ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈನಮುನಿ ಹತ್ಯೆ ಪ್ರಕರಣ: 3ನೇ ದಿನವೂ ಮುಂದುವರಿದ ತನಿಖೆ

Published 26 ಜುಲೈ 2023, 14:39 IST
Last Updated 26 ಜುಲೈ 2023, 14:39 IST
ಅಕ್ಷರ ಗಾತ್ರ

ಚಿಕ್ಕೋಡಿ: ತಾಲ್ಲೂಕಿನ ಹಿರೇಕೋಡಿ ಗ್ರಾಮದ ನಂದಿ ಪರ್ವತದ ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಪ್ರಕರಣದ ತನಿಖೆ ಕೈಗೊಂಡಿರುವ ಅಪರಾಧ ತನಿಖಾ ದಳ ಅಧಿಕಾರಿಗಳು ಬುಧವಾರವೂ ಹಿರೇಕೋಡಿ ನಂದಿ ಪರ್ವತ ಹಾಗೂ ರಾಯಬಾಗ ತಾಲ್ಲೂಕಿನ ಖಟಕಭಾವಿ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬುಧವಾರ ಸಿಐಡಿ ಮತ್ತು ಐಎಫ್ಸಿಎಲ್ ತಂಡದ ಅಧಿಕಾರಿಗಳು ಜೈನ ಮುನಿ ಹತ್ಯೆಯಾಗಿರುವ ಹಿರೇಕೋಡಿಯ ನಂದಿ ಪರ್ವತಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತದನಂತರ ಜೈನಮುನಿಯನ್ನು ಹತ್ಯೆಗೈದು ಶವವನ್ನು ತುಂಡರಿಸಿ ಎಸೆಯಲಾಗಿದ್ದ ಖಟಕಬಾವಿಯ ಕೊಳವೆಬಾವಿಯ ಬಳಿ ಪರಿಶೀಲಿಸಿದರು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT