<p><strong>ಅಥಣಿ:</strong> ‘ಕಾಂಗ್ರೆಸ್ ಬಡವರ ಪಕ್ಷವಾಗಿದೆ. ಬಡವರ ಉದ್ಧಾರಕ್ಕಾಗಿ ಪಕ್ಷದ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಅವರಿಗೆ ಮತ ನೀಡಿ’ ಎಂದು ಶಾಸಕ ಗಣೇಶ ಹುಕ್ಕೇರಿ ಕೋರಿದರು.</p>.<p>ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿರುವ ತಮ್ಮ ತಂದೆ, ಪ್ರಕಾಶ ಹುಕ್ಕೇರಿ ಪರವಾಗಿ ಐಗಳಿ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ಅಡ್ಡಹಳ್ಳಿ, ಕೊಹಳ್ಳಿ , ಯಕ್ಕಂಚಿ ಮುಂತಾದ ಹಳ್ಳಿಗಳಲ್ಲಿ ಶನಿವಾರ ಅವರು ಮತಯಾಚಿಸಿದರು.</p>.<p>‘₹ 1,000 ಕೋಟಿ ಅನುದಾನ ತಂದು ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಅದರಲ್ಲಿ ಅಥಣಿಗೆ ಕೂಡ ಸಾಕಷ್ಟು ಅನುದಾನ ಕೊಟ್ಟಿದ್ದಾರೆ. ಇನ್ನೂ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಅವರು ಬದ್ಧರಾಗಿದ್ದಾರೆ. ಇನ್ನೊಮ್ಮೆ ಅವರಿಗೆ ಅವಕಾಶ ನೀಡಿ’ ಎಂದು ಕೋರಿದರು.</p>.<p>ಶಾಸಕ ಮಹೇಶ ಕುಮಠಳ್ಳಿ ಮಾತನಾಡಿ, ‘ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹಾಗೂ ಜಾರಕಿಹೋಳಿ ಸಹೋದರರ ಸಹಕಾರದಿಂದ ಹಲವು ಕಾಮಗಾರಿಗಳು ಅಥಣಿಯಲ್ಲಿ ನಡೆದಿವೆ. ಕೆರೆ ತುಂಬುವ ಯೋಜನೆಗೆ ಪ್ರಕಾಶ ಹುಕ್ಕೇರಿ ಸಾಕಷ್ಟು ಅನುದಾನ ಒದಗಿಸಿದ್ದಾರೆ’ ಎಂದರು.</p>.<p>ಮಾಜಿ ಶಾಸಕ ಶಹಜಹಾನ ಡೊಂಗರಗಾವ, ಶ್ಯಾಮ ಪೂಜಾರಿ, ಸತ್ಯಪ್ಪಾ ಬಾಗೆನ್ನವರ, ಅಪ್ಪಾಸಾಬ ಅಲಿಬಾದಿ, ಬಸವರಾಜ ಬುಟಾಳಿ, ದರೆಪ್ಪಾ ಠಕ್ಕಣವರ, ಸುನೀಲ ಸಂಕ, ನಿಂಗಪ್ಪಾ ನಂದೇಶ್ವರ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಥಣಿ:</strong> ‘ಕಾಂಗ್ರೆಸ್ ಬಡವರ ಪಕ್ಷವಾಗಿದೆ. ಬಡವರ ಉದ್ಧಾರಕ್ಕಾಗಿ ಪಕ್ಷದ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಅವರಿಗೆ ಮತ ನೀಡಿ’ ಎಂದು ಶಾಸಕ ಗಣೇಶ ಹುಕ್ಕೇರಿ ಕೋರಿದರು.</p>.<p>ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿರುವ ತಮ್ಮ ತಂದೆ, ಪ್ರಕಾಶ ಹುಕ್ಕೇರಿ ಪರವಾಗಿ ಐಗಳಿ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ಅಡ್ಡಹಳ್ಳಿ, ಕೊಹಳ್ಳಿ , ಯಕ್ಕಂಚಿ ಮುಂತಾದ ಹಳ್ಳಿಗಳಲ್ಲಿ ಶನಿವಾರ ಅವರು ಮತಯಾಚಿಸಿದರು.</p>.<p>‘₹ 1,000 ಕೋಟಿ ಅನುದಾನ ತಂದು ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಅದರಲ್ಲಿ ಅಥಣಿಗೆ ಕೂಡ ಸಾಕಷ್ಟು ಅನುದಾನ ಕೊಟ್ಟಿದ್ದಾರೆ. ಇನ್ನೂ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಅವರು ಬದ್ಧರಾಗಿದ್ದಾರೆ. ಇನ್ನೊಮ್ಮೆ ಅವರಿಗೆ ಅವಕಾಶ ನೀಡಿ’ ಎಂದು ಕೋರಿದರು.</p>.<p>ಶಾಸಕ ಮಹೇಶ ಕುಮಠಳ್ಳಿ ಮಾತನಾಡಿ, ‘ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹಾಗೂ ಜಾರಕಿಹೋಳಿ ಸಹೋದರರ ಸಹಕಾರದಿಂದ ಹಲವು ಕಾಮಗಾರಿಗಳು ಅಥಣಿಯಲ್ಲಿ ನಡೆದಿವೆ. ಕೆರೆ ತುಂಬುವ ಯೋಜನೆಗೆ ಪ್ರಕಾಶ ಹುಕ್ಕೇರಿ ಸಾಕಷ್ಟು ಅನುದಾನ ಒದಗಿಸಿದ್ದಾರೆ’ ಎಂದರು.</p>.<p>ಮಾಜಿ ಶಾಸಕ ಶಹಜಹಾನ ಡೊಂಗರಗಾವ, ಶ್ಯಾಮ ಪೂಜಾರಿ, ಸತ್ಯಪ್ಪಾ ಬಾಗೆನ್ನವರ, ಅಪ್ಪಾಸಾಬ ಅಲಿಬಾದಿ, ಬಸವರಾಜ ಬುಟಾಳಿ, ದರೆಪ್ಪಾ ಠಕ್ಕಣವರ, ಸುನೀಲ ಸಂಕ, ನಿಂಗಪ್ಪಾ ನಂದೇಶ್ವರ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>