<p><strong>ಬೆಳಗಾವಿ:</strong> ‘ನೂತನ ಶಿಕ್ಷಣ ನೀತಿ ಪರಿಣಾಮಕಾರಿಯಾಗಿ ಅನುಷ್ಠಾನ ಆಗಬೇಕಾದರೆ ಶಿಕ್ಷಣ ಕ್ಷೇತ್ರದಲ್ಲಿರುವ ನಾವು ಜಡತ್ವವನ್ನು ಬಿಟ್ಟು ಹೊಸ ಕ್ರಾಂತಿಕಾರಿ ಬದಲಾವಣೆಗೆ ಸಜ್ಜಾಗಬೇಕು. ಸುಧಾರಣೆಗಳನ್ನು ಅಳವಡಿಸಿಕೊಳ್ಳಬೇಕು ಮತ್ತು ನಾವೀನ್ಯತೆಯ ಮನೋಭಾವ ಹೊಂದಬೇಕು’ ಎಂದು ಶಿಕ್ಷಣ ತಜ್ಞ ಡಾ.ಅಶೋಕ ಶೆಟ್ಟರ್ ಅಭಿಪ್ರಾಯಪಟ್ಟರು.</p>.<p>ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನವಾದ ಹಿನ್ನೆಲೆಯಲ್ಲಿ ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು)ದಿಂದ ಸನ್ಮಾನ ಸ್ವೀಕಸಿರಿ ಅವರು ಮಾತನಾಡಿದರು.</p>.<p>‘ಸಾಧನೆಗಾಗಿ ವ್ಯಕ್ತಿಗೆ ಕೊಡುವ ಪ್ರಶಸ್ತಿ ವ್ಯಕ್ತಿ ಕೇಂದ್ರಿತವಾದರೆ ಆ ಸಾಧನೆ ಹಲವಾರು ಪಾಲುದಾರರನ್ನು ಪ್ರತಿನಿಧಿಸುತ್ತದೆ. ಏಕೆಂದರೆ ಸಾಧನೆಯನ್ನು ಒಬ್ಬ ವ್ಯಕ್ತಿಯಿಂದ ಅಥವಾ ನಿರ್ವಾತದಲ್ಲಿ ಸಾಧಿಸಲು ಸಾದ್ಯವಿಲ್ಲ. ಸಮಾಜ ಆ ವ್ಯಕ್ತಿಗೆ ನೀಡಿದ ಅವಕಾಶಗಳು ಹಾಗೂ ಆ ಅವಕಾಶಗಳ ಜೊತೆ ಕೂಡಿಕೊಂಡು ಕೆಲಸ ಮಾಡಿದ ಅನೇಕ ಜನರ ಶ್ರಮವೂ ಅದಕ್ಕೆ ಕಾರಣವಾಗಿರುತ್ತದೆ’ ಎಂದು ತಮ್ಮ ಸಾಧನೆಗೆ ಕಾರಣರಾದವರನೆಲ್ಲ ನೆನೆದರು. ‘ಇದರಲ್ಲಿ ವಿಟಿಯು ಕೊಡುಗೆಯೂ ಇದೆ’ ಎಂದು ಸ್ಮರಿಸಿದರು.</p>.<p>ಸನ್ಮಾನಿತರಾದ ಕೆಂಪವ್ವ ಹರಿಜನ ‘ಸಂಗ್ಯಾ-ಬಾಳ್ಯಾ ಬಯಲಾಟ’ದ ಎರಡು ಪದಗಳನ್ನು ಹೇಳಿ ಸಭಿಕರನ್ನು ರಂಜಿಸಿದರು.</p>.<p>ಪಂಡಿತ ಅನಂತ ತೇರದಾಳ ಅವರ ಪರವಾಗಿಸುಪತ್ರಿ ಶ್ರೀ ರಾಧಿಕಾ ದೇಶಪಾಂಡೆ ಸನ್ಮಾನ ಸ್ವೀಕರಿಸಿದರು. ‘ನನ್ನೀ ಸಾಧನೆ ಹಾಗೂ ಸಾಧನೆಗೆ ಸಂದ ಗೌರವಗಳನ್ನು ಗುರು ಪಂಡಿತ ಭೀಮಸೇನ ಜೋಶಿ ಅವರಿಗ ಸಮರ್ಪಿಸುತ್ತೇನೆ’ ಎಂದು ಅನಂತ ಅವರು ವಿಡಿಯೊ ಸಂದೇಶದಲ್ಲಿ ತಿಳಿಸಿದರು.</p>.<p>ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಕರಿಸಿದ್ದಪ್ಪ, ‘ಒಂದು ರಾಷ್ಟ್ರದ ಅಭಿವೃದ್ಧಿಯಲ್ಲಿ ಶಿಕ್ಷಣ ಕ್ಷೇತ್ರ ಪರಿಣಾಮಕಾರಿ ಪಾತ್ರವನ್ನು ವಹಿಸುತ್ತದೆ. ಅದು ತುಂಬಾ ಸೂಕ್ಷ್ಮವಾಗಿರುವುದರಿಂದ ಅದರಲ್ಲಿ ಸ್ವಾವಲಂಬನೆ ಸಾಧಿಸುವುದು ಬಹಳ ಮುಖ್ಯವಾಗಿದೆ’ ಎಂದು ಅಭಿಪ್ರಾಯಪಟ್ಟರು</p>.<p>ವಿಟಿಯು ಪ್ರಸಾರಂಗದ ಮಾರ್ಗದರ್ಶಕ ಪ್ರೊ.ಸಿ.ಕೆ. ಸುಬ್ಬರಾಯ ಮಾತನಾಡಿದರು.</p>.<p>ಹಣಕಾಸು ಅಧಿಕಾರಿ ಎಂ.ಎ. ಸಪ್ನಾ, ಕಾಲೇಜುಗಳ ಪ್ರಾಚಾರ್ಯರರು ಇದ್ದರು.</p>.<p>ಕುಲಸಚಿವ ಪ್ರೊ.ಆನಂದ ದೇಶಪಾಂಡೆ ಸ್ವಾಗತಿಸಿದರು. ಪ್ರಸಾರಂಗದ ನಿರ್ದೇಶಕ ಪ್ರೊ.ಎಂ.ಎನ್. ಬಿರ್ಜೆ ಪ್ರಾಸ್ತಾವಿಕ ಮಾತನಾಡಿದರು. ಮೌಲ್ಯಮಾಪನ ಕುಲಸಚಿವ ಪ್ರೊ.ಬಿ.ಇ. ರಂಗಸ್ವಾಮಿ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ:</strong> ‘ನೂತನ ಶಿಕ್ಷಣ ನೀತಿ ಪರಿಣಾಮಕಾರಿಯಾಗಿ ಅನುಷ್ಠಾನ ಆಗಬೇಕಾದರೆ ಶಿಕ್ಷಣ ಕ್ಷೇತ್ರದಲ್ಲಿರುವ ನಾವು ಜಡತ್ವವನ್ನು ಬಿಟ್ಟು ಹೊಸ ಕ್ರಾಂತಿಕಾರಿ ಬದಲಾವಣೆಗೆ ಸಜ್ಜಾಗಬೇಕು. ಸುಧಾರಣೆಗಳನ್ನು ಅಳವಡಿಸಿಕೊಳ್ಳಬೇಕು ಮತ್ತು ನಾವೀನ್ಯತೆಯ ಮನೋಭಾವ ಹೊಂದಬೇಕು’ ಎಂದು ಶಿಕ್ಷಣ ತಜ್ಞ ಡಾ.ಅಶೋಕ ಶೆಟ್ಟರ್ ಅಭಿಪ್ರಾಯಪಟ್ಟರು.</p>.<p>ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನವಾದ ಹಿನ್ನೆಲೆಯಲ್ಲಿ ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು)ದಿಂದ ಸನ್ಮಾನ ಸ್ವೀಕಸಿರಿ ಅವರು ಮಾತನಾಡಿದರು.</p>.<p>‘ಸಾಧನೆಗಾಗಿ ವ್ಯಕ್ತಿಗೆ ಕೊಡುವ ಪ್ರಶಸ್ತಿ ವ್ಯಕ್ತಿ ಕೇಂದ್ರಿತವಾದರೆ ಆ ಸಾಧನೆ ಹಲವಾರು ಪಾಲುದಾರರನ್ನು ಪ್ರತಿನಿಧಿಸುತ್ತದೆ. ಏಕೆಂದರೆ ಸಾಧನೆಯನ್ನು ಒಬ್ಬ ವ್ಯಕ್ತಿಯಿಂದ ಅಥವಾ ನಿರ್ವಾತದಲ್ಲಿ ಸಾಧಿಸಲು ಸಾದ್ಯವಿಲ್ಲ. ಸಮಾಜ ಆ ವ್ಯಕ್ತಿಗೆ ನೀಡಿದ ಅವಕಾಶಗಳು ಹಾಗೂ ಆ ಅವಕಾಶಗಳ ಜೊತೆ ಕೂಡಿಕೊಂಡು ಕೆಲಸ ಮಾಡಿದ ಅನೇಕ ಜನರ ಶ್ರಮವೂ ಅದಕ್ಕೆ ಕಾರಣವಾಗಿರುತ್ತದೆ’ ಎಂದು ತಮ್ಮ ಸಾಧನೆಗೆ ಕಾರಣರಾದವರನೆಲ್ಲ ನೆನೆದರು. ‘ಇದರಲ್ಲಿ ವಿಟಿಯು ಕೊಡುಗೆಯೂ ಇದೆ’ ಎಂದು ಸ್ಮರಿಸಿದರು.</p>.<p>ಸನ್ಮಾನಿತರಾದ ಕೆಂಪವ್ವ ಹರಿಜನ ‘ಸಂಗ್ಯಾ-ಬಾಳ್ಯಾ ಬಯಲಾಟ’ದ ಎರಡು ಪದಗಳನ್ನು ಹೇಳಿ ಸಭಿಕರನ್ನು ರಂಜಿಸಿದರು.</p>.<p>ಪಂಡಿತ ಅನಂತ ತೇರದಾಳ ಅವರ ಪರವಾಗಿಸುಪತ್ರಿ ಶ್ರೀ ರಾಧಿಕಾ ದೇಶಪಾಂಡೆ ಸನ್ಮಾನ ಸ್ವೀಕರಿಸಿದರು. ‘ನನ್ನೀ ಸಾಧನೆ ಹಾಗೂ ಸಾಧನೆಗೆ ಸಂದ ಗೌರವಗಳನ್ನು ಗುರು ಪಂಡಿತ ಭೀಮಸೇನ ಜೋಶಿ ಅವರಿಗ ಸಮರ್ಪಿಸುತ್ತೇನೆ’ ಎಂದು ಅನಂತ ಅವರು ವಿಡಿಯೊ ಸಂದೇಶದಲ್ಲಿ ತಿಳಿಸಿದರು.</p>.<p>ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಕರಿಸಿದ್ದಪ್ಪ, ‘ಒಂದು ರಾಷ್ಟ್ರದ ಅಭಿವೃದ್ಧಿಯಲ್ಲಿ ಶಿಕ್ಷಣ ಕ್ಷೇತ್ರ ಪರಿಣಾಮಕಾರಿ ಪಾತ್ರವನ್ನು ವಹಿಸುತ್ತದೆ. ಅದು ತುಂಬಾ ಸೂಕ್ಷ್ಮವಾಗಿರುವುದರಿಂದ ಅದರಲ್ಲಿ ಸ್ವಾವಲಂಬನೆ ಸಾಧಿಸುವುದು ಬಹಳ ಮುಖ್ಯವಾಗಿದೆ’ ಎಂದು ಅಭಿಪ್ರಾಯಪಟ್ಟರು</p>.<p>ವಿಟಿಯು ಪ್ರಸಾರಂಗದ ಮಾರ್ಗದರ್ಶಕ ಪ್ರೊ.ಸಿ.ಕೆ. ಸುಬ್ಬರಾಯ ಮಾತನಾಡಿದರು.</p>.<p>ಹಣಕಾಸು ಅಧಿಕಾರಿ ಎಂ.ಎ. ಸಪ್ನಾ, ಕಾಲೇಜುಗಳ ಪ್ರಾಚಾರ್ಯರರು ಇದ್ದರು.</p>.<p>ಕುಲಸಚಿವ ಪ್ರೊ.ಆನಂದ ದೇಶಪಾಂಡೆ ಸ್ವಾಗತಿಸಿದರು. ಪ್ರಸಾರಂಗದ ನಿರ್ದೇಶಕ ಪ್ರೊ.ಎಂ.ಎನ್. ಬಿರ್ಜೆ ಪ್ರಾಸ್ತಾವಿಕ ಮಾತನಾಡಿದರು. ಮೌಲ್ಯಮಾಪನ ಕುಲಸಚಿವ ಪ್ರೊ.ಬಿ.ಇ. ರಂಗಸ್ವಾಮಿ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>