<p><strong>ಚನ್ನಮ್ಮನ ಕಿತ್ತೂರು</strong>: ಕನ್ನಡ ಸಂಕೇತಿಸುವ ಅರಿಶಿನ-ಕುಂಕುಮದ ಬಣ್ಣ, ಬಸ್ ಹೊರಭಾಗದಲ್ಲಿ ಕನ್ನಡ ಭಾಷಾ ಶ್ರೀಮಂತಿಕೆಗಾಗಿ ಶ್ರಮಿಸಿದ ಸಂತರು, ಶರಣರು, ಸಾಹಿತಿಗಳ ಚಿತ್ರಗಳು. ಮುಂದೆ ನಾಡದೇವಿ ಭುವನೇಶ್ವರಿ ಮೂರ್ತಿ. ಇವೆಲ್ಲದರ ಜೊತೆಗೆ ಹಾರಾಡುವ ಕನ್ನಡ ಧ್ವಜಗಳು ಮತ್ತು ಕನ್ನಡ ನಾಡು–ನುಡಿ ಬಿತ್ತರಿಸುವ ಗೀತೆಗಳ ಪ್ರಸಾರ.</p>.<p>ವಾಯವ್ಯ ಸಾರಿಗೆ ಸಂಸ್ಥೆಯ ಹಾವೇರಿ ಜಿಲ್ಲೆಯ ಹಿರೇಕೆರೂರು ಘಟಕದ ಬಸ್ ಹೀಗೆ ಅಂದವಾಗಿ ಅಲಂಕೃತಗೊಂಡಿದೆ. ಈ ಬಸ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಚನ್ನಮ್ಮನ ಕಿತ್ತೂರು ಮಾರ್ಗವಾಗಿ ಕೊಲ್ಹಾಪುರಕ್ಕೆ ಸಂಚರಿಸುತ್ತದೆ.</p>.<p>‘ಕೈಮುಗಿದು ಏರು. ಇದು ಹಿರೇಕೆರೂರ ಘಟಕದ ಕನ್ನಡದ ತೇರು’ ಎಂಬ ಬರಹವು ಬಸ್ ಮೇಲಿದೆ. ಈ ಕನ್ನಡಮಯ ಬಸ್ ಕಂಡು ಹಲವರು ಫೋಟೊ ಕ್ಲಿಕ್ಕಿಸಿಕೊಂಡರು. ಬಸ್ನ ಚಾಲಕ ಮತ್ತು ನಿರ್ವಾಹಕರನ್ನು ಅಭಿನಂದಿಸಿದರು.</p>.<p>‘ಹಿರಿಯ ಅಧಿಕಾರಿಗಳ ಸಹಕಾರದಿಂದ ಕರ್ನಾಟಕ ರಾಜ್ಯೋತ್ಸವ ದಿನದಂದೇ ಕನ್ನಡಮಯವಾಗಿ ಬಸ್ ಸಿಂಗರಿಸಿದ್ದೇವೆ. ಜನರಲ್ಲಿ ಕನ್ನಡ ಪ್ರೇಮ ಬೆಳೆಸಲು ಬಸ್ ಹೀಗೆ ಅಲಂಕರಿಸಿದ್ದೇವೆ. ಕನ್ನಡ ಕಟ್ಟುವ ಕಾಯಕದಲ್ಲಿ ಖುಷಿ ಕಂಡಿದ್ದೇವೆ’ ಎಂದು ಚಾಲಕ ಶಶಿ ‘ಪ್ರಜಾವಾಣಿ’ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚನ್ನಮ್ಮನ ಕಿತ್ತೂರು</strong>: ಕನ್ನಡ ಸಂಕೇತಿಸುವ ಅರಿಶಿನ-ಕುಂಕುಮದ ಬಣ್ಣ, ಬಸ್ ಹೊರಭಾಗದಲ್ಲಿ ಕನ್ನಡ ಭಾಷಾ ಶ್ರೀಮಂತಿಕೆಗಾಗಿ ಶ್ರಮಿಸಿದ ಸಂತರು, ಶರಣರು, ಸಾಹಿತಿಗಳ ಚಿತ್ರಗಳು. ಮುಂದೆ ನಾಡದೇವಿ ಭುವನೇಶ್ವರಿ ಮೂರ್ತಿ. ಇವೆಲ್ಲದರ ಜೊತೆಗೆ ಹಾರಾಡುವ ಕನ್ನಡ ಧ್ವಜಗಳು ಮತ್ತು ಕನ್ನಡ ನಾಡು–ನುಡಿ ಬಿತ್ತರಿಸುವ ಗೀತೆಗಳ ಪ್ರಸಾರ.</p>.<p>ವಾಯವ್ಯ ಸಾರಿಗೆ ಸಂಸ್ಥೆಯ ಹಾವೇರಿ ಜಿಲ್ಲೆಯ ಹಿರೇಕೆರೂರು ಘಟಕದ ಬಸ್ ಹೀಗೆ ಅಂದವಾಗಿ ಅಲಂಕೃತಗೊಂಡಿದೆ. ಈ ಬಸ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಚನ್ನಮ್ಮನ ಕಿತ್ತೂರು ಮಾರ್ಗವಾಗಿ ಕೊಲ್ಹಾಪುರಕ್ಕೆ ಸಂಚರಿಸುತ್ತದೆ.</p>.<p>‘ಕೈಮುಗಿದು ಏರು. ಇದು ಹಿರೇಕೆರೂರ ಘಟಕದ ಕನ್ನಡದ ತೇರು’ ಎಂಬ ಬರಹವು ಬಸ್ ಮೇಲಿದೆ. ಈ ಕನ್ನಡಮಯ ಬಸ್ ಕಂಡು ಹಲವರು ಫೋಟೊ ಕ್ಲಿಕ್ಕಿಸಿಕೊಂಡರು. ಬಸ್ನ ಚಾಲಕ ಮತ್ತು ನಿರ್ವಾಹಕರನ್ನು ಅಭಿನಂದಿಸಿದರು.</p>.<p>‘ಹಿರಿಯ ಅಧಿಕಾರಿಗಳ ಸಹಕಾರದಿಂದ ಕರ್ನಾಟಕ ರಾಜ್ಯೋತ್ಸವ ದಿನದಂದೇ ಕನ್ನಡಮಯವಾಗಿ ಬಸ್ ಸಿಂಗರಿಸಿದ್ದೇವೆ. ಜನರಲ್ಲಿ ಕನ್ನಡ ಪ್ರೇಮ ಬೆಳೆಸಲು ಬಸ್ ಹೀಗೆ ಅಲಂಕರಿಸಿದ್ದೇವೆ. ಕನ್ನಡ ಕಟ್ಟುವ ಕಾಯಕದಲ್ಲಿ ಖುಷಿ ಕಂಡಿದ್ದೇವೆ’ ಎಂದು ಚಾಲಕ ಶಶಿ ‘ಪ್ರಜಾವಾಣಿ’ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>