ಕೃಷಿಗೆ ಸಂಬಂಧಿಸಿದ ಮೂರು ಕಾಯ್ದೆಗಳು ರೈತರಿಗೆ ಮರಣ ಶಾಸನವಾಗಿವೆ ಎಂದು ಆತಂಕ ವ್ಯಕ್ತಪಡಿಸಿ ದೆಹಲಿಯ ಗಡಿಗಳಲ್ಲಿ ನಡೆದಿರುವ ರೈತ ಚಳವಳಿಯ ಕಿಚ್ಚು ಗಡಿ ನಾಡು ಬೆಳಗಾವಿಗೂ ವ್ಯಾಪಿಸಿತು. ತಿದ್ದುಪಡಿ ಮಾಡಲಾಗಿರುವ ಮಾರಕ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಆಗ್ರಹ ಮುಂದಿಟ್ಟುಕೊಂಡು ಪಾಲ್ಗೊಂಡಿದ್ದ ನೂರಾರು ಮಂದಿ ಹಸಿರುಕಹಳೆ ಮೊಳಗಿಸಿದರು.