ಧಾರಾಕಾರ ಮಳೆ: ನೆಲಕ್ಕುರುಳಿದ 25 ಮರ
ಮುನವಳ್ಳಿ: ಪಟ್ಟಣದಲ್ಲಿ ಶನಿವಾರ ಸಂಜೆ ಸುರಿದ ಧಾರಾಕಾರ ಮಳೆಯಿಂದಾಗಿ 25 ಮರಗಳು ಬಿದ್ದಿದ್ದು, 19 ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಒಂದು ವಿದ್ಯುತ್ ಕಂಬ ಬಿದ್ದಿದ್ದರಿಂದ ಕಾರು ಜಖಂಗೊಂಡಿದೆ.
ಪಂಚಲಿಂಗೇಶ್ವರ ರೈತ ಸಂಪರ್ಕ ಕೇದ್ರದ ಗೋದಾಮಿನ ಪತ್ರಾಸ್ ಹಾರಿಹೋಗಿದ್ದು, 250 ಟನ್ ಗೊಬ್ಬರ ನೀರು ಪಾಲಾಗಿದೆ. ಪಪ್ಪಾಯಿ, ಬಾಳೆ, ಮೆಕ್ಕೆಜೋಳ, ಕಬ್ಬಿನ ಬೆಳೆಗೆ ಹಾನಿಯಾಗಿದೆ.
ಶಾಸಕ ವಿಶ್ವಾಸ ವೈದ್ಯ ಮತ್ತು ಅಧಿಕಾರಿಗಳು ಕೃಷಿಭೂಮಿಗೆ ತೆರಳಿ, ಬೆಳೆ ಹಾನಿ ಪರಿಶೀಲಿಸಿದರು. ‘ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸುತ್ತೇವೆ’ ಎಂದು ಭರವಸೆ ನೀಡಿದರು.