<p><strong>ಚಿಕ್ಕೋಡಿ:</strong> ‘ಹೊಳಿ ಏರಿದಂಗ ಮನ್ಯಾಗ ಹಾವು, ಚೇಳು ಬರಾಕತ್ತಾವ್ರಿ. ಮಾಡಿರೋ ಲಾವಣಿ ನೀರಾಗ ನಿಂತೈತ್ರಿ. ನದಿ ನೀರು ಯಾವಾಗ ಇಳಿತೈತಿ ಅಂತ ಕಾಯಾಕತ್ತೇವ್ರಿ...’</p>.<p>ತಾಲ್ಲೂಕಿನ ಅಂಕಲಿಯ ಹೌಸಾಬಾಯಿ ಜಾಧವ ‘ಪ್ರಜಾವಾಣಿ’ ಮುಂದೆ ಹೀಗೆ ಅವಲತ್ತುಕೊಂಡರು.</p>.<p>ಇದು ಅವರೊಬ್ಬರ ಸಮಸ್ಯೆಯಲ್ಲ. ಕೃಷ್ಣಾ ನದಿಪಾತ್ರದ ಗ್ರಾಮಗಳಲ್ಲಿ ಇರುವ ಬಹುತೇಕರದ್ದು ಇದೇ ಸಂಕಷ್ಟ.</p>.<p>‘ಹೊಳಿ ದಂಡಿಗೆ ನಮ್ಮ ಹೊಲ ಐತ್ರಿ. ಸಾಮಾನುಗಳನ್ನು ಗಂಟುಮೂಟೆ ಕಟ್ಟಿ ಇಟ್ಟೇವ್ರಿ. ಹೊಳಿ ಏರತಂದ್ರ ಸಾಮಾನುಗಳನ್ನು ಹೇರಕೊಂಡ ಊರ ಕಡೆ ಹೋಗಬೇಕ್ರಿ’ ಎಂದು ಕಲ್ಲೋಳ ಗ್ರಾಮದ ಮಲ್ಲಪ್ಪ ಶೇಡಬಾಳೆ ಹೇಳಿದರು.</p>.<p>ಕೃಷ್ಣಾ ಹಾಗೂ ಅದರ ಉಪನದಿಗಳಲ್ಲಿ ನೀರಿನ ಮಟ್ಟ ಹೆಚ್ಚುತ್ತಲೇ ಇರುವುದು ನದಿಪಾತ್ರದ ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಜನರು ಸುರಕ್ಷಿತ ಸ್ಥಳಕ್ಕೆ ತೆರಳಬೇಕು ಎಂದು ಜಿಲ್ಲಾಡಳಿತ ಸೂಚಿಸಿದೆ. ಕೆಲವೆಡೆ ಹೊಲಗಳಲ್ಲಿ ವಾಸಿಸುವ ಜನರು ತಮ್ಮ ಜಾನುವಾರುಗಳೊಂದಿಗೆ ಸ್ವಯಂ ಪ್ರೇರಣೆಯಿಂದ ಸುರಕ್ಷಿತ ಸ್ಥಳಗಳತ್ತ ಹೋಗುತ್ತಿದ್ದಾರೆ. </p>.<p>ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯಲ್ಲಿ ಉಕ್ಕಿ ಹರಿಯುತ್ತಿರುವ ನದಿಗಳ ನೀರು ನೂರಾರು ಎಕರೆ ಕೃಷಿಭೂಮಿಗೆ ನುಗ್ಗಿದೆ.</p>.<p>ರೈತರು ಹೆಚ್ಚಾಗಿ ಕಬ್ಬು ಬೆಳೆದಿದ್ದಾರೆ. ಹಾಗಾಗಿ ಸದ್ಯಕ್ಕೆ ಆತಂಕವಿಲ್ಲ. ಆದರೆ, ಸತತ 15 ದಿನಗಳವರೆಗೆ ನೀರು ನಿಂತರೆ ಬೆಳೆ ಕೊಳೆಯುವ ಸಾಧ್ಯತೆ ಇದೆ.</p>.<p>Highlights - ಪ್ರವಾಹದ ನಂತರ ಹುಳುಗಳ ಕಾಟ ಸುರಕ್ಷಿತ ಸ್ಥಳಗಳತ್ತ ಸ್ಥಳಾಂತರಗೊಳ್ಳುತ್ತಿರುವ ಜನ ಬೆಳೆ ಕೊಳೆಯುವ ಆತಂಕ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕೋಡಿ:</strong> ‘ಹೊಳಿ ಏರಿದಂಗ ಮನ್ಯಾಗ ಹಾವು, ಚೇಳು ಬರಾಕತ್ತಾವ್ರಿ. ಮಾಡಿರೋ ಲಾವಣಿ ನೀರಾಗ ನಿಂತೈತ್ರಿ. ನದಿ ನೀರು ಯಾವಾಗ ಇಳಿತೈತಿ ಅಂತ ಕಾಯಾಕತ್ತೇವ್ರಿ...’</p>.<p>ತಾಲ್ಲೂಕಿನ ಅಂಕಲಿಯ ಹೌಸಾಬಾಯಿ ಜಾಧವ ‘ಪ್ರಜಾವಾಣಿ’ ಮುಂದೆ ಹೀಗೆ ಅವಲತ್ತುಕೊಂಡರು.</p>.<p>ಇದು ಅವರೊಬ್ಬರ ಸಮಸ್ಯೆಯಲ್ಲ. ಕೃಷ್ಣಾ ನದಿಪಾತ್ರದ ಗ್ರಾಮಗಳಲ್ಲಿ ಇರುವ ಬಹುತೇಕರದ್ದು ಇದೇ ಸಂಕಷ್ಟ.</p>.<p>‘ಹೊಳಿ ದಂಡಿಗೆ ನಮ್ಮ ಹೊಲ ಐತ್ರಿ. ಸಾಮಾನುಗಳನ್ನು ಗಂಟುಮೂಟೆ ಕಟ್ಟಿ ಇಟ್ಟೇವ್ರಿ. ಹೊಳಿ ಏರತಂದ್ರ ಸಾಮಾನುಗಳನ್ನು ಹೇರಕೊಂಡ ಊರ ಕಡೆ ಹೋಗಬೇಕ್ರಿ’ ಎಂದು ಕಲ್ಲೋಳ ಗ್ರಾಮದ ಮಲ್ಲಪ್ಪ ಶೇಡಬಾಳೆ ಹೇಳಿದರು.</p>.<p>ಕೃಷ್ಣಾ ಹಾಗೂ ಅದರ ಉಪನದಿಗಳಲ್ಲಿ ನೀರಿನ ಮಟ್ಟ ಹೆಚ್ಚುತ್ತಲೇ ಇರುವುದು ನದಿಪಾತ್ರದ ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಜನರು ಸುರಕ್ಷಿತ ಸ್ಥಳಕ್ಕೆ ತೆರಳಬೇಕು ಎಂದು ಜಿಲ್ಲಾಡಳಿತ ಸೂಚಿಸಿದೆ. ಕೆಲವೆಡೆ ಹೊಲಗಳಲ್ಲಿ ವಾಸಿಸುವ ಜನರು ತಮ್ಮ ಜಾನುವಾರುಗಳೊಂದಿಗೆ ಸ್ವಯಂ ಪ್ರೇರಣೆಯಿಂದ ಸುರಕ್ಷಿತ ಸ್ಥಳಗಳತ್ತ ಹೋಗುತ್ತಿದ್ದಾರೆ. </p>.<p>ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯಲ್ಲಿ ಉಕ್ಕಿ ಹರಿಯುತ್ತಿರುವ ನದಿಗಳ ನೀರು ನೂರಾರು ಎಕರೆ ಕೃಷಿಭೂಮಿಗೆ ನುಗ್ಗಿದೆ.</p>.<p>ರೈತರು ಹೆಚ್ಚಾಗಿ ಕಬ್ಬು ಬೆಳೆದಿದ್ದಾರೆ. ಹಾಗಾಗಿ ಸದ್ಯಕ್ಕೆ ಆತಂಕವಿಲ್ಲ. ಆದರೆ, ಸತತ 15 ದಿನಗಳವರೆಗೆ ನೀರು ನಿಂತರೆ ಬೆಳೆ ಕೊಳೆಯುವ ಸಾಧ್ಯತೆ ಇದೆ.</p>.<p>Highlights - ಪ್ರವಾಹದ ನಂತರ ಹುಳುಗಳ ಕಾಟ ಸುರಕ್ಷಿತ ಸ್ಥಳಗಳತ್ತ ಸ್ಥಳಾಂತರಗೊಳ್ಳುತ್ತಿರುವ ಜನ ಬೆಳೆ ಕೊಳೆಯುವ ಆತಂಕ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>