45 ವರ್ಷದ ವ್ಯಕ್ತಿಯೊಬ್ಬರು ಪ್ರತಿದಿನ ಕೃಷ್ಣನ ಪೂಜೆ ಮಾಡಿದ ಬಳಿಕ, ಪುಟ್ಟ ಮೂರ್ತಿಯನ್ನು ಕೈಯಲ್ಲಿ ಇಟ್ಟುಕೊಂಡು ತೀರ್ಥ ಸೇವಿಸುವ ರೂಢಿ ಬೆಳೆಸಿಕೊಂಡಿದ್ದರು. ಈಚೆಗೆ ತೀರ್ಥ ಸೇವಿಸುವಾಗ ಅದರ ಜತೆಗೆ 5 ಸೆ.ಮೀ ಉದ್ದದ ಕೃಷ್ಣನ ಮೂರ್ತಿಯೂ ಗಂಟಲಿಗೆ ಇಳಿದಿತ್ತು. ಕೆಲ ದಿನಗಳ ನಂತರ ಗಂಟಲಿನಲ್ಲಿ ಊತ ಉಂಟಾಗಿ, ನೋವು ಕಾಣಿಸಿಕೊಂಡಿತು. ವೈದ್ಯರನ್ನು ಸಂಪರ್ಕಿಸಿ, ಎಕ್ಸ್–ರೇ ತೆಗೆಸಿ ನೋಡಿದಾಗ ಗಂಟಲಲ್ಲಿ ಲೋಹದ ಮೂರ್ತಿ ಸಿಲುಕಿದ್ದು ಕಂಡುಬಂತು.