ಮುಖಂಡ ಶಂಕರ ಗುಡಸ್ ಮಾತನಾಡಿ, ‘ತಾಳೆಗರಿಗಳು ಹಾಳಾದರೆ ಅವುಗಳಲ್ಲಿರುವ ಮಾಹಿತಿಯೂ ಕಳೆದು ಹೋಗುತ್ತದೆ. ಆಗ ನಮಗೆ ಇತಿಹಾಸ ಸಿಗುವುದಿಲ್ಲ. ಶ್ರೀಗಳ ಆಶಯದಂತೆ ಡಿಜಿಟಲೀಕರಣ ನಡೆಯುತ್ತಿದೆ. ಇದಕ್ಕೆ ಸ್ವಯಂಸೇವಕರು ಬೇಕಾಗಿದ್ದಾರೆ. 20 ದಿನಗಳವರೆಗೆ ನಡೆಯಲಿರುವ ಈ ಕಾರ್ಯದಲ್ಲಿ ಕನ್ನಡ ಮತ್ತು ವಚನ ಸಾಹಿತ್ಯದ ಅಭಿಮಾನಿಗಳು ಭಾಗವಹಿಸಬೇಕು’ ಎಂದು ಕೋರಿದರು.