‘ನದಿ ಪಾತ್ರದ ಗ್ರಾಮಗಳಾದ ಬಾವನ ಸವದತ್ತಿ, ದಿಗ್ಗೆವಾಡಿ, ಜಲಾಲಪುರ, ಬಿರಡಿ, ಕುಡಚಿ, ಖೇಮಲಾಪುರ, ಸಿದ್ದಾಪುರ, ಶಿರಗೂರ ಮೊದಲಾದ ಗ್ರಾಮಗಳಲ್ಲಿ ತಾಲ್ಲೂಕು ಆಡಳಿತ ರೆಡ್ಅಲರ್ಟ್ ಘೋಷಣೆ ಮಾಡಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ಜನರಿಗಾಗಿ 40 ಕಾಳಜಿ ಕೇಂದ್ರಗಳನ್ನು ತೆರೆಯಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ’ ಎಂದು ತಹಶೀಲ್ದಾರ್ ಡಾ.ಮೋಹನ ಬಸ್ಮೆ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.