‘ಬಿಜೆಪಿಯಲ್ಲಿ ಜಗದೀಶ ಶೆಟ್ಟರ ಅವರಿಗೆ ಆದ ಅನ್ಯಾಯದಿಂದ ಬಹಳ ನೋವಾಗಿದೆ. ಯಡಿಯೂರಪ್ಪ, ಅನಂತಕುಮಾರ ಹಾಗೂ ಶೆಟ್ಟರ್ ಸೇರಿಕೊಂಡು ರಾಜ್ಯದಲ್ಲಿ ಪಕ್ಷ ಕಟ್ಟಿದವರು. ಅವರನ್ನು ಕಡೆಗಣಿಸಬಾರದಿತ್ತು. ಈಗಲೂ ನಾನು ಹೈಕಮಾಂಡ್ಗೆ ಮನವಿ ಮಾಡುತ್ತೇನೆ. ಶೆಟ್ಟರ ಕೈಬಿಟ್ಟರೆ ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತದೆ. ಶೆಟ್ಟರ ಮತ್ತು ನನ್ನ ಮಧ್ಯೆ ಅವಿನಾಭಾವ ಸಂಬಂಧವಿದೆ. ಅವರನ್ನು ಭೇಟಿ ಮಾಡುತ್ತೇನೆ’ ಎಂದೂ ಹೇಳಿದರು.