ಮೂಡಲಗಿ: ಇಲ್ಲಿನ ಪ್ರೆಸ್ ಕ್ಲಬ್ ವತಿಯಿಂದ ಪತ್ರಿಕಾ ವಿತರಕರ ದಿನಾಚರಣೆ ಅಂಗವಾಗಿ ಪತ್ರಿಕಾ ವಿತರಕರನ್ನು ಶುಕ್ರವಾರ ಸತ್ಕರಿಸಲಾಯಿತು.
ಸಿದ್ದಾರೂಢ ಪೂಜೇರಿ, ಪ್ರಜ್ವಲ ಪುಟಾಣಿ, ವಿನೋದ ಕಂಕಣವಾಡಿ, ಅಜಯ ಗುಡ್ಲಮನಿ, ವಿಶಾಲ ಬುಗಡಿಕಟ್ಟಿ, ಶಿವಬಸು ಜೀರಗಿ, ಸಿದ್ದಪ್ಪ ಕಪ್ಪಲಗುದ್ದಿ, ಅಮಿತಕುಮಾರ ನಾಗಪ್ಪಗೋಳ, ಧರೆಪ್ಪ ಕಪ್ಪಲಗುದ್ದಿ, ಸಚಿನ್ ಪತ್ತಾರ, ಬಂದೇನವಾಜ ಮುಲ್ಲಾ ಹಾಗೂ ಸುರೇಶ ಬೆಳವಿ ಅವರನ್ನು ಸನ್ಮಾನಿಸಲಾಯಿತು.
ಪತ್ರಕರ್ತ ಬಾಲಶೇಖರ ಬಂದಿ ಮಾತನಾಡಿ, ‘ಪತ್ರಿಕೆ ವಿತರಣೆ ಸಣ್ಣ ಕೆಲಸವಲ್ಲ. ಎಲ್ಲ ಕೆಲಸಕ್ಕೂ ಅದರದೇ ಆದ ಗೌರವವಿದೆ. ಬೆಳಿಗ್ಗೆ ಪತ್ರಿಕೆಗಳು ಮನೆಗೆ ಬರದಿದ್ದರೆ ಎಲ್ಲರಿಗೂ ನೆನಪಾಗುವುದು ವಿತರಕರೆ. ಅವರು ಕೊರೊನಾ ಸಮಯದಲ್ಲೂ ಪ್ರಾಣಕ್ಕೆ ಹೆದರದೆ ಸಮಯಕ್ಕೆ ಸರಿಯಾಗಿ ಪತ್ರಿಕೆಗಳನ್ನು ಮುಟ್ಟಿಸುವ ಕೆಲಸ ಮಾಡುತ್ತಿದ್ದಾರೆ’ ಎಂದು ಹೇಳಿದರು.
ಉಮೇಶ ಬೆಳಕೂಡ ಅತಿಥಿಯಾಗಿದ್ದರು. ಮೂಡಲಗಿ ಪ್ರೆಸ್ ಕ್ಲಬ್ ಅಧ್ಯಕ್ಷ ಸುಧಾಕರ ಉಂದ್ರಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಅಲ್ತಾಫ ಹವಾಲ್ದಾರ, ಕಲಾವಿದ ಮಂಜುನಾಥ್ ರೇಳೆಕರ ಹಾಗೂ ಚುಟುಕುಸಾಬ ಜಾತಗಾರ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.