ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾವೀರ ಸಂಘ 16ನೇ ಶಾಖೆ ಉದ್ಘಾಟನೆ 19ರಂದು

Published 16 ನವೆಂಬರ್ 2023, 14:54 IST
Last Updated 16 ನವೆಂಬರ್ 2023, 14:54 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ

ಹುಕ್ಕೇರಿ: ಸ್ಥಳೀಯ ಮಹಾವೀರ ವಿವಿಧೋದ್ದೇಶ ಸಹಕಾರಿ ಸಂಘದ 16ನೇ ಶಾಖೆಯನ್ನು ಬೆಳಗಾವಿ ನಗರದ ಅನಗೋಳದ ರಘುನಾಥ ಪೇಟ, ಹನಮನ್ನವರ ಗಲ್ಲಿಯಲ್ಲಿ ನ.19 ರಂದು ಬೆಳಿಗ್ಗೆ 11 ಗಂಟೆಗೆ ಉದ್ಘಾಟಿಸಲಾಗುವುದು ಎಂದು ಅಧ್ಯಕ್ಷ ಮಹಾವೀರ ನಿಲಜಗಿ ಹೇಳಿದರು.

ಪಟ್ಟಣದಲ್ಲಿ ಗುರುವಾರ ನಡೆಸಿದ  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾಲಕ್ಷ್ಮಿ ಮತ್ತು ಸರಸ್ವತಿ ಪೂಜೆ ಜರುಗುವುದು ಎಂದರು.

‘ಸಂಸ್ಥೆಯು 2000 ಇಸವಿಯಲ್ಲಿ ಪ್ರಾರಂಭವಾಗಿ, 15 ಶಾಖೆ ಹೊಂದಿ 2,650 ಸದಸ್ಯರನ್ನು ಹೊಂದಿದೆ. ₹34.86 ಲಕ್ಷ ಷೇರು ಬಂಡವಾಳ ಮತ್ತು ₹6.99 ಕೋಟಿ ನಿಧಿ ಹೊಂದಿದೆ’ ಎಂದು ತಿಳಿಸಿದರು.

‘ಸಂಸ್ಥೆಯು ₹197.62 ಕೋಟಿ ಠೇವು, ₹21.61 ಕೋಟಿ ಗುಂತಾವಣೆ, ₹222.04 ಕೋಟಿ ದುಡಿಯುವ ಬಂಡವಾಳ ಹೊಂದಿದ್ದು, ₹180 ಕೋಟಿ ಸಾಲ ವಿತರಿಸಿ, ₹2.65 ಕೋಟಿ ನಿವ್ವಳ ಲಾಭ ಗಳಿಸಿದೆ’ ಎಂದರು.

ಬೆಳಗಾವಿ ಶಾಖೆಗೆ ಜಯಪಾಲ ಟಕಾಯಿ, ಬಾಬುರಾವ್ ಸಾತಗೌಡ, ಪ್ರಮೋದ ಪಾಟೀಲ ಮತ್ತು ಸ್ಮೀತಾ ಪಾಟೀಲ ಅವರನ್ನು ಸಲಹಾ ಸಮಿತಿ ಸದಸ್ಯರನ್ನಾಗಿ ನೇಮಿಸಲಾಗಿದೆ’ ಎಂದರು.

ಉಪಾಧ್ಯಕ್ಷ ಕಿರಣ ಸೊಲ್ಲಾಪುರೆ, ನಿರ್ದೇಶಕರಾದ ಬಾಹುಬಲಿ ಸೊಲ್ಲಾಪುರೆ, ಪ್ರಜ್ವಲ್ ನಿಲಜಗಿ, ಕಿರಣ ಸೊಲ್ಲಾಪುರೆ, ರೋಹಿತ್ ಚೌಗಲಾ, ಸಂಗೀತಾ ನಿಲಜಗಿ, ಕಾರ್ಯದರ್ಶಿ ಸಂಜಯ ನಿಲಜಗಿ, ಸಿಇಒ ರಾಜೇಂದ್ರ ಪಾಟೀಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT