ನಿರಂತರ ಮಳೆಯಿಂದಾಗಿ ಬೆಳಗಾವಿಯ ಎಪಿಎಂಸಿ ಗೋಡೆ ಶಿಥಿಲಗೊಂಡು, ನೆಲಕ್ಕುರುಳಿದೆ. ರಸ್ತೆಯ ಮೇಲೆಯೇ ದೊಡ್ಡ ದೊಡ್ಡ ಕಲ್ಲುಗಳು ಉರುಳಿ ಬಿದ್ದಿರುವುದರಿಂದ ಜ್ಯೋತಿ ನಗರ ಕಡೆ ಹೋಗುವ ಮಾರ್ಗ ಬಂದ್ ಆಗಿದೆ.
ಬೆಳಗಾವಿ ತಾಲ್ಲೂಕಿನ ಕಡೋಲಿ- ದೇವಗಿರಿ ರಸ್ತೆಯ ಮೇಲೆ ಒಂದರಿಂದ ಎರಡು ಅಡಿಗಳಷ್ಟು ನೀರು ಹರಿಯುತ್ತಿದ್ದು, ವಾಹನಗಳ ಸಂಚಾರ ಸ್ಥಗಿತಗೊಂಡಿದೆ.