ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾಲೇಜಿನ ಹಳೆಯ ವಿದ್ಯಾರ್ಥಿ ಹಾಗೂ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ ಅವರು ತಂದೆ ಎಂ.ಕೆ. ನಂಬಿಯಾರ್ ಹೆಸರಿನಲ್ಲಿ ಸ್ಥಾಪಿಸಿರುವ ನಿಧಿಯಿಂದ ಪ್ರತಿ ವರ್ಷವೂ ಸ್ಪರ್ಧೆ ನಡೆಸಲಾಗುತ್ತಿದೆ. ರಾಜ್ಯದ 17, ಮಹಾರಾಷ್ಟ್ರದ 4, ತಮಿಳುನಾಡು 3, ಉತ್ತರಪ್ರದೇಶ 2, ತೆಲಂಗಾಣ, ಪಶ್ಚಿಮ ಬಂಗಾಳ, ಒಡಿಸಾ, ಬಿಹಾರ, ಗೋವಾ, ಆಂಧ್ರ ಹಾಗೂ ಮಧ್ಯಪ್ರದೇಶದ ತಲಾ ಒಂದು ಸೇರಿ 33 ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ’ ಎಂದು ಮಾಹಿತಿ ನೀಡಿದರು.