ತೊಗಲು ಬಾವಲಿಗಳು ಒಮ್ಮೆಯೇ ನೆಲಕ್ಕೆ ತಾಗಿದರೆ ಮತ್ತೆ ಮೇಲೆ ಹಾರಲು ಆಗುವುದಿಲ್ಲ. ಅವುಗಳಿಗೆ ನೆಲದ ಮೇಲಿನ ನೀರು ಕುಡಿಯಲು ಆಗುವುದಿಲ್ಲ. ಹಾಗಾಗಿ ಅರಣ್ಯ ಇಲಾಖೆಯೇ ಪ್ರತ್ಯೇಕವಾಗಿ ಮಣ್ಣಿನ ಮಡಿಕೆಗಳನ್ನು ತರಿಸಿ, ಎತ್ತರದ ಸ್ಥಳಗಳಲ್ಲಿ ಇಟ್ಟಿದೆ. ಅಲ್ಲಿನ ನೀರನ್ನೇ ನಿತ್ಯವೂ ಸೇವಿಸಿ ಬಾವಲಿಗಳು ದಾಹ ನೀಗಿಸಿಕೊಳ್ಳುತ್ತಿವೆ. ಸಾಮಾನ್ಯವಾಗಿ ಯಾರ ತಂಟೆಗೂ ಹೋಗದೇ, ತಮ್ಮ ಪಾಡಿಗೆ ತಾವು ಜೀವಿಸುತ್ತವೆ.