ಚುನಾವಣೆ ಅಧಿಕಾರಿ ಅಶೋಕ ಗುರಾಣಿ ಅಧಿಕೃತ ಘೋಷಣೆ ಮಾಡಿದರು. ನಂತರ ಅಧ್ಯಕ್ಷ ಕಲಗೌಡ ಮತ್ತು ಉಪಾಧ್ಯಕ್ಷ ವಿಷ್ಟು ಅವರು ಸಂಘದ ಸಂಸ್ಥಾಪಕ ದಿ.ಅಪ್ಪಣಗೌಡರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ನಿರ್ದೇಶಕರಾದ ಪೃಥ್ವಿ ಕತ್ತಿ, ಅಶೋಕ ಚಂದಪ್ಪಗೋಳ, ಸೋಮಲಿಂಗ ಪಟೋಳಿ, ಕುನಾಲ ಪಾಟೀಲ, ಜಯಗೌಡ ಪಾಟೀಲ, ಶಶಿರಾಜ ಪಾಟೀಲ, ಬಸಗೌಡ ಮಗೆಣ್ಣವರ, ರವೀಂದ್ರ ಹಿಡಕಲ್, ಕೆಂಚಪ್ಪ ಬೆಣಚಿನಮರಡಿ, ರವೀಂದ್ರ ಅಸೂದೆ, ಈರಪ್ಪ ಬಂಜಿರಾಮ, ಸಂಗೀತಾ ದಪ್ಪಾಧೂಳಿ, ಶಿವಲೀಲಾ ಮಣಗುತ್ತಿ ಉಪಸ್ಥಿತರಿದ್ದರು.