<p><strong>ಬೆಳಗಾವಿ</strong>: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಮೂರು ದಿನ ಆಚರಿಸಲಾಗುವ ‘ದೀಪಾವಳಿ’ ಹಬ್ಬದ ಆಚರಣೆಗೆ ಸೋಮವಾರ ಸಡಗರದ ಚಾಲನೆ ದೊರೆಯಿತು. </p>.<p>ನಗರದ ವಿವಿಧ ಬಡಾವಣೆಗಳಲ್ಲಿ ಸಂಭ್ರಮ ಮನೆಮಾಡಿತ್ತು. ಮಹಿಳೆಯರು ಮುಂಜಾವಿನಲ್ಲೇ ತಮ್ಮ ಮನೆಯಂಗಳದಲ್ಲಿ ಆಕರ್ಷಕ ರಂಗೋಲಿ ಬಿಡಿಸಿದ್ದರು.</p>.<p>ನಂತರ ನರಕ ಚತುರ್ದಶಿ ಪ್ರಯುಕ್ತ ತಮ್ಮ ಮನೆಗಳು, ವ್ಯಾಪಾರಿ ಮಳಿಗೆಗಳು, ಕಚೇರಿಗಳು ಮತ್ತು ಕಾರ್ಖಾನೆಗಳಲ್ಲಿ ಜನರು ಲಕ್ಷ್ಮಿಪೂಜೆ ನೆರವೇರಿಸಿದರು. ವಿವಿಧ ಧಾರ್ಮಿಕ ಆಚರಣೆ ಕೈಗೊಂಡ ನಂತರ ಸಿಹಿ ಹಂಚಿ, ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.</p>.<p>ಸಂಜೆ ಕುಟುಂಬದವರೆಲ್ಲ ಸೇರಿಕೊಂಡು, ಹಣತೆಗಳನ್ನು ಬೆಳಗಿ, ಪಟಾಕಿ ಮತ್ತು ಸಿಡಿಮದ್ದುಗಳನ್ನು ಸಿಡಿಸಿ ಖುಷಿಪಟ್ಟರು.</p>.<p>ನಗರದ ವಿವಿಧ ದೇವಾಲಯಗಳು ತಳಿರು–ತೋರಣಗಳಿಂದ ಸಿಂಗಾರಗೊಂಡಿದ್ದವು. ದಿನವಿಡೀ ಭಕ್ತರಿಂದ ಕಿಕ್ಕಿರಿದು ತುಂಬಿದ್ದವು. ವಿಶೇಷ ಪೂಜೆ, ಅಲಂಕಾರ ಮತ್ತಿತರ ಧಾರ್ಮಿಕ ಕಾರ್ಯಕ್ರಮ ನೆರವೇರಿದವು. </p>.<p class="Briefhead">ಖರೀದಿ ಭರಾಟೆ: ಕಾಕತಿವೇಸ್, ಖಡೇಬಜಾರ್, ಗಣಪತ ಗಲ್ಲಿ, ಮಾರುತಿ ಗಲ್ಲಿ, ಪಾಂಗುಳ ಗಲ್ಲಿ, ಬುರುಡ ಗಲ್ಲಿ ಸೇರಿದಂತೆ ಮಾರುಕಟ್ಟೆ ಪ್ರದೇಶದಲ್ಲಿ ಸೋಮವಾರದ ಜನದಟ್ಟಣೆ ಕಂಡುಬಂತು. ವೈವಿಧ್ಯಮಯ ವಿನ್ಯಾಸಗಳ ಹಣತೆಗಳು, ಸಿದ್ಧಪಡಿಸಿದ ಉಡುಪುಗಳು, ಆಲಂಕಾರಿಕ ವಸ್ತುಗಳು, ಪೂಜಾ ಸಾಮಗ್ರಿಗಳನ್ನು ಗ್ರಾಹಕರು ಮುಗಿಬಿದ್ದು ಖರೀದಿಸಿದರು. ಅದರಲ್ಲೂ ಆಕಾಶಬುಟ್ಟಿಗಳ ಖರೀದಿ ಜೋರಾಗಿತ್ತು. <span style="font-size:16px;">ಕಬ್ಬು, ಹೂವು, ಹಣ್ಣು, ಬಾಳೆ ಎಲೆಗಳನ್ನು ಹೆಚ್ಚಾಗಿ ಜನರು ಖರೀದಿಸಿದರು.</span></p>.<p><span style="font-size:16px;">ನಗರದ ವಿವಿಧ ಸ್ವೀಟ್ಮಾರ್ಟ್ಗಳಲ್ಲಿ ಸಿಹಿ ಖಾದ್ಯಗಳು ಮತ್ತು ಒಣಹಣ್ಣುಗಳ ಮಾರಾಟದ ಖರೀದಿಯೂ ಭರದಿಂದ ಸಾಗಿತ್ತು.</span></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ</strong>: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಮೂರು ದಿನ ಆಚರಿಸಲಾಗುವ ‘ದೀಪಾವಳಿ’ ಹಬ್ಬದ ಆಚರಣೆಗೆ ಸೋಮವಾರ ಸಡಗರದ ಚಾಲನೆ ದೊರೆಯಿತು. </p>.<p>ನಗರದ ವಿವಿಧ ಬಡಾವಣೆಗಳಲ್ಲಿ ಸಂಭ್ರಮ ಮನೆಮಾಡಿತ್ತು. ಮಹಿಳೆಯರು ಮುಂಜಾವಿನಲ್ಲೇ ತಮ್ಮ ಮನೆಯಂಗಳದಲ್ಲಿ ಆಕರ್ಷಕ ರಂಗೋಲಿ ಬಿಡಿಸಿದ್ದರು.</p>.<p>ನಂತರ ನರಕ ಚತುರ್ದಶಿ ಪ್ರಯುಕ್ತ ತಮ್ಮ ಮನೆಗಳು, ವ್ಯಾಪಾರಿ ಮಳಿಗೆಗಳು, ಕಚೇರಿಗಳು ಮತ್ತು ಕಾರ್ಖಾನೆಗಳಲ್ಲಿ ಜನರು ಲಕ್ಷ್ಮಿಪೂಜೆ ನೆರವೇರಿಸಿದರು. ವಿವಿಧ ಧಾರ್ಮಿಕ ಆಚರಣೆ ಕೈಗೊಂಡ ನಂತರ ಸಿಹಿ ಹಂಚಿ, ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.</p>.<p>ಸಂಜೆ ಕುಟುಂಬದವರೆಲ್ಲ ಸೇರಿಕೊಂಡು, ಹಣತೆಗಳನ್ನು ಬೆಳಗಿ, ಪಟಾಕಿ ಮತ್ತು ಸಿಡಿಮದ್ದುಗಳನ್ನು ಸಿಡಿಸಿ ಖುಷಿಪಟ್ಟರು.</p>.<p>ನಗರದ ವಿವಿಧ ದೇವಾಲಯಗಳು ತಳಿರು–ತೋರಣಗಳಿಂದ ಸಿಂಗಾರಗೊಂಡಿದ್ದವು. ದಿನವಿಡೀ ಭಕ್ತರಿಂದ ಕಿಕ್ಕಿರಿದು ತುಂಬಿದ್ದವು. ವಿಶೇಷ ಪೂಜೆ, ಅಲಂಕಾರ ಮತ್ತಿತರ ಧಾರ್ಮಿಕ ಕಾರ್ಯಕ್ರಮ ನೆರವೇರಿದವು. </p>.<p class="Briefhead">ಖರೀದಿ ಭರಾಟೆ: ಕಾಕತಿವೇಸ್, ಖಡೇಬಜಾರ್, ಗಣಪತ ಗಲ್ಲಿ, ಮಾರುತಿ ಗಲ್ಲಿ, ಪಾಂಗುಳ ಗಲ್ಲಿ, ಬುರುಡ ಗಲ್ಲಿ ಸೇರಿದಂತೆ ಮಾರುಕಟ್ಟೆ ಪ್ರದೇಶದಲ್ಲಿ ಸೋಮವಾರದ ಜನದಟ್ಟಣೆ ಕಂಡುಬಂತು. ವೈವಿಧ್ಯಮಯ ವಿನ್ಯಾಸಗಳ ಹಣತೆಗಳು, ಸಿದ್ಧಪಡಿಸಿದ ಉಡುಪುಗಳು, ಆಲಂಕಾರಿಕ ವಸ್ತುಗಳು, ಪೂಜಾ ಸಾಮಗ್ರಿಗಳನ್ನು ಗ್ರಾಹಕರು ಮುಗಿಬಿದ್ದು ಖರೀದಿಸಿದರು. ಅದರಲ್ಲೂ ಆಕಾಶಬುಟ್ಟಿಗಳ ಖರೀದಿ ಜೋರಾಗಿತ್ತು. <span style="font-size:16px;">ಕಬ್ಬು, ಹೂವು, ಹಣ್ಣು, ಬಾಳೆ ಎಲೆಗಳನ್ನು ಹೆಚ್ಚಾಗಿ ಜನರು ಖರೀದಿಸಿದರು.</span></p>.<p><span style="font-size:16px;">ನಗರದ ವಿವಿಧ ಸ್ವೀಟ್ಮಾರ್ಟ್ಗಳಲ್ಲಿ ಸಿಹಿ ಖಾದ್ಯಗಳು ಮತ್ತು ಒಣಹಣ್ಣುಗಳ ಮಾರಾಟದ ಖರೀದಿಯೂ ಭರದಿಂದ ಸಾಗಿತ್ತು.</span></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>