<p><strong>ಬೆಳಗಾವಿ</strong>: ಪೌಷ್ಟಿಕ ಆಹಾರದ ಬಗ್ಗೆ ಜಾಗೃತಿ ಮೂಡಿಸಲು ಇಲ್ಲಿನ ಮಾಳಿ ಗಲ್ಲಿಯ ಸಾರ್ವಜನಿಕ ಗಣೇಶೋತ್ಸವ ಮಂಡಳಿಯು, ಗೋವಿನಜೋಳದ ಕಾಳು ಬಳಸಿ ಸಿದ್ಧಪಡಿಸಿದ ಪರಿಸರ ಸ್ನೇಹಿ ಗಣಪನ ಮೂರ್ತಿ ಪ್ರತಿಷ್ಠಾಪಿಸಲಿದೆ. ಕಲಾವಿದ ಸುನೀಲ ಆನಂದಾಚೆ ಇದನ್ನು ಸಿದ್ಧಪಡಿಸಿದ್ದಾರೆ.</p><p>‘ಹುಲ್ಲು, ನಿರುಪಯುಕ್ತ ಕಾಗದ ಬಳಸಿ, 11.5 ಅಡಿ ಎತ್ತರದ ಮೂರ್ತಿ ಸಿದ್ಧಪಡಿಸಿದ್ದೇನೆ. 31 ಕೆ.ಜಿ ಗೋವಿನಜೋಳದ ಕಾಳುಗಳನ್ನು ಗಂಜಿಯಲ್ಲಿ ಬೆರೆಸಿ, ಕಾಗದದ ಮೇಲೆ ಅಂಟಿಸಿದ್ದೇನೆ. ಇಬ್ಬರು ಕಾರ್ಮಿಕರ ನೆರವಿನಿಂದ ತಿಂಗಳಲ್ಲಿ ಮೂರ್ತಿ ಸಿದ್ಧವಾಗಿದೆ’ ಎಂದು ಸುನೀಲ ಆನಂದಾಚೆ ‘ಪ್ರಜಾವಾಣಿ’ಗೆ ತಿಳಿಸಿದರು.</p><p>‘ಪ್ಲಂಬರ್ ಆಗಿರುವ ನಾನು, 25 ವರ್ಷಗಳಿಂದ ಬಿಡುವಿನಲ್ಲಿ ಮೂರ್ತಿಗಳನ್ನು ಸಿದ್ಧಪಡಿಸುತ್ತೇನೆ. ರುದ್ರಾಕ್ಷಿ, ಹುಣಸೆ ಬೀಜ ಬಳಸಿ ಈ ಹಿಂದೆ ಗಣೇಶ ಮೂರ್ತಿಗಳನ್ನು ಸಿದ್ಧಪಡಿಸಿದ್ದೇನೆ’ ಎಂದರು.</p><p>‘ನಾವು ಕಳೆದ ಐದು ವರ್ಷಗಳಿಂದ ಪರಿಸರಸ್ನೇಹಿ ಆಚರಣೆಗೆ ಒತ್ತು ನೀಡಿದ್ದೇವೆ. ಗೋವಿನಜೋಳ ಪೌಷ್ಟಿಕ ಆಹಾರ. ಈ ಕುರಿತು ಜಾಗೃತಿ ಮೂಡಿಸುವುದು ಈಗಿನ ಉದ್ದೇಶ’ ಎಂದು ಮಾಳಿ ಗಲ್ಲಿಯ ಸಾರ್ವಜನಿಕ ಗಣೇಶೋತ್ಸವ ಮಂಡಳಿ ಅಧ್ಯಕ್ಷ ಮೇಘನ್ ಲಂಗರಕಾಂಡೆ ಹೇಳಿದರು.</p><p>‘11 ದಿನಗಳ ಬಳಿಕ ಹೊಂಡದಲ್ಲಿ ಮೂರ್ತಿ ವಿಸರ್ಜಿಸಲಾಗುತ್ತದೆ. ಪಿಒಪಿ ಮೂರ್ತಿಗಳಿದ್ದರೆ ಅದರಲ್ಲಿನ ಯಾವ ವಸ್ತು ತಿನ್ನಲಾಗದು. ಗೋವಿನಜೋಳದ ಕಾಳುಗಳಿದ್ದರೆ ಪ್ರಾಣಿ–ಪಕ್ಷಿಗಳಾದರೂ ತಿನ್ನುತ್ತವೆ’ ಎಂದರು.</p><p>–––</p>.<p><strong>ಪರಿಸರಕ್ಕೆ ಮಾರಕ ಆಗದಿರಲೆಂದು ನಾನು ಪಿಒಪಿ ಮೂರ್ತಿಗಳಿಗೆ ಬದಲಾಗಿ ಪರಿಸರ ಸ್ನೇಹಿ ಮೂರ್ತಿಗಳ ತಯಾರಿಕೆಗೆ ಒತ್ತು ನೀಡುತ್ತೇನೆ</strong></p><p><strong>-ಸುನೀಲ ಆನಂದಾಚೆ ಕಲಾವಿದ</strong></p>.<p>11 ದಿನ ಗಣೇಶೋತ್ಸವದ ಕೊನೆಯ ಎರಡು ದಿನ ಭಕ್ತರಿಗೆ ಸಿಹಿ ಗೋವಿನಜೋಳವನ್ನೇ ಪ್ರಸಾದ ರೂಪದಲ್ಲಿ ವಿತರಿಸುತ್ತೇವೆ.</p><p>ಮೇಘನ್ ಲಂಗರಕಾಂಡೆ ಅಧ್ಯಕ್ಷ ಮಾಳಿ ಗಲ್ಲಿಯ ಸಾರ್ವಜನಿಕ ಗಣೇಶೋತ್ಸವ ಮಂಡಳಿ </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ</strong>: ಪೌಷ್ಟಿಕ ಆಹಾರದ ಬಗ್ಗೆ ಜಾಗೃತಿ ಮೂಡಿಸಲು ಇಲ್ಲಿನ ಮಾಳಿ ಗಲ್ಲಿಯ ಸಾರ್ವಜನಿಕ ಗಣೇಶೋತ್ಸವ ಮಂಡಳಿಯು, ಗೋವಿನಜೋಳದ ಕಾಳು ಬಳಸಿ ಸಿದ್ಧಪಡಿಸಿದ ಪರಿಸರ ಸ್ನೇಹಿ ಗಣಪನ ಮೂರ್ತಿ ಪ್ರತಿಷ್ಠಾಪಿಸಲಿದೆ. ಕಲಾವಿದ ಸುನೀಲ ಆನಂದಾಚೆ ಇದನ್ನು ಸಿದ್ಧಪಡಿಸಿದ್ದಾರೆ.</p><p>‘ಹುಲ್ಲು, ನಿರುಪಯುಕ್ತ ಕಾಗದ ಬಳಸಿ, 11.5 ಅಡಿ ಎತ್ತರದ ಮೂರ್ತಿ ಸಿದ್ಧಪಡಿಸಿದ್ದೇನೆ. 31 ಕೆ.ಜಿ ಗೋವಿನಜೋಳದ ಕಾಳುಗಳನ್ನು ಗಂಜಿಯಲ್ಲಿ ಬೆರೆಸಿ, ಕಾಗದದ ಮೇಲೆ ಅಂಟಿಸಿದ್ದೇನೆ. ಇಬ್ಬರು ಕಾರ್ಮಿಕರ ನೆರವಿನಿಂದ ತಿಂಗಳಲ್ಲಿ ಮೂರ್ತಿ ಸಿದ್ಧವಾಗಿದೆ’ ಎಂದು ಸುನೀಲ ಆನಂದಾಚೆ ‘ಪ್ರಜಾವಾಣಿ’ಗೆ ತಿಳಿಸಿದರು.</p><p>‘ಪ್ಲಂಬರ್ ಆಗಿರುವ ನಾನು, 25 ವರ್ಷಗಳಿಂದ ಬಿಡುವಿನಲ್ಲಿ ಮೂರ್ತಿಗಳನ್ನು ಸಿದ್ಧಪಡಿಸುತ್ತೇನೆ. ರುದ್ರಾಕ್ಷಿ, ಹುಣಸೆ ಬೀಜ ಬಳಸಿ ಈ ಹಿಂದೆ ಗಣೇಶ ಮೂರ್ತಿಗಳನ್ನು ಸಿದ್ಧಪಡಿಸಿದ್ದೇನೆ’ ಎಂದರು.</p><p>‘ನಾವು ಕಳೆದ ಐದು ವರ್ಷಗಳಿಂದ ಪರಿಸರಸ್ನೇಹಿ ಆಚರಣೆಗೆ ಒತ್ತು ನೀಡಿದ್ದೇವೆ. ಗೋವಿನಜೋಳ ಪೌಷ್ಟಿಕ ಆಹಾರ. ಈ ಕುರಿತು ಜಾಗೃತಿ ಮೂಡಿಸುವುದು ಈಗಿನ ಉದ್ದೇಶ’ ಎಂದು ಮಾಳಿ ಗಲ್ಲಿಯ ಸಾರ್ವಜನಿಕ ಗಣೇಶೋತ್ಸವ ಮಂಡಳಿ ಅಧ್ಯಕ್ಷ ಮೇಘನ್ ಲಂಗರಕಾಂಡೆ ಹೇಳಿದರು.</p><p>‘11 ದಿನಗಳ ಬಳಿಕ ಹೊಂಡದಲ್ಲಿ ಮೂರ್ತಿ ವಿಸರ್ಜಿಸಲಾಗುತ್ತದೆ. ಪಿಒಪಿ ಮೂರ್ತಿಗಳಿದ್ದರೆ ಅದರಲ್ಲಿನ ಯಾವ ವಸ್ತು ತಿನ್ನಲಾಗದು. ಗೋವಿನಜೋಳದ ಕಾಳುಗಳಿದ್ದರೆ ಪ್ರಾಣಿ–ಪಕ್ಷಿಗಳಾದರೂ ತಿನ್ನುತ್ತವೆ’ ಎಂದರು.</p><p>–––</p>.<p><strong>ಪರಿಸರಕ್ಕೆ ಮಾರಕ ಆಗದಿರಲೆಂದು ನಾನು ಪಿಒಪಿ ಮೂರ್ತಿಗಳಿಗೆ ಬದಲಾಗಿ ಪರಿಸರ ಸ್ನೇಹಿ ಮೂರ್ತಿಗಳ ತಯಾರಿಕೆಗೆ ಒತ್ತು ನೀಡುತ್ತೇನೆ</strong></p><p><strong>-ಸುನೀಲ ಆನಂದಾಚೆ ಕಲಾವಿದ</strong></p>.<p>11 ದಿನ ಗಣೇಶೋತ್ಸವದ ಕೊನೆಯ ಎರಡು ದಿನ ಭಕ್ತರಿಗೆ ಸಿಹಿ ಗೋವಿನಜೋಳವನ್ನೇ ಪ್ರಸಾದ ರೂಪದಲ್ಲಿ ವಿತರಿಸುತ್ತೇವೆ.</p><p>ಮೇಘನ್ ಲಂಗರಕಾಂಡೆ ಅಧ್ಯಕ್ಷ ಮಾಳಿ ಗಲ್ಲಿಯ ಸಾರ್ವಜನಿಕ ಗಣೇಶೋತ್ಸವ ಮಂಡಳಿ </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>