<p><strong>ಚಿಕ್ಕೋಡಿ: </strong>‘ನಿರಂತರವಾಗಿ ಕಬ್ಬಿನಂತಹ ಒಂದೇ ಬೆಳೆ ಬೆಳೆಯುವುದರಿಂದ ಜಮೀನು ಫಲವತ್ತತೆ ಕಳೆದುಕೊಳ್ಳುತ್ತದೆ. ಭೂಮಿಯ ಫಲವತ್ತತೆ ಕಾಪಾಡಲು ಪರ್ಯಾಯ ಬೆಳೆ ಆಯ್ಕೆ ಮಾಡಿಕೊಳ್ಳುವುದು ಅತ್ಯಗತ್ಯ. ಕಡಿಮೆ ಅವಧಿಯಲ್ಲಿ ಹೆಚ್ಚಿನ ಆದಾಯ ತಂದುಕೊಡುವ ಬೆಳೆಗಳತ್ತ ಕೃಷಿಕರು ಆಸಕ್ತಿ ವಹಿಸಬೇಕು. ಈ ನಿಟ್ಟಿನಲ್ಲಿ ನಾನು ಕಬ್ಬು ಬೆಳೆಯನ್ನು ಕೈ ಬಿಟ್ಟು ಅರಿಸಿನ ಆಯ್ಕೆ ಮಾಡಿಕೊಂಡಿದ್ದೇನೆ’.</p>.<p>ನಿಪ್ಪಾಣಿ ತಾಲ್ಲೂಕಿನ ಚಾಂದಶಿರದವಾಡ ಗ್ರಾಮದ ಪ್ರಗತಿಪರ ಕೃಷಿಕ ದೇವೇಂದ್ರ ಸಾತಗೌಡ ಪಾಟೀಲ ಅವರ ಅನುಭವದ ಮಾತುಗಳಿವು.</p>.<p>ಬಿ.ಎಸ್ಸಿ. (ಕೃಷಿ) ಪದವೀಧರರಾದ ದೇವೇಂದ್ರ, ಬೋರಗಾಂವ ಗ್ರಾಮ ವ್ಯಾಪ್ತಿಯಲ್ಲಿ ಬರುವ ತಮ್ಮ ಒಂದೂವರೆ ಎಕರೆ ಮಸಾರಿ ಭೂಮಿಯಲ್ಲಿ ಅರಿಸಿನ ಬೆಳೆ ಬೆಳೆದಿದ್ದು, 9 ತಿಂಗಳುಗಳ ಅವಧಿಯಲ್ಲಿ ಈ ಬೆಳೆಯಿಂದ ಖರ್ಚು–ವೆಚ್ಚ ಕಳೆದು ₹ 3.50 ಲಕ್ಷ ಆದಾಯದ ನಿರೀಕ್ಷೆಯಲ್ಲಿದ್ದಾರೆ.</p>.<p>‘ಒಂದು ಎಕರೆಯಲ್ಲಿ ‘ಸೇಲಂ’ ತಳಿಯ ಅರಿಸಿನ ಬೆಳೆದಿದ್ದೇನೆ. 4 ಅಡಿ 3 ಇಂಚು ಅಗಲದ ಬೆಡ್ನಲ್ಲಿ ಸಾಲಿನಿಂದ ಸಾಲಿಗೆ 15 ಇಂಚು ಅಂತರದಲ್ಲಿ 2 ಸಾಲುಗಳಲ್ಲಿ ನಾಟಿ ಮಾಡಿದ್ದೇವೆ. ಬೀಜದಿಂದ ಬೀಜಕ್ಕೆ 12 ಇಂಚು ಅಂತರ ಬಿಡಲಾಗಿದೆ. ಬೆಳಿಗೆ ಹನಿ ನೀರಾವರಿ ಪದ್ಧತಿ ಅಳವಡಿಸಲಾಗಿದೆ. ಸೇಲಂ ತಳಿಯ ಅರಿಸಿನವು ಎಕರೆಯೊಂದಕ್ಕೆ ಕನಿಷ್ಠ 25ರಿಂದ 30 ಕ್ವಿಂಟಲ್ ಇಳುವರಿ ನೀಡುತ್ತದೆ. ಕ್ವಿಂಟಲ್ಗೆ ಸರಾಸರಿ ₹ 8 ಸಾವಿರದಿಂದ ₹ 10ಸಾವಿರ ದೊರೆತರೂ ₹ 1.60 ಲಕ್ಷ ರೂಪಾಯಿ ಆದಾಯ ದೊರಕುತ್ತದೆ. ಇದಲ್ಲದೇ 10ರಿಂದ 15 ಕ್ವಿಂಟಲ್ ಅರಿಸಿನ ಬೀಜ ದೊರೆಯುತ್ತದೆ. ಇದರಿಂದ ₹ 75ಸಾವಿರ ಆದಾಯ ಬರುತ್ತದೆ. ಅರಿಸಿನ ಪುಡಿ 4 ಕ್ವಿಂಟಲ್ನನಷ್ಟು ದೊರಕಲಿದ್ದು, ಇದರಿಂದ ಕನಿಷ್ಠ ₹ 48ಸಾವಿರ ಸಿಗುವ ನಿರೀಕ್ಷೆ ಇದೆ. ಒಟ್ಟಾರೆ 1 ಎಕರೆ ಸೇಲಂ ಅರಿಸಿನ ಬೆಳೆಯಿಂದ ಒಂಬತ್ತು ತಿಂಗಳುಗಳಲ್ಲಿ ಖರ್ಚು ಕಳೆದು ₹ 2.50 ಲಕ್ಷ ಆದಾಯ ಕೈಸೇರಲಿದೆ’ ಎಂಬ ವಿಶ್ವಾಸ ಅವರದು.</p>.<p>‘ಅರ್ಧ ಎಕರೆ ಭೂಮಿಯಲ್ಲಿ ತಮಿಳುನಾಡಿನ ಐಐಎಸ್ಆರ್ ಸಂಸ್ಥೆಯು ಅಭಿವೃದ್ಧಿಪಡಿಸಿರುವ ‘ಪ್ರತಿಭಾ’ ತಳಿಯ ಅರಿಸಿನ ನಾಟಿ ಮಾಡಲಾಗಿದೆ. ಅರಿಸಿನದ ಗುಣಮಟ್ಟ ನಿರ್ಧರಿಸಿರುವ ‘ಕುಕುರ್ಮಿನ್’ ಅಂಶ ಈ ತಳಿಯಲ್ಲಿ ಇತರ ತಳಿಗಿಂತ ಅತೀ ಹೆಚ್ಚು ಶೇ. 6ರಷ್ಟು ದೊರಕಲಿದ್ದು, ಇದು ರೋಗ ನಿರೋಧಕ ಶಕ್ತಿಯನ್ನೂ ಹೊಂದಿದೆ. ಇದರಿಂದ ಅರ್ಧ ಎಕರೆಯಲ್ಲಿ ವೆಚ್ಚ ಕಳೆದು ₹ 1.30 ಲಕ್ಷ ಆದಾಯ ನಿರೀಕ್ಷಿಸುತ್ತಿದ್ದೇನೆ’ ಎಂದು ದೇವೇಂದ್ರ ಮಾಹಿತಿ ನೀಡಿದರು.</p>.<p>‘ಅರಿಸಿನ ಸಂಸ್ಕರಣೆ ಕಾರ್ಯವನ್ನು ಮಹಾರಾಷ್ಟ್ರದ ಕಾರ್ಮಿಕರಿಂದ ಮಾಡಿಸಲಿದ್ದೇನೆ. ಚಾಂದಶಿರದವಾಡ ಮತ್ತು ಸುತ್ತಲಿನ ವಿವಿಧ ಗ್ರಾಮಗಳ ರೈತರು ಸಾಮೂಹಿಕ ಅರಿಸಿನ ಕೃಷಿ ಕೈಗೊಂಡಿದ್ದು, ಎಲ್ಲರೂ ಒಟ್ಟಾಗಿ ಮಹಾರಾಷ್ಟ್ರದ ಕಾರ್ಮಿಕರಿಂದ ಸಂಸ್ಕರಣೆ ಕಾರ್ಯ ಕೈಗೊಳ್ಳುತ್ತೇವೆ’ ಎನ್ನುತ್ತಾರೆ ಅವರು. ಆಸಕ್ತರು ಹೆಚ್ಚಿನ ಮಾಹಿತಿಗೆ ಮೊ: 9632190838 ಸಂಪರ್ಕಿಸಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕೋಡಿ: </strong>‘ನಿರಂತರವಾಗಿ ಕಬ್ಬಿನಂತಹ ಒಂದೇ ಬೆಳೆ ಬೆಳೆಯುವುದರಿಂದ ಜಮೀನು ಫಲವತ್ತತೆ ಕಳೆದುಕೊಳ್ಳುತ್ತದೆ. ಭೂಮಿಯ ಫಲವತ್ತತೆ ಕಾಪಾಡಲು ಪರ್ಯಾಯ ಬೆಳೆ ಆಯ್ಕೆ ಮಾಡಿಕೊಳ್ಳುವುದು ಅತ್ಯಗತ್ಯ. ಕಡಿಮೆ ಅವಧಿಯಲ್ಲಿ ಹೆಚ್ಚಿನ ಆದಾಯ ತಂದುಕೊಡುವ ಬೆಳೆಗಳತ್ತ ಕೃಷಿಕರು ಆಸಕ್ತಿ ವಹಿಸಬೇಕು. ಈ ನಿಟ್ಟಿನಲ್ಲಿ ನಾನು ಕಬ್ಬು ಬೆಳೆಯನ್ನು ಕೈ ಬಿಟ್ಟು ಅರಿಸಿನ ಆಯ್ಕೆ ಮಾಡಿಕೊಂಡಿದ್ದೇನೆ’.</p>.<p>ನಿಪ್ಪಾಣಿ ತಾಲ್ಲೂಕಿನ ಚಾಂದಶಿರದವಾಡ ಗ್ರಾಮದ ಪ್ರಗತಿಪರ ಕೃಷಿಕ ದೇವೇಂದ್ರ ಸಾತಗೌಡ ಪಾಟೀಲ ಅವರ ಅನುಭವದ ಮಾತುಗಳಿವು.</p>.<p>ಬಿ.ಎಸ್ಸಿ. (ಕೃಷಿ) ಪದವೀಧರರಾದ ದೇವೇಂದ್ರ, ಬೋರಗಾಂವ ಗ್ರಾಮ ವ್ಯಾಪ್ತಿಯಲ್ಲಿ ಬರುವ ತಮ್ಮ ಒಂದೂವರೆ ಎಕರೆ ಮಸಾರಿ ಭೂಮಿಯಲ್ಲಿ ಅರಿಸಿನ ಬೆಳೆ ಬೆಳೆದಿದ್ದು, 9 ತಿಂಗಳುಗಳ ಅವಧಿಯಲ್ಲಿ ಈ ಬೆಳೆಯಿಂದ ಖರ್ಚು–ವೆಚ್ಚ ಕಳೆದು ₹ 3.50 ಲಕ್ಷ ಆದಾಯದ ನಿರೀಕ್ಷೆಯಲ್ಲಿದ್ದಾರೆ.</p>.<p>‘ಒಂದು ಎಕರೆಯಲ್ಲಿ ‘ಸೇಲಂ’ ತಳಿಯ ಅರಿಸಿನ ಬೆಳೆದಿದ್ದೇನೆ. 4 ಅಡಿ 3 ಇಂಚು ಅಗಲದ ಬೆಡ್ನಲ್ಲಿ ಸಾಲಿನಿಂದ ಸಾಲಿಗೆ 15 ಇಂಚು ಅಂತರದಲ್ಲಿ 2 ಸಾಲುಗಳಲ್ಲಿ ನಾಟಿ ಮಾಡಿದ್ದೇವೆ. ಬೀಜದಿಂದ ಬೀಜಕ್ಕೆ 12 ಇಂಚು ಅಂತರ ಬಿಡಲಾಗಿದೆ. ಬೆಳಿಗೆ ಹನಿ ನೀರಾವರಿ ಪದ್ಧತಿ ಅಳವಡಿಸಲಾಗಿದೆ. ಸೇಲಂ ತಳಿಯ ಅರಿಸಿನವು ಎಕರೆಯೊಂದಕ್ಕೆ ಕನಿಷ್ಠ 25ರಿಂದ 30 ಕ್ವಿಂಟಲ್ ಇಳುವರಿ ನೀಡುತ್ತದೆ. ಕ್ವಿಂಟಲ್ಗೆ ಸರಾಸರಿ ₹ 8 ಸಾವಿರದಿಂದ ₹ 10ಸಾವಿರ ದೊರೆತರೂ ₹ 1.60 ಲಕ್ಷ ರೂಪಾಯಿ ಆದಾಯ ದೊರಕುತ್ತದೆ. ಇದಲ್ಲದೇ 10ರಿಂದ 15 ಕ್ವಿಂಟಲ್ ಅರಿಸಿನ ಬೀಜ ದೊರೆಯುತ್ತದೆ. ಇದರಿಂದ ₹ 75ಸಾವಿರ ಆದಾಯ ಬರುತ್ತದೆ. ಅರಿಸಿನ ಪುಡಿ 4 ಕ್ವಿಂಟಲ್ನನಷ್ಟು ದೊರಕಲಿದ್ದು, ಇದರಿಂದ ಕನಿಷ್ಠ ₹ 48ಸಾವಿರ ಸಿಗುವ ನಿರೀಕ್ಷೆ ಇದೆ. ಒಟ್ಟಾರೆ 1 ಎಕರೆ ಸೇಲಂ ಅರಿಸಿನ ಬೆಳೆಯಿಂದ ಒಂಬತ್ತು ತಿಂಗಳುಗಳಲ್ಲಿ ಖರ್ಚು ಕಳೆದು ₹ 2.50 ಲಕ್ಷ ಆದಾಯ ಕೈಸೇರಲಿದೆ’ ಎಂಬ ವಿಶ್ವಾಸ ಅವರದು.</p>.<p>‘ಅರ್ಧ ಎಕರೆ ಭೂಮಿಯಲ್ಲಿ ತಮಿಳುನಾಡಿನ ಐಐಎಸ್ಆರ್ ಸಂಸ್ಥೆಯು ಅಭಿವೃದ್ಧಿಪಡಿಸಿರುವ ‘ಪ್ರತಿಭಾ’ ತಳಿಯ ಅರಿಸಿನ ನಾಟಿ ಮಾಡಲಾಗಿದೆ. ಅರಿಸಿನದ ಗುಣಮಟ್ಟ ನಿರ್ಧರಿಸಿರುವ ‘ಕುಕುರ್ಮಿನ್’ ಅಂಶ ಈ ತಳಿಯಲ್ಲಿ ಇತರ ತಳಿಗಿಂತ ಅತೀ ಹೆಚ್ಚು ಶೇ. 6ರಷ್ಟು ದೊರಕಲಿದ್ದು, ಇದು ರೋಗ ನಿರೋಧಕ ಶಕ್ತಿಯನ್ನೂ ಹೊಂದಿದೆ. ಇದರಿಂದ ಅರ್ಧ ಎಕರೆಯಲ್ಲಿ ವೆಚ್ಚ ಕಳೆದು ₹ 1.30 ಲಕ್ಷ ಆದಾಯ ನಿರೀಕ್ಷಿಸುತ್ತಿದ್ದೇನೆ’ ಎಂದು ದೇವೇಂದ್ರ ಮಾಹಿತಿ ನೀಡಿದರು.</p>.<p>‘ಅರಿಸಿನ ಸಂಸ್ಕರಣೆ ಕಾರ್ಯವನ್ನು ಮಹಾರಾಷ್ಟ್ರದ ಕಾರ್ಮಿಕರಿಂದ ಮಾಡಿಸಲಿದ್ದೇನೆ. ಚಾಂದಶಿರದವಾಡ ಮತ್ತು ಸುತ್ತಲಿನ ವಿವಿಧ ಗ್ರಾಮಗಳ ರೈತರು ಸಾಮೂಹಿಕ ಅರಿಸಿನ ಕೃಷಿ ಕೈಗೊಂಡಿದ್ದು, ಎಲ್ಲರೂ ಒಟ್ಟಾಗಿ ಮಹಾರಾಷ್ಟ್ರದ ಕಾರ್ಮಿಕರಿಂದ ಸಂಸ್ಕರಣೆ ಕಾರ್ಯ ಕೈಗೊಳ್ಳುತ್ತೇವೆ’ ಎನ್ನುತ್ತಾರೆ ಅವರು. ಆಸಕ್ತರು ಹೆಚ್ಚಿನ ಮಾಹಿತಿಗೆ ಮೊ: 9632190838 ಸಂಪರ್ಕಿಸಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>