<p><strong>ತೆಲಸಂಗ</strong> (ಬೆಳಗಾವಿ ಜಿಲ್ಲೆ): ‘ಸೈನಿಕರು ಪ್ರಾಣದ ಹಂಗು ತೊರೆದು ಯುಧ್ಧಭೂಮಿಯಲ್ಲಿ ಜೀವ ತೆತ್ತು ದೇಶದ ರಕ್ಷಣೆ ಮಾಡುತ್ತಾರೆ. ಅವರ ತ್ಯಾಗಕ್ಕೆ ಮತ್ತು ಹರಿಸಿದ ರಕ್ತಕ್ಕೆ ಅರ್ಥ ಬರಬೇಕಾದರೆ ಜನರು ದೇಶಕ್ಕಾಗಿ ಬದುಕುವುದನ್ನು ಕಲಿಯಬೇಕು’ ಎಂದು ಹಿರೇಮಠದ ವೀರೇಶ್ವರ ದೇವರು ಹೇಳಿದರು.</p>.<p>ಗ್ರಾಮದ ಮುಖ್ಯ ಬಜಾರ್ನಲ್ಲಿ ನಿವೃತ್ತ ಸೈನಿಕರ ಸಂಘದಿಂದ ಸೋಮವಾರ ಏರ್ಪಡಿಸಿದ್ದ ಕಾರ್ಗಿಲ್ ವಿಜಯ ದಿವಸ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ನೆರೆಯ ಪಾಕಿಸ್ತಾನ ಪದೇ ಪದೇ ದೇಶದೊಳಕ್ಕೆ ನುಸಳಲು ಯತ್ನಿಸುತ್ತಲೇ ಇದೆ. ನಮ್ಮ ಸೈನಿಕರು ಅದೆಷ್ಟು ಬಾರಿ ಸೊಕ್ಕಡಗಿಸಿದರೂ ಆ ದೇಶ ಪಾಠ ಕಲಿತಿಲ್ಲ. ಭಾರತದ ಯೋಧರ ವೀರತ್ವದ ಬಗ್ಗೆ ಜಗತ್ತೇ ಶ್ಲಾಘಿಸುತ್ತಿದೆ. ಕಾರ್ಗಿಲ್ ಯುದ್ಧ ಗೆದ್ದ ಸೈನಿಕರ ಶೌರ್ಯವನ್ನು ಬಣ್ಣಿಸಲು ಪದಗಳೇ ಇಲ್ಲ. ಕಾರ್ಗಿಲ್ ಯುದ್ಧದಲ್ಲಿ ಮಡಿದ ವೀರ ಯೋಧರ ಆತ್ಮಕ್ಕೆ ಸಾಂತಿ ಸಿಗಲಿ’ ಎಂದರು.</p>.<p>ಗ್ರಾ.ಪಂ. ಅಧ್ಯಕ್ಷ ವಿಲಾಸ್ ಮೋರೆ, ಸಂಘದ ಅಧ್ಯಕ್ಷ ಸಾಬು ಅರಟಾಳ, ಗಂಗಪ್ಪ ಗಂಗಾಧರ, ಬಸವರಾಜ ರೊಟ್ಟಿ, ಶಿವಯೋಗಿ ಹತ್ತಿ, ಮುನ್ನಾ ಕರಜಗಿ, ಬಸವರಾಜ ಬಿಜ್ಜರಗಿ, ಮಹಾದೇವ ಸಾವಂತ, ಅನಿಲ ಚವಾಣ, ಅಪ್ಪು ಕುಮಠಳ್ಳಿ, ಹಣಮಂತ ಅವಟಿ, ಡಾ.ಬಿ.ಎಸ್. ಕಾಮನ್, ಡಾ.ಎಸ್.ಐ. ಇಂಚಗೇರಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತೆಲಸಂಗ</strong> (ಬೆಳಗಾವಿ ಜಿಲ್ಲೆ): ‘ಸೈನಿಕರು ಪ್ರಾಣದ ಹಂಗು ತೊರೆದು ಯುಧ್ಧಭೂಮಿಯಲ್ಲಿ ಜೀವ ತೆತ್ತು ದೇಶದ ರಕ್ಷಣೆ ಮಾಡುತ್ತಾರೆ. ಅವರ ತ್ಯಾಗಕ್ಕೆ ಮತ್ತು ಹರಿಸಿದ ರಕ್ತಕ್ಕೆ ಅರ್ಥ ಬರಬೇಕಾದರೆ ಜನರು ದೇಶಕ್ಕಾಗಿ ಬದುಕುವುದನ್ನು ಕಲಿಯಬೇಕು’ ಎಂದು ಹಿರೇಮಠದ ವೀರೇಶ್ವರ ದೇವರು ಹೇಳಿದರು.</p>.<p>ಗ್ರಾಮದ ಮುಖ್ಯ ಬಜಾರ್ನಲ್ಲಿ ನಿವೃತ್ತ ಸೈನಿಕರ ಸಂಘದಿಂದ ಸೋಮವಾರ ಏರ್ಪಡಿಸಿದ್ದ ಕಾರ್ಗಿಲ್ ವಿಜಯ ದಿವಸ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ನೆರೆಯ ಪಾಕಿಸ್ತಾನ ಪದೇ ಪದೇ ದೇಶದೊಳಕ್ಕೆ ನುಸಳಲು ಯತ್ನಿಸುತ್ತಲೇ ಇದೆ. ನಮ್ಮ ಸೈನಿಕರು ಅದೆಷ್ಟು ಬಾರಿ ಸೊಕ್ಕಡಗಿಸಿದರೂ ಆ ದೇಶ ಪಾಠ ಕಲಿತಿಲ್ಲ. ಭಾರತದ ಯೋಧರ ವೀರತ್ವದ ಬಗ್ಗೆ ಜಗತ್ತೇ ಶ್ಲಾಘಿಸುತ್ತಿದೆ. ಕಾರ್ಗಿಲ್ ಯುದ್ಧ ಗೆದ್ದ ಸೈನಿಕರ ಶೌರ್ಯವನ್ನು ಬಣ್ಣಿಸಲು ಪದಗಳೇ ಇಲ್ಲ. ಕಾರ್ಗಿಲ್ ಯುದ್ಧದಲ್ಲಿ ಮಡಿದ ವೀರ ಯೋಧರ ಆತ್ಮಕ್ಕೆ ಸಾಂತಿ ಸಿಗಲಿ’ ಎಂದರು.</p>.<p>ಗ್ರಾ.ಪಂ. ಅಧ್ಯಕ್ಷ ವಿಲಾಸ್ ಮೋರೆ, ಸಂಘದ ಅಧ್ಯಕ್ಷ ಸಾಬು ಅರಟಾಳ, ಗಂಗಪ್ಪ ಗಂಗಾಧರ, ಬಸವರಾಜ ರೊಟ್ಟಿ, ಶಿವಯೋಗಿ ಹತ್ತಿ, ಮುನ್ನಾ ಕರಜಗಿ, ಬಸವರಾಜ ಬಿಜ್ಜರಗಿ, ಮಹಾದೇವ ಸಾವಂತ, ಅನಿಲ ಚವಾಣ, ಅಪ್ಪು ಕುಮಠಳ್ಳಿ, ಹಣಮಂತ ಅವಟಿ, ಡಾ.ಬಿ.ಎಸ್. ಕಾಮನ್, ಡಾ.ಎಸ್.ಐ. ಇಂಚಗೇರಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>