<p><strong>ಗೋಕಾಕ (ಬೆಳಗಾವಿ ಜಿಲ್ಲೆ):</strong> ಹತ್ತು ವರ್ಷಗಳ ಬಳಿಕ ನಡೆಯುತ್ತಿರುವ ಗೋಕಾಕ ಗ್ರಾಮ ದೇವತೆಯರ ಜಾತ್ರಾ ಮಹೋತ್ಸವದ ಅಂಗವಾಗಿ ನಾಡಿನ ಜನತೆಯ ಒಳಿತಿಗಾಗಿ ಇಲ್ಲಿಯ ಸಾಯಿ ಸಮರ್ಥ ಫೌಂಡೇಶನ್ ವತಿಯಿಂದ ಬುಧವಾರ ಹಮ್ಮಿಕೊಂಡ ಕುಂಕುಮಾರ್ಚಣೆ, ಲಲಿತಾ ಸಹಸ್ರನಾಮ, ಜಪಯಜ್ಞ ಹಾಗೂ ಭಜನೆ ಕಾರ್ಯಕ್ರಮಗಳು ವೈಭವದಿಂದ ನೆರವೇರಿದವು.</p><p>ಮಹಾಲಕ್ಷ್ಮಿ ಸಭಾ ಭವನದಲ್ಲಿ ಅಪಾರ ಸಂಖ್ಯೆಯ ಹೆಣ್ಣಮಕ್ಕಳು, ಗೃಹಿಣಿಯರು, ಹಿರಿಯರು ಕೂಡ ಸೇರಿದರು. ಮಾತಾಜಿ ಶಾರದಾಮಯಿ, ಜಯಶ್ರೀ ರಮೇಶ ಜಾರಕಿಹೊಳಿ, ಅನುಪಾ ದಿನೇಶ ಕೌಶಿಕ, ಗೀತಾ ಅರುಣ ಸಾಲಳ್ಳಿ, ಸೌಜನ್ಯ ಸಂಜು ಚಿಪ್ಪಲಕಟ್ಟಿ, ಜ್ಞಾನಾ ಆನಂದ ಪಾಟೀಲ ಮುಂತಾದವರು ನೇತೃತ್ವ ವಹಿಸಿದರು.</p><p>ಅಂದವಾಗಿ ಸಿದ್ಧಗೊಳಿಸಿದ್ದ ಮಹಾಲಕ್ಷ್ಮಿ ಮೂರ್ತಿಯನ್ನು ವೇದಿಕೆಯಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ಗಣ್ಯರು ದೀಪ ಬೆಳಗಿಸಿ ಧಾರ್ಮಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮೊದಲು ಸಹಸ್ರ ಲಲಿತಾ ನಾಮ ಜಪ ನಡೆಯಿತು. ಬಳಿಕ ಜಪಯಜ್ಞ ನಡೆಯಿತು. ಮಹಿಳೆಯರು ಸಾಮೂಜಿಕ ಭಜನೆಯಲ್ಲಿ ಪಾಲ್ಗೊಂಡು ಭಕ್ತಿ ಗೀತೆಗಳನ್ನು ಹಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗೋಕಾಕ (ಬೆಳಗಾವಿ ಜಿಲ್ಲೆ):</strong> ಹತ್ತು ವರ್ಷಗಳ ಬಳಿಕ ನಡೆಯುತ್ತಿರುವ ಗೋಕಾಕ ಗ್ರಾಮ ದೇವತೆಯರ ಜಾತ್ರಾ ಮಹೋತ್ಸವದ ಅಂಗವಾಗಿ ನಾಡಿನ ಜನತೆಯ ಒಳಿತಿಗಾಗಿ ಇಲ್ಲಿಯ ಸಾಯಿ ಸಮರ್ಥ ಫೌಂಡೇಶನ್ ವತಿಯಿಂದ ಬುಧವಾರ ಹಮ್ಮಿಕೊಂಡ ಕುಂಕುಮಾರ್ಚಣೆ, ಲಲಿತಾ ಸಹಸ್ರನಾಮ, ಜಪಯಜ್ಞ ಹಾಗೂ ಭಜನೆ ಕಾರ್ಯಕ್ರಮಗಳು ವೈಭವದಿಂದ ನೆರವೇರಿದವು.</p><p>ಮಹಾಲಕ್ಷ್ಮಿ ಸಭಾ ಭವನದಲ್ಲಿ ಅಪಾರ ಸಂಖ್ಯೆಯ ಹೆಣ್ಣಮಕ್ಕಳು, ಗೃಹಿಣಿಯರು, ಹಿರಿಯರು ಕೂಡ ಸೇರಿದರು. ಮಾತಾಜಿ ಶಾರದಾಮಯಿ, ಜಯಶ್ರೀ ರಮೇಶ ಜಾರಕಿಹೊಳಿ, ಅನುಪಾ ದಿನೇಶ ಕೌಶಿಕ, ಗೀತಾ ಅರುಣ ಸಾಲಳ್ಳಿ, ಸೌಜನ್ಯ ಸಂಜು ಚಿಪ್ಪಲಕಟ್ಟಿ, ಜ್ಞಾನಾ ಆನಂದ ಪಾಟೀಲ ಮುಂತಾದವರು ನೇತೃತ್ವ ವಹಿಸಿದರು.</p><p>ಅಂದವಾಗಿ ಸಿದ್ಧಗೊಳಿಸಿದ್ದ ಮಹಾಲಕ್ಷ್ಮಿ ಮೂರ್ತಿಯನ್ನು ವೇದಿಕೆಯಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ಗಣ್ಯರು ದೀಪ ಬೆಳಗಿಸಿ ಧಾರ್ಮಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮೊದಲು ಸಹಸ್ರ ಲಲಿತಾ ನಾಮ ಜಪ ನಡೆಯಿತು. ಬಳಿಕ ಜಪಯಜ್ಞ ನಡೆಯಿತು. ಮಹಿಳೆಯರು ಸಾಮೂಜಿಕ ಭಜನೆಯಲ್ಲಿ ಪಾಲ್ಗೊಂಡು ಭಕ್ತಿ ಗೀತೆಗಳನ್ನು ಹಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>