ಯರಾತ್ರಿ 12ರ ನಂತರ ರೈಲು ಬೆಂಗಳೂರು ತಲುಪಿದರೆ ಅಲ್ಲಿಂದ ತಮ್ಮ ಮನೆಗಳಿಗೆ ಹೋಗಲು ಪ್ರಯಾಣಿಕರಿಗೂ ತೊಂದರೆಯಾಗುತ್ತದೆ’ ಎಂದು ರೈಲ್ವೆ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.   
ಶೀಘ್ರವೇ ಸೇವೆ ಆರಂಭ: ಶೆಟ್ಟರ್‌
‘ಬೆಂಗಳೂರು-ಧಾರವಾಡ ಮಧ್ಯೆ ಸಂಚರಿಸುತ್ತಿರುವ ‘ವಂದೇ ಭಾರತ್‌’ ರೈಲಿನ ಸೇವೆ ಬೆಳಗಾವಿಗೆ ವಿಸ್ತರಿಸಲು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಒಪ್ಪಿಗೆ ಕೊಟ್ಟಿದ್ದಾರೆ. ಪರಿಷ್ಕೃತ ವೇಳಾಪಟ್ಟಿ ಸಿದ್ಧವಾಗುತ್ತಿದ್ದು ಬೆಂಗಳೂರು–ಬೆಳಗಾವಿ ಮಾರ್ಗದ ರೈಲಿನ ಸೇವೆ ಶೀಘ್ರವೇ ಆರಂಭವಾಗಲಿದೆ’ ಎಂದು ಸಂಸದ ಜಗದೀಶ ಶೆಟ್ಟರ್‌ ‘ಪ್ರಜಾವಾಣಿ’ಗೆ ತಿಳಿಸಿದರು. ‘ಈಗ ಕಾರ್ಯಾಚರಣೆ ಮಾಡುತ್ತಿರುವ ರೈಲಿನ ವೇಳಾಪಟ್ಟಿ ಗಮನಿಸಿದರೆ ಸಮಯದ ಹೊಂದಾಣಿಕೆ ಕಷ್ಟ. ಹಾಗಾಗಿ ಬೆಳಿಗ್ಗೆ 5ಕ್ಕೆ ಬೆಳಗಾವಿಯಿಂದಲೇ ಸಂಚಾರ ಆರಂಭಿಸಲು ಪ್ರಯತ್ನಿಸಲಾಗುತ್ತಿದೆ. ಅದು ಅಂತಿಮವಾದರೆ ರೈಲು ಮಧ್ಯಾಹ್ನ 12.30ಕ್ಕೆ ಬೆಂಗಳೂರು ತಲುಪಲಿದ್ದು 1.30ಕ್ಕೆ ಅಲ್ಲಿಂದ ಹೊರಟು ರಾತ್ರಿ 9ಕ್ಕೆ ಬೆಳಗಾವಿಗೆ ವಾಪಸಾಗಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT