‘ರೈತರು ಈ ಕೀಟಗಳು ಕಾಣಿಸಿಕೊಂಡಾಗ ತಗಡಿನ ಡಬ್ಬಿ, ಡ್ರಮ್ಮು ಅಥವಾ ತಟ್ಟೆಗಳಿಂದ ಜೋರಾಗಿ ಶಬ್ದ ಉಂಟು ಮಾಡಬೇಕು. ಇದರಿಂದ ಅವುಗಳು ಬೆಳೆಗಳತ್ತ ಬರುವುದಿಲ್ಲ. ಬೇವು ಆಧಾರಿತ ಕೀಟನಾಶಕವನ್ನು ಬೆಳೆಗಳು ಹಾಗೂ ಸುತ್ತಮುತ್ತಲಿನ ಗಿಡಗಳಿಗೆ ಸಿಂಪಡಿಸಬೇಕು. ಬೆಂಕಿ ಹಾಗೂ ಹೊಗೆ ಹಾಕುವುದರಿಂದ ಅವುಗಳನ್ನು ಓಡಿಸಬಹುದಾಗಿದೆ. ಮಿಡತೆಗಳು ಹಗಲಿನಲ್ಲಿ ಸಂಚರಿಸಿ ರಾತ್ರಿ ವೇಳೆ ಮರ–ಗಿಡಗಳ ಮೇಲೆ ವಿಶ್ರಾಂತಿ ಪಡೆಯುವುದರಿಂದಾಗಿ ಟ್ರಾಕ್ಟರ್ ಮೌಂಟೆಡ್ ಜೆಟ್ ಸ್ಪ್ರೇಯರ್ ಬಳಸಿ ಕೀಟನಾಶವನ್ನು ಸಂಜೆ ಅಥವಾ ರಾತ್ರಿ ವೇಳೆ ಸಿಂಪಡಿಸಬೇಕು’ ಎಂದು ತಿಳಿಸಿದ್ದಾರೆ.