<p>ಪ್ರಜಾವಾಣಿ ವಾರ್ತೆ</p>.<p>ಹುಕ್ಕೇರಿ: ಪಟ್ಟಣದಲ್ಲಿ 1928ರಲ್ಲಿ ಸ್ಥಾಪಿವಾಗಿರುವ ಹುಕ್ಕೇರಿ ಅರ್ಬನ್ ಕೋ ಆಪ್ ಬ್ಯಾಂಕವು 2024– 25ನೇ ಸಾಲಿಗೆ ₹80 ಲಕ್ಷ ನಿವ್ವಳ ಲಾಭ ಗಳಿಸಿದ್ದು, 2028ರಲ್ಲಿ ಶತಮಾನೋತ್ಸವ ಆಚರಿಸಿಕೊಳ್ಳಲಿದೆ ಎಂದು ಬ್ಯಾಂಕಿನ ಅಧ್ಯಕ್ಷ ಚಂದ್ರಶೇಖರ್ ಪಾಟೀಲ್ ಹೇಳಿದರು.</p>.<p>ಶುಕ್ರವಾರ ಬ್ಯಾಂಕಿನ ಸಭಾಗ್ರಹದಲ್ಲಿ ನಡೆದ ಪತ್ರಿಗೋಷ್ಠಿಯಲ್ಲಿ ಪ್ರಗತಿ ಪಕ್ಷಿನೋಟದ ಮಾಹಿತಿ ನೀಡಿದ ಅವರು, ’ಬ್ಯಾಂಕು 5215 ಸದಸ್ಯರನ್ನು ಹೊಂದಿ ₹2.41 ಕೋಟಿ ಷೇರು ಬಂಡವಾಳ, ₹9.66 ಕೋಟಿ ಸ್ವಂತ ಬಂಡವಾಳ ಹಾಗೂ ₹38.19 ಕೋಟಿ ಗುಂತಾವಣಿ (ಹೂಡಿಕೆ) ಹೊಂದಿದೆ‘ ಎಂದರು.</p>.<p>ಉಪಾಧ್ಯಕ್ಷ ಪ್ರಭು ಸಾಂಬಾರೆ ಮಾತನಾಡಿ, ‘ಬ್ಯಾಂಕು 108.83 ಕೋಟಿ ದುಡಿಯುವ ಬಂಡವಾಳ, ₹744.61 ಕೋಟಿ ಆರ್ಥಿಕ ವಹಿವಾಟು ನಡೆಸಿ, 0.78 ಎನ್.ಪಿ.ಎ.ಹೊಂದಿದೆ‘ ಎಂದರು.</p>.<p>ಬ್ಯಾಂಕು ನಿರ್ದೇಶಕ ಗುರುಲಿಂಗಪ್ಪ (ಸೋಮು) ಗಂಧ ಮಾತನಾಡಿ, ಈ ವರ್ಷದಲ್ಲಿ ಬ್ಯಾಂಕು ₹94.50 ಕೋಟಿಯಿಂದ ₹100 ಕೋಟಿ ಠೇವು ಸಂಗ್ರಹದ ಗುರಿ ಇದ್ದು, ಜತೆಗೆ ಇನ್ನೂ 4 ಶಾಖೆ ತೆರೆಯಲು ಆಡಳಿತ ಮಂಡಳಿ ನಿರ್ಧರಿಸಿದೆ‘ ಎಂದರು.</p>.<p>ಪ್ರಧಾನ ವ್ಯವಸ್ಥಾಪಕ ಕೆ.ಬಿ.ಬಂಡಾಯಿ ಮಾಹಿತಿ ನೀಡಿ ಸಾಲ ವಸೂಲಾತಿ ಶೇ 96.50 ಆಗಿದ್ದು, ಸದಸ್ಯರಿಗೆ ಲಾಭಾಂಶ ಕುರಿತು ಸ್ವಸಾಧಾರಣ ಸಭೆಯಲ್ಲಿ ನಿರ್ಧರಿಸಲಾಗುವುದು ಎಂದರು.</p>.<p>ನಿರ್ದೇಶಕರಾದ ಶಿವಾನಂದ ನೂಲಿ, ರಾಜಕುಮಾರ ಬಾಗಲಕೋಟ, ಮೌನೇಶ್ ಪೋತದಾರ್ ಇದ್ದರು. ಕಾಡಪ್ಪ ಬಂದಾಯಿ ಸ್ವಾಗತಿಸಿ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪ್ರಜಾವಾಣಿ ವಾರ್ತೆ</p>.<p>ಹುಕ್ಕೇರಿ: ಪಟ್ಟಣದಲ್ಲಿ 1928ರಲ್ಲಿ ಸ್ಥಾಪಿವಾಗಿರುವ ಹುಕ್ಕೇರಿ ಅರ್ಬನ್ ಕೋ ಆಪ್ ಬ್ಯಾಂಕವು 2024– 25ನೇ ಸಾಲಿಗೆ ₹80 ಲಕ್ಷ ನಿವ್ವಳ ಲಾಭ ಗಳಿಸಿದ್ದು, 2028ರಲ್ಲಿ ಶತಮಾನೋತ್ಸವ ಆಚರಿಸಿಕೊಳ್ಳಲಿದೆ ಎಂದು ಬ್ಯಾಂಕಿನ ಅಧ್ಯಕ್ಷ ಚಂದ್ರಶೇಖರ್ ಪಾಟೀಲ್ ಹೇಳಿದರು.</p>.<p>ಶುಕ್ರವಾರ ಬ್ಯಾಂಕಿನ ಸಭಾಗ್ರಹದಲ್ಲಿ ನಡೆದ ಪತ್ರಿಗೋಷ್ಠಿಯಲ್ಲಿ ಪ್ರಗತಿ ಪಕ್ಷಿನೋಟದ ಮಾಹಿತಿ ನೀಡಿದ ಅವರು, ’ಬ್ಯಾಂಕು 5215 ಸದಸ್ಯರನ್ನು ಹೊಂದಿ ₹2.41 ಕೋಟಿ ಷೇರು ಬಂಡವಾಳ, ₹9.66 ಕೋಟಿ ಸ್ವಂತ ಬಂಡವಾಳ ಹಾಗೂ ₹38.19 ಕೋಟಿ ಗುಂತಾವಣಿ (ಹೂಡಿಕೆ) ಹೊಂದಿದೆ‘ ಎಂದರು.</p>.<p>ಉಪಾಧ್ಯಕ್ಷ ಪ್ರಭು ಸಾಂಬಾರೆ ಮಾತನಾಡಿ, ‘ಬ್ಯಾಂಕು 108.83 ಕೋಟಿ ದುಡಿಯುವ ಬಂಡವಾಳ, ₹744.61 ಕೋಟಿ ಆರ್ಥಿಕ ವಹಿವಾಟು ನಡೆಸಿ, 0.78 ಎನ್.ಪಿ.ಎ.ಹೊಂದಿದೆ‘ ಎಂದರು.</p>.<p>ಬ್ಯಾಂಕು ನಿರ್ದೇಶಕ ಗುರುಲಿಂಗಪ್ಪ (ಸೋಮು) ಗಂಧ ಮಾತನಾಡಿ, ಈ ವರ್ಷದಲ್ಲಿ ಬ್ಯಾಂಕು ₹94.50 ಕೋಟಿಯಿಂದ ₹100 ಕೋಟಿ ಠೇವು ಸಂಗ್ರಹದ ಗುರಿ ಇದ್ದು, ಜತೆಗೆ ಇನ್ನೂ 4 ಶಾಖೆ ತೆರೆಯಲು ಆಡಳಿತ ಮಂಡಳಿ ನಿರ್ಧರಿಸಿದೆ‘ ಎಂದರು.</p>.<p>ಪ್ರಧಾನ ವ್ಯವಸ್ಥಾಪಕ ಕೆ.ಬಿ.ಬಂಡಾಯಿ ಮಾಹಿತಿ ನೀಡಿ ಸಾಲ ವಸೂಲಾತಿ ಶೇ 96.50 ಆಗಿದ್ದು, ಸದಸ್ಯರಿಗೆ ಲಾಭಾಂಶ ಕುರಿತು ಸ್ವಸಾಧಾರಣ ಸಭೆಯಲ್ಲಿ ನಿರ್ಧರಿಸಲಾಗುವುದು ಎಂದರು.</p>.<p>ನಿರ್ದೇಶಕರಾದ ಶಿವಾನಂದ ನೂಲಿ, ರಾಜಕುಮಾರ ಬಾಗಲಕೋಟ, ಮೌನೇಶ್ ಪೋತದಾರ್ ಇದ್ದರು. ಕಾಡಪ್ಪ ಬಂದಾಯಿ ಸ್ವಾಗತಿಸಿ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>