ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತ್ಮರಕ್ಷಣೆಗಾಗಿ ಕರಾಟೆ ಕಲಿಯಲು ಸಲಹೆ

Last Updated 25 ಫೆಬ್ರುವರಿ 2020, 14:21 IST
ಅಕ್ಷರ ಗಾತ್ರ

ಅಥಣಿ: ‘ಆತ್ಮರಕ್ಷಣೆಗಾಗಿ ಪ್ರತಿಯೊಬ್ಬರೂ ಕರಾಟೆ ಕಲಿಯಬೇಕು’ ಎಂದು ಶೆಟ್ಟರ ಮಠದ ಮರುಳಸಿದ್ಧ ಸ್ವಾಮೀಜಿ ಹೇಳಿದರು.

ಇಲ್ಲಿನ ಐಎಂಎ ಸಭಾಂಗಣದಲ್ಲಿ ಮಾನವ ಹಕ್ಕುಗಳ ರಕ್ಷಣಾ ಸಂಘ, ಶೋಟೋಕಾನ್ ಕರಾಟೆ ಅಕಾಡೆಮಿಯಿಂದ ಈಚೆಗೆ ನಡೆದ ಸತ್ಕಾರ ಸಮಾರಂಭಲ್ಲಿ ಅವರು ಮಾತನಾಡಿದರು.

‘ಕರಾಟೆ ಕಲೆಯು ಸಮಾಜದ ಆರೋಗ್ಯ ರಕ್ಷಣೆಗೂ ಸಹಕಾರಿಯಾಗಿದೆ’ ಎಂದರು.

ಗೋವಾದಲ್ಲಿ ಈಚೆಗೆ ನಡೆದ ಅಂತರರಾಷ್ಟ್ರೀಯ ಕರಾಟೆ ಚಾಂಪಿಯನಶಿಪ್‌ನಲ್ಲಿ ಪದಕಗಳನ್ನು ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ 23 ಪಟುಗಳನ್ನು ಸತ್ಕರಿಸಲಾಯಿತು.

ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ, ಮಾನವ ಹಕ್ಕುಗಳ ರಕ್ಷಣಾ ಸಂಘದ ರಾಜ್ಯ ಘಟಕದ ಅಧ್ಯಕ್ಷ ರಾಜಾರಾಮ ಪವಾರ, ಕರಾಟೆ ತರಬೇತುದಾರ ಮೋಹನಸಿಂಗ್ ರಜಪೂತ ಮಾತನಾಡಿದರು.

ಹಿರೇಮಠದ ಡಾ.ಕಾಡಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾನವ ಹಕ್ಕುಗಳ ರಕ್ಷಣಾ ಸಂಘದ ರಾಷ್ಟ್ರೀಯ ಅಧ್ಯಕ್ಷ ಎಂ.ಡಿ. ಚೌಧರಿ, ವಕೀಲ ರಾವಸಾಬ ಜಕನೂರ, ಮುಖಂಡರಾದ ಶಂಕರ ಮಟ್ಟೆಪ್ಪನವರ, ರವಿ ಪೂಜಾರಿ, ಮಹಾದೇವ ಮಡಿವಾಳ, ಯಾಸ್ಮಿನ್‌, ಭಾರತಿ ಮೆಂಡಿಗೇರಿ, ಗಜಾನನ ಪಾಟೀಲ, ಸತೀಶ ಪಾಟೀಲ, ಅಮರೇಂದ್ರ ನಿಕ್ಕಂ, ಗಜಾನನ ಠಕ್ಕಣ್ಣವರ, ಸುರೇಶ ಕಾಳೇಲಿ, ಗೌತಮ ಪರಾಂಜಪೆ, ಪೈಗಂಬರ ಪಠಾಣ, ದಾಮೋದರ ಪಾಟೀಲ, ಅವಿನಾಶ ಪಾಟೀಲ, ವಿಠ್ಠಲ ಪವಾರ, ಅಮೀರ ಇನಾಂದಾರ, ಎಸ್. ಪಠಾಣ, ಕೃಷ್ಣು ಮಾನೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT