<p><strong>ಚಿಕ್ಕೋಡಿ:</strong> ತಾಲ್ಲೂಕಿನ ನವಲಿಹಾಳದಲ್ಲಿ ಗಾಂಧೀಜಿ ವಾಸ್ತವ್ಯ ಹೂಡಿದ ಮನೆ, ಉಚಿತ ಆಸ್ಪತ್ರೆ ತೆರೆದ ಮನೆ ಹಾಗೂ ವಂತಿಗೆ ಸಂಗ್ರಹಿಸಿ ನಿರ್ಮಿಸಿದ ಬಾವಿ ಮುಂತಾದವುಗಳು ಅವಸಾನದ ಅಂಚಿನಲ್ಲಿವೆ. ಇದರ ಮಧ್ಯೆ ಮತ್ತೊಂದು ಗಾಂಧಿ ಜಯಂತಿ ಬಂದಿದ್ದು, ಈ ಸಂದರ್ಭದಲ್ಲಿ ಮಾತ್ರ ಈ ಐತಿಹಾಸಿಕ ಕುರುಹುಗಳ ನೆನಪಾಗುತ್ತದೆ.</p>.<p>9 ದಶಕಗಳ ಹಿಂದೆ ಸ್ವಾತಂತ್ರ್ಯ ಚಳವಳಿ ಕಟ್ಟಲು ಕರ್ನಾಟಕದಲ್ಲಿ ಮಹಾತ್ಮ ಗಾಂಧೀಜಿ ಪ್ರವಾಸ ಕೈಗೊಂಡಿದ್ದರು. 1934ರ ಮಾರ್ಚ್ 7 ಮತ್ತು 8ರಂದು ನವಲಿಹಾಳ ಗ್ರಾಮಕ್ಕೆ ಆಗಮಿಸಿದ್ದರು. ಆ ಹೆಜ್ಜೆ ಗುರುತಗಳು ಸರ್ಕಾರದ ನಿರ್ಲಕ್ಷ್ಯದಿಂದ ಮಾಸುತ್ತಿವೆ.</p>.<p>ಗ್ರಾಮದ ಹೊರವಲಯದ ಗುಜ್ಜರ ಮಾಳದಲ್ಲಿರುವ ಅಂದಿನ ಖ್ಯಾತ ವ್ಯಾಪಾರಿ ಅಕ್ಷಯಚಂದ್ ಗುಜ್ಜರ ಅವರಿಗೆ ಸೇರಿದ ಮನೆಯಲ್ಲಿ ಗಾಂಧೀಜಿ ಎರಡು ದಿನ ವಾಸ್ತವ್ಯ ಹೂಡಿದ್ದರು. ಆ ಮನೆಯನ್ನು ಗುಜ್ಜರ ಕುಟುಂಬವೂ ಬಳಸುತ್ತಿಲ್ಲ. ಹೀಗಾಗಿ ಮನೆ ಪಾಳು ಬಿದ್ದಿದ್ದು, ಗಾಂಧೀಜಿ ಫೋಟೊ ಮಾತ್ರ ಅನಾಥವಾಗಿ ಕಾಣುತ್ತದೆ.</p>.<p>ಈ ಮನೆಗೆ ತೆರಳಲು ದಾರಿಯೂ ಇಲ್ಲ. ಆವರಣದಲ್ಲಿ ಮಾವಿನ ಸಸಿಯೊಂದನ್ನು ಗಾಂಧೀಜಿ ತಾವು ಭೇಟಿ ನೀಡಿದ ನೆನಪಿಗಾಗಿ ನೆಟ್ಟಿದ್ದು, ಇಂದು ಅದು ಹೆಮ್ಮೆರವಾಗಿ ಬೆಳೆದು ನಿಂತಿದೆ. ಆಗ ₹1,965 ಹಣ ಸಂಗ್ರಹಿಸಿ ಸೇದುವ ಬಾವಿ ಕೊರೆಯಿಸಿದ್ದು, ಇಂದಿಗೂ ಅದನ್ನು ಸ್ಥಳೀಯರು ‘ಗಾಂಧಿ ಬಾವಿ’ ಎಂದೇ ಕರೆಯುತ್ತಾರೆ.</p>.<p>ಗ್ರಾಮದ ಬಡವರಿಗೆ ಉಚಿತ ಆರೋಗ್ಯ ಸೇವೆ ಕಲ್ಪಿಸಿಕೊಡಬೇಕೆಂಬ ಉದ್ದೇಶದಿಂದ ಇದೇ ಗ್ರಾಮದಲ್ಲಿ ಕೊಲ್ಹಾಪುರದ ರಾಜಾರಾಮ ಮಹಾರಾಜರು ಹಾಗೂ ಗಾಂಧೀಜಿ ‘ಮಿಷನ್ ಹಾಸ್ಪಿಟಲ್’ ಆರಂಭಿಸಿದ್ದರು. ಕಾಲಾಂತರದಲ್ಲಿ ಆ ಆಸ್ಪತ್ರೆ ಮೀರಜ್ಗೆ ಸ್ಥಳಾಂತರವಾಯಿತು. ಆಸ್ಪತ್ರೆ ಆರಂಭಿಸಿದ ಮನೆ ಈಗ ‘ದವಾಖಾನಿ ಮನೆ’ ಎಂಬ ಹೆಸರಿಗೆ ಉಳಿದಿದೆ.</p>.<p>ಇಷ್ಟೊಂದು ಮಹತ್ವ ಪಡೆದ ಊರಿನ ಕುರುಹುಗಳನ್ನು ಜಿಲ್ಲಾಡಳಿತ ನಿರ್ಲಕ್ಷ್ಯ ಮಾಡಿದೆ. ಗ್ರಾಮಸ್ಥರಾದರೂ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಬೇಕಿದೆ.</p>.<p>ಶಿಕ್ಷಕ ವಿಶ್ವನಾಥ ಧುಮಾಳ ಅವರು ‘ನಮ್ಮೂರಲ್ಲಿ ಗಾಂಧೀಜಿ’ ಎಂಬ ಕಿರು ಹೊತ್ತಿಗೆ ಪ್ರಕಟಿಸಿದ್ದು, ಶಾಲಾ ಮಕ್ಕಳಿಗೆ ಹಾಗೂ ಸ್ಥಳೀಯರಿಗೆ ಉಚಿತವಾಗಿ ಹಂಚುವ ಮೂಲಕ ಇತಿಹಾಸ ಉಳಿಸಿದ್ದಾರೆ.</p>.<div><blockquote>ಗಾಂಧೀಜಿ ನಮ್ಮ ಮನೆಯಲ್ಲಿ ವಾಸ್ತವ್ಯ ಮಾಡಿದ್ದರು ಎಂಬುದೇ ಹೆಮ್ಮೆ. ಆ ಮನೆ ಬಾವಿ ಹಾಗೂ ಆಸ್ಪತ್ರೆಯನ್ನು ಸಂಬಂಧಿಸಿದವರು ರಕ್ಷಣೆ ಮಾಡಬೇಕು</blockquote><span class="attribution">ರೇಖಾ ಮೆಹತಾ (ಗುಜ್ಜರ) ಗಾಂಧೀಜಿ ವಾಸ್ತವ್ಯವಿದ್ದ ಮನೆಯ ಮಾಲೀಕ</span></div>.<div><blockquote>90 ವರ್ಷಗಳ ಹಿಂದೆ ನವಲಿಹಾಳ ಗ್ರಾಮಕ್ಕೆ ಗಾಂಧೀಜಿ ಆಗಮಿಸಿದ್ದ ಕುರುಹುಗಳ ರಕ್ಷಣೆಯಾಗಬೇಕು. ಇದಕ್ಕೆ ಗಾಂಧಿ ಸ್ಮಾರಕ ನಿರ್ಮಾಣ ಮಾಡಬೇಕು</blockquote><span class="attribution"> ಸಚಿನ ಹುಕ್ಕೇರಿ ಅಧ್ಯಕ್ಷ ಗ್ರಾಮ ಪಂಚಾಯಿತಿ ನವಲಿಹಾಳ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕೋಡಿ:</strong> ತಾಲ್ಲೂಕಿನ ನವಲಿಹಾಳದಲ್ಲಿ ಗಾಂಧೀಜಿ ವಾಸ್ತವ್ಯ ಹೂಡಿದ ಮನೆ, ಉಚಿತ ಆಸ್ಪತ್ರೆ ತೆರೆದ ಮನೆ ಹಾಗೂ ವಂತಿಗೆ ಸಂಗ್ರಹಿಸಿ ನಿರ್ಮಿಸಿದ ಬಾವಿ ಮುಂತಾದವುಗಳು ಅವಸಾನದ ಅಂಚಿನಲ್ಲಿವೆ. ಇದರ ಮಧ್ಯೆ ಮತ್ತೊಂದು ಗಾಂಧಿ ಜಯಂತಿ ಬಂದಿದ್ದು, ಈ ಸಂದರ್ಭದಲ್ಲಿ ಮಾತ್ರ ಈ ಐತಿಹಾಸಿಕ ಕುರುಹುಗಳ ನೆನಪಾಗುತ್ತದೆ.</p>.<p>9 ದಶಕಗಳ ಹಿಂದೆ ಸ್ವಾತಂತ್ರ್ಯ ಚಳವಳಿ ಕಟ್ಟಲು ಕರ್ನಾಟಕದಲ್ಲಿ ಮಹಾತ್ಮ ಗಾಂಧೀಜಿ ಪ್ರವಾಸ ಕೈಗೊಂಡಿದ್ದರು. 1934ರ ಮಾರ್ಚ್ 7 ಮತ್ತು 8ರಂದು ನವಲಿಹಾಳ ಗ್ರಾಮಕ್ಕೆ ಆಗಮಿಸಿದ್ದರು. ಆ ಹೆಜ್ಜೆ ಗುರುತಗಳು ಸರ್ಕಾರದ ನಿರ್ಲಕ್ಷ್ಯದಿಂದ ಮಾಸುತ್ತಿವೆ.</p>.<p>ಗ್ರಾಮದ ಹೊರವಲಯದ ಗುಜ್ಜರ ಮಾಳದಲ್ಲಿರುವ ಅಂದಿನ ಖ್ಯಾತ ವ್ಯಾಪಾರಿ ಅಕ್ಷಯಚಂದ್ ಗುಜ್ಜರ ಅವರಿಗೆ ಸೇರಿದ ಮನೆಯಲ್ಲಿ ಗಾಂಧೀಜಿ ಎರಡು ದಿನ ವಾಸ್ತವ್ಯ ಹೂಡಿದ್ದರು. ಆ ಮನೆಯನ್ನು ಗುಜ್ಜರ ಕುಟುಂಬವೂ ಬಳಸುತ್ತಿಲ್ಲ. ಹೀಗಾಗಿ ಮನೆ ಪಾಳು ಬಿದ್ದಿದ್ದು, ಗಾಂಧೀಜಿ ಫೋಟೊ ಮಾತ್ರ ಅನಾಥವಾಗಿ ಕಾಣುತ್ತದೆ.</p>.<p>ಈ ಮನೆಗೆ ತೆರಳಲು ದಾರಿಯೂ ಇಲ್ಲ. ಆವರಣದಲ್ಲಿ ಮಾವಿನ ಸಸಿಯೊಂದನ್ನು ಗಾಂಧೀಜಿ ತಾವು ಭೇಟಿ ನೀಡಿದ ನೆನಪಿಗಾಗಿ ನೆಟ್ಟಿದ್ದು, ಇಂದು ಅದು ಹೆಮ್ಮೆರವಾಗಿ ಬೆಳೆದು ನಿಂತಿದೆ. ಆಗ ₹1,965 ಹಣ ಸಂಗ್ರಹಿಸಿ ಸೇದುವ ಬಾವಿ ಕೊರೆಯಿಸಿದ್ದು, ಇಂದಿಗೂ ಅದನ್ನು ಸ್ಥಳೀಯರು ‘ಗಾಂಧಿ ಬಾವಿ’ ಎಂದೇ ಕರೆಯುತ್ತಾರೆ.</p>.<p>ಗ್ರಾಮದ ಬಡವರಿಗೆ ಉಚಿತ ಆರೋಗ್ಯ ಸೇವೆ ಕಲ್ಪಿಸಿಕೊಡಬೇಕೆಂಬ ಉದ್ದೇಶದಿಂದ ಇದೇ ಗ್ರಾಮದಲ್ಲಿ ಕೊಲ್ಹಾಪುರದ ರಾಜಾರಾಮ ಮಹಾರಾಜರು ಹಾಗೂ ಗಾಂಧೀಜಿ ‘ಮಿಷನ್ ಹಾಸ್ಪಿಟಲ್’ ಆರಂಭಿಸಿದ್ದರು. ಕಾಲಾಂತರದಲ್ಲಿ ಆ ಆಸ್ಪತ್ರೆ ಮೀರಜ್ಗೆ ಸ್ಥಳಾಂತರವಾಯಿತು. ಆಸ್ಪತ್ರೆ ಆರಂಭಿಸಿದ ಮನೆ ಈಗ ‘ದವಾಖಾನಿ ಮನೆ’ ಎಂಬ ಹೆಸರಿಗೆ ಉಳಿದಿದೆ.</p>.<p>ಇಷ್ಟೊಂದು ಮಹತ್ವ ಪಡೆದ ಊರಿನ ಕುರುಹುಗಳನ್ನು ಜಿಲ್ಲಾಡಳಿತ ನಿರ್ಲಕ್ಷ್ಯ ಮಾಡಿದೆ. ಗ್ರಾಮಸ್ಥರಾದರೂ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಬೇಕಿದೆ.</p>.<p>ಶಿಕ್ಷಕ ವಿಶ್ವನಾಥ ಧುಮಾಳ ಅವರು ‘ನಮ್ಮೂರಲ್ಲಿ ಗಾಂಧೀಜಿ’ ಎಂಬ ಕಿರು ಹೊತ್ತಿಗೆ ಪ್ರಕಟಿಸಿದ್ದು, ಶಾಲಾ ಮಕ್ಕಳಿಗೆ ಹಾಗೂ ಸ್ಥಳೀಯರಿಗೆ ಉಚಿತವಾಗಿ ಹಂಚುವ ಮೂಲಕ ಇತಿಹಾಸ ಉಳಿಸಿದ್ದಾರೆ.</p>.<div><blockquote>ಗಾಂಧೀಜಿ ನಮ್ಮ ಮನೆಯಲ್ಲಿ ವಾಸ್ತವ್ಯ ಮಾಡಿದ್ದರು ಎಂಬುದೇ ಹೆಮ್ಮೆ. ಆ ಮನೆ ಬಾವಿ ಹಾಗೂ ಆಸ್ಪತ್ರೆಯನ್ನು ಸಂಬಂಧಿಸಿದವರು ರಕ್ಷಣೆ ಮಾಡಬೇಕು</blockquote><span class="attribution">ರೇಖಾ ಮೆಹತಾ (ಗುಜ್ಜರ) ಗಾಂಧೀಜಿ ವಾಸ್ತವ್ಯವಿದ್ದ ಮನೆಯ ಮಾಲೀಕ</span></div>.<div><blockquote>90 ವರ್ಷಗಳ ಹಿಂದೆ ನವಲಿಹಾಳ ಗ್ರಾಮಕ್ಕೆ ಗಾಂಧೀಜಿ ಆಗಮಿಸಿದ್ದ ಕುರುಹುಗಳ ರಕ್ಷಣೆಯಾಗಬೇಕು. ಇದಕ್ಕೆ ಗಾಂಧಿ ಸ್ಮಾರಕ ನಿರ್ಮಾಣ ಮಾಡಬೇಕು</blockquote><span class="attribution"> ಸಚಿನ ಹುಕ್ಕೇರಿ ಅಧ್ಯಕ್ಷ ಗ್ರಾಮ ಪಂಚಾಯಿತಿ ನವಲಿಹಾಳ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>