<p><strong>ಬೆಳಗಾವಿ:</strong> ಗಂಟಲಿನಲ್ಲಿ ಲೋಹದ ಕೃಷ್ಣನ ಚಿಕ್ಕಮೂರ್ತಿ ಸಿಕ್ಕಿಕೊಂಡು, ಪ್ರಾಣಾಪಾಯಕ್ಕೆ ಸಿಲುಕಿದ್ದ ವ್ಯಕ್ತಿ<br />ಯೊಬ್ಬರಿಗೆ ಇಲ್ಲಿನ ಕೆಎಲ್ಇ ಸಂಸ್ಥೆಯಡಾ.ಪ್ರಭಾಕರ ಕೋರೆ ಆಸ್ಪತ್ರೆಯ ವೈದ್ಯರು ಯಶಸ್ವಿಶಸ್ತ್ರಚಿಕಿತ್ಸೆ ಮಾಡಿದ್ದಾರೆ.</p>.<p>ಈ ಅಪರೂಪದ ಶಸ್ತ್ರಚಿಕಿತ್ಸೆಯಲ್ಲಿ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.</p>.<p>45 ವರ್ಷದ ವ್ಯಕ್ತಿಯೊಬ್ಬರು ಪ್ರತಿದಿನ ಕೃಷ್ಣನ ಪೂಜೆ ಮಾಡಿದ ಬಳಿಕ, ಪುಟ್ಟ ಮೂರ್ತಿಯನ್ನು ಕೈಯಲ್ಲಿ ಇಟ್ಟುಕೊಂಡು ತೀರ್ಥ ಸೇವಿಸುವ ರೂಢಿ ಬೆಳೆಸಿಕೊಂಡಿದ್ದರು. ಈಚೆಗೆ ತೀರ್ಥ ಸೇವಿಸುವಾಗ ಅದರ ಜತೆಗೆ 5 ಸೆ.ಮೀ ಉದ್ದದ ಕೃಷ್ಣನ ಮೂರ್ತಿಯೂ ಗಂಟಲಿಗೆ ಇಳಿದಿತ್ತು. ಕೆಲ ದಿನಗಳ ನಂತರ ಗಂಟಲಿನಲ್ಲಿ ಊತ ಉಂಟಾಗಿ, ನೋವು ಕಾಣಿಸಿಕೊಂಡಿತು. ವೈದ್ಯರನ್ನು ಸಂಪರ್ಕಿಸಿ, ಎಕ್ಸ್–ರೇ ತೆಗೆಸಿ ನೋಡಿದಾಗ ಗಂಟಲಲ್ಲಿ ಲೋಹದ ಮೂರ್ತಿ ಸಿಲುಕಿದ್ದು ಕಂಡುಬಂತು.</p>.<p>ಬಳಿಕ ಅವರನ್ನು ಡಾ.ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿನ ತಜ್ಞವೈದ್ಯರು ಎಂಡೊಸ್ಕೊಪಿ ಮೂಲಕ ಪರಿಶೀಲಿಸಿ ದಾಗ, ಮೂರ್ತಿಯ ಎಡಗಾಲು ವ್ಯಕ್ತಿಯ ಅನ್ನನಾಳದಲ್ಲಿ ಸಿಲುಕಿದ್ದು ಗೊತ್ತಾಯಿತು. ಹೀಗಾಗಿ, ಇದನ್ನು ಹೊರತೆಗೆಯುವುದು ದೊಡ್ಡ ಸವಾಲಾಗಿ ಪರಿಣಮಿಸಿತ್ತು.</p>.<p>ಆಸ್ಪತ್ರೆಯ ಇಎನ್ಟಿ ವಿಭಾಗದ ವೈದ್ಯರಾದ ಡಾ.ಪ್ರೀತಿ ಹಜಾರೆ, ಡಾ.ವಿನಿತಾ ಮೆಟಗುಟ್ಟಮಠ, ಅರಿವಳಿಕೆ ತಜ್ಞ ಡಾ.ಚೈತನ್ಯ ಕಾಮತ್ ಹಾಗೂ ಶುಶ್ರೂಷಕರ ತಂಡ ಶ್ರಮಪಟ್ಟು ಯಶಸ್ವಿ ಶಸ್ತಚಿಕಿತ್ಸೆ ನೆರವೇರಿಸಿತು. ವೈದ್ಯರು, ಸಿಬ್ಬಂದಿಯ ಈ ಕಾರ್ಯ ಕೌಶಲಕ್ಕೆ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ:</strong> ಗಂಟಲಿನಲ್ಲಿ ಲೋಹದ ಕೃಷ್ಣನ ಚಿಕ್ಕಮೂರ್ತಿ ಸಿಕ್ಕಿಕೊಂಡು, ಪ್ರಾಣಾಪಾಯಕ್ಕೆ ಸಿಲುಕಿದ್ದ ವ್ಯಕ್ತಿ<br />ಯೊಬ್ಬರಿಗೆ ಇಲ್ಲಿನ ಕೆಎಲ್ಇ ಸಂಸ್ಥೆಯಡಾ.ಪ್ರಭಾಕರ ಕೋರೆ ಆಸ್ಪತ್ರೆಯ ವೈದ್ಯರು ಯಶಸ್ವಿಶಸ್ತ್ರಚಿಕಿತ್ಸೆ ಮಾಡಿದ್ದಾರೆ.</p>.<p>ಈ ಅಪರೂಪದ ಶಸ್ತ್ರಚಿಕಿತ್ಸೆಯಲ್ಲಿ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.</p>.<p>45 ವರ್ಷದ ವ್ಯಕ್ತಿಯೊಬ್ಬರು ಪ್ರತಿದಿನ ಕೃಷ್ಣನ ಪೂಜೆ ಮಾಡಿದ ಬಳಿಕ, ಪುಟ್ಟ ಮೂರ್ತಿಯನ್ನು ಕೈಯಲ್ಲಿ ಇಟ್ಟುಕೊಂಡು ತೀರ್ಥ ಸೇವಿಸುವ ರೂಢಿ ಬೆಳೆಸಿಕೊಂಡಿದ್ದರು. ಈಚೆಗೆ ತೀರ್ಥ ಸೇವಿಸುವಾಗ ಅದರ ಜತೆಗೆ 5 ಸೆ.ಮೀ ಉದ್ದದ ಕೃಷ್ಣನ ಮೂರ್ತಿಯೂ ಗಂಟಲಿಗೆ ಇಳಿದಿತ್ತು. ಕೆಲ ದಿನಗಳ ನಂತರ ಗಂಟಲಿನಲ್ಲಿ ಊತ ಉಂಟಾಗಿ, ನೋವು ಕಾಣಿಸಿಕೊಂಡಿತು. ವೈದ್ಯರನ್ನು ಸಂಪರ್ಕಿಸಿ, ಎಕ್ಸ್–ರೇ ತೆಗೆಸಿ ನೋಡಿದಾಗ ಗಂಟಲಲ್ಲಿ ಲೋಹದ ಮೂರ್ತಿ ಸಿಲುಕಿದ್ದು ಕಂಡುಬಂತು.</p>.<p>ಬಳಿಕ ಅವರನ್ನು ಡಾ.ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿನ ತಜ್ಞವೈದ್ಯರು ಎಂಡೊಸ್ಕೊಪಿ ಮೂಲಕ ಪರಿಶೀಲಿಸಿ ದಾಗ, ಮೂರ್ತಿಯ ಎಡಗಾಲು ವ್ಯಕ್ತಿಯ ಅನ್ನನಾಳದಲ್ಲಿ ಸಿಲುಕಿದ್ದು ಗೊತ್ತಾಯಿತು. ಹೀಗಾಗಿ, ಇದನ್ನು ಹೊರತೆಗೆಯುವುದು ದೊಡ್ಡ ಸವಾಲಾಗಿ ಪರಿಣಮಿಸಿತ್ತು.</p>.<p>ಆಸ್ಪತ್ರೆಯ ಇಎನ್ಟಿ ವಿಭಾಗದ ವೈದ್ಯರಾದ ಡಾ.ಪ್ರೀತಿ ಹಜಾರೆ, ಡಾ.ವಿನಿತಾ ಮೆಟಗುಟ್ಟಮಠ, ಅರಿವಳಿಕೆ ತಜ್ಞ ಡಾ.ಚೈತನ್ಯ ಕಾಮತ್ ಹಾಗೂ ಶುಶ್ರೂಷಕರ ತಂಡ ಶ್ರಮಪಟ್ಟು ಯಶಸ್ವಿ ಶಸ್ತಚಿಕಿತ್ಸೆ ನೆರವೇರಿಸಿತು. ವೈದ್ಯರು, ಸಿಬ್ಬಂದಿಯ ಈ ಕಾರ್ಯ ಕೌಶಲಕ್ಕೆ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>