<p><strong>ಚನ್ನಮ್ಮನ ಕಿತ್ತೂರು(ಬೆಳಗಾವಿ ಜಿಲ್ಲೆ):</strong> ಇಲ್ಲಿ ನಡೆಯುವ ಕಿತ್ತೂರು ಉತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಕುಸ್ತಿಯೂ ಒಂದು. ಮೂರು ದಿನಗಳ ಉತ್ಸವದ ಕೊನೇ ದಿನ (ಅಕ್ಟೋಬರ್ 25) ನಡೆಯುವ ಜಟ್ಟಿಗಳ ಕಾಳಗ ವೀಕ್ಷಣೆಗೆ ಸಾವಿರಾರು ಜನ ಸೇರುತ್ತಾರೆ. ಆದರೆ, ಈ ಬಾರಿ ಅಂತರರಾಷ್ಟ್ರೀಯ ಕುಸ್ತಿ ಪಂದ್ಯಾವಳಿ ಆಯೋಜಿಸದಿರುವುದು ಜಟ್ಟಿಪ್ರೇಮಿಗಳಲ್ಲಿ ನಿರಾಸೆ ಮೂಡಿಸಿದೆ.</p>.<p>2023ರಲ್ಲಿ ಉತ್ಸವದ ಪ್ರಯುಕ್ತ ನಡೆದ ಅಂತರರಾಷ್ಟ್ರೀಯ ಕುಸ್ತಿ <br>ಪಂದ್ಯಾವಳಿಯಲ್ಲಿ ಇರಾನ್ ದೇಶದ ರಿಜಾ, ಅಹಮದ್ ಮಿರ್ಜಾ ಪಾಲ್ಗೊಂಡಿದ್ದರು. 2024ರ ಟೂರ್ನಿಯಲ್ಲಿ ಇರಾನ್ ದೇಶದ ಇರ್ಫಾನ್ ಹುಸೇನ್ಜಾದ್ ಶಾ ಅಲಿ ಭಾಗವಹಿಸಿದ್ದರು. ತಮ್ಮೂರಿನಲ್ಲೇ ಅಂತರರಾಷ್ಟ್ರೀಯ ಕುಸ್ತಿ ಪಂದ್ಯಗಳನ್ನು ನೋಡಿ, ಗ್ರಾಮಸ್ಥರು ಸಂಭ್ರಮಿಸಿದ್ದರು.</p>.<p>ಆದರೆ, ಈ ಬಾರಿ ಅನುದಾನ ಕೊರತೆ ಕಾರಣಕ್ಕೆ ಅಂತರರಾಷ್ಟ್ರೀಯ ಕುಸ್ತಿ ಟೂರ್ನಿ ಆಯೋಜನೆಗೆ ಹಿನ್ನಡೆ ಉಂಟಾಗಿದೆ. ಲಭ್ಯವಿರುವ ಅನುದಾನದಲ್ಲೇ ಎಲ್ಲವನ್ನೂ ನಿರ್ವಹಿಸಬೇಕಾದ ಕಾರಣ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಧಿಕಾರಿಗಳು, ‘ಅಂತರರಾಷ್ಟ್ರೀಯ ಕುಸ್ತಿಪಟುಗಳನ್ನು ಪಂದ್ಯಕ್ಕೆ ಆಹ್ವಾನಿಸಲಾಗದು’ ಎಂದಿದ್ದಾರೆ.</p>.<p>ಈ ಬಾರಿಯ ರಾಷ್ಟ್ರಮಟ್ಟದ ಟೂರ್ನಿಯಲ್ಲಿ ಪುರುಷರ ವಿಭಾಗದಲ್ಲಿ 50 ಮತ್ತು ಮಹಿಳೆಯರ ವಿಭಾಗದಲ್ಲಿ ಏಳು ಜೋಡಿ ಸೆಣಸಲಿವೆ. ಕರ್ನಾಟಕದ ಜೊತೆಗೆ, ಪಂಜಾಬ್, ಹರಿಯಾಣ, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದ ಪೈಲ್ವಾನರು ಭಾಗವಹಿಸುವರು.</p>.<p>₹15 ಲಕ್ಷ ಅನುದಾನ: ಕಳೆದ ಬಾರಿಯ ಉತ್ಸವದಲ್ಲಿ ವಾಲಿಬಾಲ್, ಕಬಡ್ಡಿ, ಕುಸ್ತಿ ಮತ್ತಿತರ ಕ್ರೀಡೆಗಳ ಆಯೋಜನೆಗೆ ರಾಜ್ಯ ಸರ್ಕಾರವು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ₹22 ಲಕ್ಷ ಅನುದಾನ ಕೊಟ್ಟಿತ್ತು. ಈ ಬಾರಿ ₹15 ಲಕ್ಷ ಮಾತ್ರ ನೀಡಿದೆ.</p>.<p>‘ವಿದೇಶದ ಒಂದು ಜೋಡಿ ಪೈಲ್ವಾನರನ್ನು ಆಹ್ವಾನಿಸಲು ₹3 ಲಕ್ಷ ಖರ್ಚಾಗುತ್ತದೆ. ಆದರೆ, ಈಗ ಲಭಿಸಿದ ಅನುದಾನದಲ್ಲಿ ಕುಸ್ತಿ, ವಾಲಿಬಾಲ್, ಕಬಡ್ಡಿ, ಹಗ್ಗಜಗ್ಗಾಟ ಸ್ಪರ್ಧೆ, ಜಲಸಾಹಸ ಕ್ರೀಡೆಗಳ ಆಯೋಜನೆ ಜತೆಗೆ, ವಿದೇಶದ ಪೈಲ್ವಾನರನ್ನು ಕರೆಯಿಸಲಾಗದು’ ಎಂದು ಅಧಿಕಾರಿಗಳು ತಿಳಿಸಿದರು. </p>.<div><blockquote>ಸರ್ಕಾರ ನೀಡಿದ ಅನುದಾನದಲ್ಲೇ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿ ಯಶಸ್ವಿಯಾಗಿ ನಡೆಸಲು ಅಗತ್ಯ ಸಿದ್ಧತೆ ಮಾಡಿಕೊಂಡಿದ್ದೇವೆ </blockquote><span class="attribution">ಬಿ.ಶ್ರೀನಿವಾಸ ಉಪನಿರ್ದೇಶಕ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಬೆಳಗಾವಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚನ್ನಮ್ಮನ ಕಿತ್ತೂರು(ಬೆಳಗಾವಿ ಜಿಲ್ಲೆ):</strong> ಇಲ್ಲಿ ನಡೆಯುವ ಕಿತ್ತೂರು ಉತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಕುಸ್ತಿಯೂ ಒಂದು. ಮೂರು ದಿನಗಳ ಉತ್ಸವದ ಕೊನೇ ದಿನ (ಅಕ್ಟೋಬರ್ 25) ನಡೆಯುವ ಜಟ್ಟಿಗಳ ಕಾಳಗ ವೀಕ್ಷಣೆಗೆ ಸಾವಿರಾರು ಜನ ಸೇರುತ್ತಾರೆ. ಆದರೆ, ಈ ಬಾರಿ ಅಂತರರಾಷ್ಟ್ರೀಯ ಕುಸ್ತಿ ಪಂದ್ಯಾವಳಿ ಆಯೋಜಿಸದಿರುವುದು ಜಟ್ಟಿಪ್ರೇಮಿಗಳಲ್ಲಿ ನಿರಾಸೆ ಮೂಡಿಸಿದೆ.</p>.<p>2023ರಲ್ಲಿ ಉತ್ಸವದ ಪ್ರಯುಕ್ತ ನಡೆದ ಅಂತರರಾಷ್ಟ್ರೀಯ ಕುಸ್ತಿ <br>ಪಂದ್ಯಾವಳಿಯಲ್ಲಿ ಇರಾನ್ ದೇಶದ ರಿಜಾ, ಅಹಮದ್ ಮಿರ್ಜಾ ಪಾಲ್ಗೊಂಡಿದ್ದರು. 2024ರ ಟೂರ್ನಿಯಲ್ಲಿ ಇರಾನ್ ದೇಶದ ಇರ್ಫಾನ್ ಹುಸೇನ್ಜಾದ್ ಶಾ ಅಲಿ ಭಾಗವಹಿಸಿದ್ದರು. ತಮ್ಮೂರಿನಲ್ಲೇ ಅಂತರರಾಷ್ಟ್ರೀಯ ಕುಸ್ತಿ ಪಂದ್ಯಗಳನ್ನು ನೋಡಿ, ಗ್ರಾಮಸ್ಥರು ಸಂಭ್ರಮಿಸಿದ್ದರು.</p>.<p>ಆದರೆ, ಈ ಬಾರಿ ಅನುದಾನ ಕೊರತೆ ಕಾರಣಕ್ಕೆ ಅಂತರರಾಷ್ಟ್ರೀಯ ಕುಸ್ತಿ ಟೂರ್ನಿ ಆಯೋಜನೆಗೆ ಹಿನ್ನಡೆ ಉಂಟಾಗಿದೆ. ಲಭ್ಯವಿರುವ ಅನುದಾನದಲ್ಲೇ ಎಲ್ಲವನ್ನೂ ನಿರ್ವಹಿಸಬೇಕಾದ ಕಾರಣ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಧಿಕಾರಿಗಳು, ‘ಅಂತರರಾಷ್ಟ್ರೀಯ ಕುಸ್ತಿಪಟುಗಳನ್ನು ಪಂದ್ಯಕ್ಕೆ ಆಹ್ವಾನಿಸಲಾಗದು’ ಎಂದಿದ್ದಾರೆ.</p>.<p>ಈ ಬಾರಿಯ ರಾಷ್ಟ್ರಮಟ್ಟದ ಟೂರ್ನಿಯಲ್ಲಿ ಪುರುಷರ ವಿಭಾಗದಲ್ಲಿ 50 ಮತ್ತು ಮಹಿಳೆಯರ ವಿಭಾಗದಲ್ಲಿ ಏಳು ಜೋಡಿ ಸೆಣಸಲಿವೆ. ಕರ್ನಾಟಕದ ಜೊತೆಗೆ, ಪಂಜಾಬ್, ಹರಿಯಾಣ, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದ ಪೈಲ್ವಾನರು ಭಾಗವಹಿಸುವರು.</p>.<p>₹15 ಲಕ್ಷ ಅನುದಾನ: ಕಳೆದ ಬಾರಿಯ ಉತ್ಸವದಲ್ಲಿ ವಾಲಿಬಾಲ್, ಕಬಡ್ಡಿ, ಕುಸ್ತಿ ಮತ್ತಿತರ ಕ್ರೀಡೆಗಳ ಆಯೋಜನೆಗೆ ರಾಜ್ಯ ಸರ್ಕಾರವು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ₹22 ಲಕ್ಷ ಅನುದಾನ ಕೊಟ್ಟಿತ್ತು. ಈ ಬಾರಿ ₹15 ಲಕ್ಷ ಮಾತ್ರ ನೀಡಿದೆ.</p>.<p>‘ವಿದೇಶದ ಒಂದು ಜೋಡಿ ಪೈಲ್ವಾನರನ್ನು ಆಹ್ವಾನಿಸಲು ₹3 ಲಕ್ಷ ಖರ್ಚಾಗುತ್ತದೆ. ಆದರೆ, ಈಗ ಲಭಿಸಿದ ಅನುದಾನದಲ್ಲಿ ಕುಸ್ತಿ, ವಾಲಿಬಾಲ್, ಕಬಡ್ಡಿ, ಹಗ್ಗಜಗ್ಗಾಟ ಸ್ಪರ್ಧೆ, ಜಲಸಾಹಸ ಕ್ರೀಡೆಗಳ ಆಯೋಜನೆ ಜತೆಗೆ, ವಿದೇಶದ ಪೈಲ್ವಾನರನ್ನು ಕರೆಯಿಸಲಾಗದು’ ಎಂದು ಅಧಿಕಾರಿಗಳು ತಿಳಿಸಿದರು. </p>.<div><blockquote>ಸರ್ಕಾರ ನೀಡಿದ ಅನುದಾನದಲ್ಲೇ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿ ಯಶಸ್ವಿಯಾಗಿ ನಡೆಸಲು ಅಗತ್ಯ ಸಿದ್ಧತೆ ಮಾಡಿಕೊಂಡಿದ್ದೇವೆ </blockquote><span class="attribution">ಬಿ.ಶ್ರೀನಿವಾಸ ಉಪನಿರ್ದೇಶಕ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಬೆಳಗಾವಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>