ಇಲ್ಲಿನ ಕಾಂಗ್ರೆಸ್ ಭವನದ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು, ‘ಶಾಸಕರನ್ನು ಖರೀದಿಸಿ, ರಾಜ್ಯ ಲೂಟಿ ಹೊಡೆಯಲು ಯಡಿಯೂರಪ್ಪ ಬಂದಿದ್ದಾರೆ. ಅವರಷ್ಟು ಭ್ರಷ್ಟರು ಯಾರೂ ಇಲ್ಲ. ಇಷ್ಟು ಕೆಟ್ಟ, ಭ್ರಷ್ಟ ಹಾಗೂ ಸ್ವಜನ ಪಕ್ಷಪಾತ ಮಾಡುವ ಸರ್ಕಾರ ಎಂದಿಗೂ ಬಂದಿರಲಿಲ್ಲ. ಜನರ ತೆರಿಗೆ ದುಡ್ಡು ಲೂಟಿ ಮಾಡುತ್ತಿದ್ದರೂ ಸುಮ್ಮನೆ ಕೂರಬೇಕೇ? ಸಾಲ ತಂದು ಸಂಬಳ ಕೊಡುವಂತಹ ಸ್ಥಿತಿ ಇದೆ. ಈ ರಾಜ್ಯ ಉಳಿಯುತ್ತದೆಯೇ? ಕತ್ತಲಿಗೆ ಹೋಗಲಿದೆ. ನಾವೇ ಅಧಿಕಾರಕ್ಕೆ ಬಂದರೂ ಸರಿಪಡಿಸಲು ಕನಿಷ್ಠ ಮೂರು ವರ್ಷಗಳು ಬೇಕಾಗುತ್ತವೆ’ ಎಂದರು.