ಕಾರ್ಯಾಧ್ಯಕ್ಷ ರಮೇಶ ಸೊಂಟಕ್ಕಿ ಮಾತನಾಡಿ, ‘ಕಳೆದ ಬಾರಿ ಗಣೇಶೋತ್ಸವವನ್ನು ಸರಳವಾಗಿ ಆಚರಿಸಿ ಜಿಲ್ಲಾಡಳಿತಕ್ಕೆ ಸಹಕಾರ ನೀಡಿದ್ದೇವೆ. ಈ ವರ್ಷ ಲಾಕ್ಡೌನ್ ತೆರವಾಗಿದೆ. ಆದ್ದರಿಂದ ಅದ್ದೂರಿ ಗಣೇಶೋತ್ಸವಕ್ಕೆ ಅವಕಾಶ ಕೊಡಬೇಕು. ಹಬ್ಬಕ್ಕೆ ಒಂದು ವಾರ ಇರುವಾಗ ಮೂರ್ತಿಗಳ ಎತ್ತರಕ್ಕೆ ನಿರ್ಬಂಧ ಹೇರುವುದನ್ನು ಕೈಬಿಡಬೇಕು. ಒಂದು ವೇಳೆ ನಿಯಮ ಜಾರಿಗೊಳಿಸುವುದಿದ್ದರೆ ಮುಂಚಿತವಾಗಿಯೇ ತಿಳಿಸಬೇಕು. ಇಲ್ಲವಾದರೆ ಮೂರ್ತಿಕಾರರಿಗೆ ಅನ್ಯಾಯವಾಗುತ್ತದೆ ಮತ್ತು ನಷ್ಟವೂ ಉಂಟಾಗುತ್ತದೆ’ ಎಂದು ಕೋರಿದರು.