‘ಶಿಕ್ಷಣ ಸಾಲ ಪಡೆದು ವಿವಿಧ ಕೋರ್ಸ್ಗಳನ್ನು ಮುಗಿಸಿರುವ ಯುವಜನರು ಉದ್ಯೋಗ ಸಿಗದೇ ಪರದಾಡುತ್ತಿದ್ದಾರೆ. ನಗರಗಳಲ್ಲಿ ಕೆಲಸಗಳಿಗಾಗಿ ಅಲೆದಾಡುತ್ತಿದ್ದಾರೆ. ಕೆಲವರು ಸಾಲ ತೀರಿಸಲು ಸಾಧ್ಯವಾಗದೇ ಬದುಕಿಗೆ ಶರಣು ಹೇಳುತ್ತಿರುವುದು ದುರಂತಗಳೂ ನಡೆಯುತ್ತಿವೆ. ಹೀಗಾಗಿ, ಅವರಿಗೆ ಸರ್ಕಾರ ಸ್ಪಂದಿಸಬೇಕು. ಶಿಕ್ಷಣ ಸಾಲ ಮನ್ನಾ ಮಾಡುವುದರೊಂದಿಗೆ, ನಿರುದ್ಯೋಗ ವೇತನ ನೀಡಬೇಕು’ ಎಂದು ಒತ್ತಾಯಿಸಿದರು.