<p><strong>ಅಥಣಿ:</strong> ‘ತಾಲ್ಲೂಕಿನ ಕೋಹಳ್ಳಿ ಗ್ರಾಮದ ಕೆನರಾ ಬ್ಯಾಂಕ್ ಶಾಖೆಯಲ್ಲಿ ಮ್ಯಾನೇಜರ್ ಹುದ್ದೆ ಒಂದು ವರ್ಷದಿಂದ ಖಾಲಿ ಇದೆ. ಕೂಡಲೇ ನೇಮಕಕ್ಕೆ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿ ಅಲ್ಲಿನ ರೈತರು ಬುಧವಾರ ಪ್ರಭಾರ ವ್ಯವಸ್ಥಾಪಕ ಹಾಗೂ ಚಿಕ್ಕೋಡಿ ಮುಖ್ಯ ಕೇಂದ್ರ ಕಚೇರಿಯ ಅಧಿಕಾರಿಗಳಿಗೆ ಗುರುವಾರ ಮನವಿ ಸಲ್ಲಿಸಿದರು.</p>.<p>‘ಈ ಶಾಖೆ ವ್ಯಾಪ್ತಿಯಲ್ಲಿ ರಾಮತೀರ್ಥ, ಕೋಹಳ್ಳಿ, ಅಡಹಳ್ಳಿ, ಅಡಹಳ್ಳಟ್ಟಿ, ಯಲಿಹಡಲಗಿ ಗ್ರಾಮಗಳು ಬರುತ್ತವೆ. 30 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ವ್ಯವಸ್ಥಾಪಕರು ಇಲ್ಲದಿರುವುದರಿಂದ ಹಲವು ವ್ಯವಹಾರಗಳಿಗೆ ತೊಂದರೆ ಆಗುತ್ತಿದೆ. ಶೈಕ್ಷಣಿಕ, ಮನೆ ಹಾಗೂ ಬೆಳೆ ಸಾಲ ಮಂಜೂರು ಮಾಡಲು ನನಗೆ ಅಧಿಕಾರವಿಲ್ಲ ಎಂದು ಪ್ರಭಾರ ವ್ಯವಸ್ಥಾಪಕರು ಹೇಳುತ್ತಾರೆ. ಹೀಗಾಗಿ, ಕಾಯಂ ವ್ಯವಸ್ಥಾಪಕರನ್ನು ನೇಮಿಸಿಬೇಕು’ ಎಂದು ಕೋರಿದರು.</p>.<p>‘ಶಾಖೆಯಲ್ಲಿ ಎಟಿಎಂ ವ್ಯವಸ್ಥೆ ಮಾಡಬೇಕು’ ಎಂದು ಕೋರಿದರು.</p>.<p>ರೈತರಾದ ನೂರಹ್ಮದ್ ಡೊಂಗರಗಾಂವ, ಸದಾಶಿವ ಹರಪಾಳೆ, ಚಿದಾನಂದ ತಳಕೇರಿ, ತುಕಾರಾಮ ಫಡತಾರೆ, ಶ್ರೀಕಾಂತ ಆಲಗೂರ, ಮೆಹೆಬೂಬ ಪಡಸಲಗಿ, ಈರಪ್ಪ ತಮದಡ್ಡಿ, ಕೇದಾರಿ ವಳಸಂಗ, ಜೈಸಿಂಗೌಡ ಪಾಟೀಲ, ಸಂಗಪ್ಪ ಮಾಯನಟ್ಟಿ, ಪಕೀರ ತಳಕೇರಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಥಣಿ:</strong> ‘ತಾಲ್ಲೂಕಿನ ಕೋಹಳ್ಳಿ ಗ್ರಾಮದ ಕೆನರಾ ಬ್ಯಾಂಕ್ ಶಾಖೆಯಲ್ಲಿ ಮ್ಯಾನೇಜರ್ ಹುದ್ದೆ ಒಂದು ವರ್ಷದಿಂದ ಖಾಲಿ ಇದೆ. ಕೂಡಲೇ ನೇಮಕಕ್ಕೆ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿ ಅಲ್ಲಿನ ರೈತರು ಬುಧವಾರ ಪ್ರಭಾರ ವ್ಯವಸ್ಥಾಪಕ ಹಾಗೂ ಚಿಕ್ಕೋಡಿ ಮುಖ್ಯ ಕೇಂದ್ರ ಕಚೇರಿಯ ಅಧಿಕಾರಿಗಳಿಗೆ ಗುರುವಾರ ಮನವಿ ಸಲ್ಲಿಸಿದರು.</p>.<p>‘ಈ ಶಾಖೆ ವ್ಯಾಪ್ತಿಯಲ್ಲಿ ರಾಮತೀರ್ಥ, ಕೋಹಳ್ಳಿ, ಅಡಹಳ್ಳಿ, ಅಡಹಳ್ಳಟ್ಟಿ, ಯಲಿಹಡಲಗಿ ಗ್ರಾಮಗಳು ಬರುತ್ತವೆ. 30 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ವ್ಯವಸ್ಥಾಪಕರು ಇಲ್ಲದಿರುವುದರಿಂದ ಹಲವು ವ್ಯವಹಾರಗಳಿಗೆ ತೊಂದರೆ ಆಗುತ್ತಿದೆ. ಶೈಕ್ಷಣಿಕ, ಮನೆ ಹಾಗೂ ಬೆಳೆ ಸಾಲ ಮಂಜೂರು ಮಾಡಲು ನನಗೆ ಅಧಿಕಾರವಿಲ್ಲ ಎಂದು ಪ್ರಭಾರ ವ್ಯವಸ್ಥಾಪಕರು ಹೇಳುತ್ತಾರೆ. ಹೀಗಾಗಿ, ಕಾಯಂ ವ್ಯವಸ್ಥಾಪಕರನ್ನು ನೇಮಿಸಿಬೇಕು’ ಎಂದು ಕೋರಿದರು.</p>.<p>‘ಶಾಖೆಯಲ್ಲಿ ಎಟಿಎಂ ವ್ಯವಸ್ಥೆ ಮಾಡಬೇಕು’ ಎಂದು ಕೋರಿದರು.</p>.<p>ರೈತರಾದ ನೂರಹ್ಮದ್ ಡೊಂಗರಗಾಂವ, ಸದಾಶಿವ ಹರಪಾಳೆ, ಚಿದಾನಂದ ತಳಕೇರಿ, ತುಕಾರಾಮ ಫಡತಾರೆ, ಶ್ರೀಕಾಂತ ಆಲಗೂರ, ಮೆಹೆಬೂಬ ಪಡಸಲಗಿ, ಈರಪ್ಪ ತಮದಡ್ಡಿ, ಕೇದಾರಿ ವಳಸಂಗ, ಜೈಸಿಂಗೌಡ ಪಾಟೀಲ, ಸಂಗಪ್ಪ ಮಾಯನಟ್ಟಿ, ಪಕೀರ ತಳಕೇರಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>