<p><strong>ಕಾಗವಾಡ</strong>: ತಾಲ್ಲೂಕಿನ ಮೋಳೆ ಗ್ರಾಮದ ಓಘ ಸಿದ್ದೇಶ್ವರ ದೇವರ 11ನೇ ಬೃಹತ್ ದನಗಳ ಜಾತ್ರೆ ಫೆ.9ರಿಂದ 4 ದಿನಗಳವರೆಗೆ ನಡೆಯಲಿದೆ ಎಂದು ಜಾತ್ರಾ ಕಮಿಟಿ ಅಧ್ಯಕ್ಷ ಭರತೇಶ ಪಡನಾಡ ತಿಳಿಸಿದರು.</p>.<p>ಅವರು ಭಾನುವಾರ ಮೋಳೆ ಗ್ರಾಮದಲ್ಲಿ ಮಾತನಾಡಿ, ಫೆ.9ರಂದು ಮಧ್ಯಾಹ್ನ 3 ಗಂಟೆಗೆ ವಿವಿಧ ಗ್ರಾಮಗಳ 5 ಪಲ್ಲಕ್ಕಿ ಕೂಡುತ್ತವೆ. ನಂತರ ವೈಭವದ ದೇವರುಗಳ ಭೇಟಿ ಕಾರ್ಯಕ್ರಮ ನಡೆಯಲಿದೆ. ರಾತ್ರಿ 9 ಗಂಟೆಗೆ ವಿವಿಧ ಡೊಳ್ಳಿನ ಗಾಯನ ಸಂಘಗಳಿಂದ ಡೊಳ್ಳಿನ ಹಾಡುಗಳ ಕಾರ್ಯಕ್ರಮ ನಡೆಯಲಿದೆ.</p>.<p>ಬುಧವಾರ ಬೆಳಿಗ್ಗೆ 6 ಗಂಟೆಗೆ ಓಘ ಸಿದ್ದೇಶ್ವರ ದೇವರ ಮಹಾಪೂಜೆ ಹಾಗೂ ನೈವೇದ್ಯ ನಡೆಯಲಿದೆ. ರಾತ್ರಿ 9 ಗಂಟೆಗೆ ಮಲ್ಲಿಕಾರ್ಜುನ ಹವ್ಯಾಸಿ ನಾಟ್ಯ ಸಂಘದಿಂದ ಅಣ್ಣ ಕೊಟ್ಟ ಮಾಂಗಲ್ಯ ನಾಟಕ ನಡೆಯಲಿದೆ. ಗುರುವಾರ ಬೆಳಿಗ್ಗೆ 9 ಗಂಟೆಗೆ ಒಂದು ಕುದುರೆ ಓಡಿಸುವ ಶರ್ಯತ್ತು, ಮಧ್ಯಾಹ್ನ 2 ಗಂಟೆಗೆ ವಿವಿಧ ಗ್ರಾಮಗಳಿಂದ ಆಗಮಿಸಿರುವ ದೇವರ ಪಲ್ಲಕ್ಕಿಗಳ ಬೀಳ್ಕೊಡುವ ಸಮಾರಂಭ ನಡೆಯಲಿದೆ.</p>.<p>ಶುಕ್ರವಾರ ಬೆಳಿಗ್ಗೆ 9 ಗಂಟೆಗೆ ಜೋಡು ಕುದುರೆ ಗಾಡಿ ಶರ್ಯತ್ತು ನಡೆಯಲಿದೆ. ಶನಿವಾರ ಬೆಳಿಗ್ಗೆ 9 ಗಂಟೆಗೆ ಜೋಡೆತ್ತಿನ ಗಾಡಿ ಶರ್ಯತ್ತು ನಡೆಯಲಿದೆ. ನಾಲ್ಕು ದಿನಗಳವರೆಗೆ ಮಹಾ ಅನ್ನಪ್ರಸಾದ ಜರುಗುಲಿವೆ. ಜಾತ್ರೆಯಲ್ಲಿ ಕಲಬೆರಕೆ ಭಂಡಾರ ಬಳಕೆ ಸಂಪೂರ್ಣ ನಿಷೇಧವಿದೆ ಎಂದು ತಿಳಿಸಿದರು.<br /><br /> ಈ ವೇಳೆ ಜಾತ್ರಾ ಕಮಿಟಿ ಉಪಾಧ್ಯಕ್ಷ ಸಿದ್ದಪ್ಪ ಸೊಂದಕರ, ಸದಸ್ಯರಾದ ಬಾಳಪ್ಪ ನರಟ್ಟಿ, ಶ್ರೀಶೈಲ ಬಡಿಗೇರ,ಮುರಗೆಪ್ಪ ಹಳಮನಿ,ಬಸವರಾಜ ತೇಲಿ,ವಿಠೋಬಾ ಕೋಳೆಕರ, ಸುರೇಶ ಯರಂಡೋಲಿ, ಧರ್ಮಾಜಿ ಕೋಳೆಕರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾಗವಾಡ</strong>: ತಾಲ್ಲೂಕಿನ ಮೋಳೆ ಗ್ರಾಮದ ಓಘ ಸಿದ್ದೇಶ್ವರ ದೇವರ 11ನೇ ಬೃಹತ್ ದನಗಳ ಜಾತ್ರೆ ಫೆ.9ರಿಂದ 4 ದಿನಗಳವರೆಗೆ ನಡೆಯಲಿದೆ ಎಂದು ಜಾತ್ರಾ ಕಮಿಟಿ ಅಧ್ಯಕ್ಷ ಭರತೇಶ ಪಡನಾಡ ತಿಳಿಸಿದರು.</p>.<p>ಅವರು ಭಾನುವಾರ ಮೋಳೆ ಗ್ರಾಮದಲ್ಲಿ ಮಾತನಾಡಿ, ಫೆ.9ರಂದು ಮಧ್ಯಾಹ್ನ 3 ಗಂಟೆಗೆ ವಿವಿಧ ಗ್ರಾಮಗಳ 5 ಪಲ್ಲಕ್ಕಿ ಕೂಡುತ್ತವೆ. ನಂತರ ವೈಭವದ ದೇವರುಗಳ ಭೇಟಿ ಕಾರ್ಯಕ್ರಮ ನಡೆಯಲಿದೆ. ರಾತ್ರಿ 9 ಗಂಟೆಗೆ ವಿವಿಧ ಡೊಳ್ಳಿನ ಗಾಯನ ಸಂಘಗಳಿಂದ ಡೊಳ್ಳಿನ ಹಾಡುಗಳ ಕಾರ್ಯಕ್ರಮ ನಡೆಯಲಿದೆ.</p>.<p>ಬುಧವಾರ ಬೆಳಿಗ್ಗೆ 6 ಗಂಟೆಗೆ ಓಘ ಸಿದ್ದೇಶ್ವರ ದೇವರ ಮಹಾಪೂಜೆ ಹಾಗೂ ನೈವೇದ್ಯ ನಡೆಯಲಿದೆ. ರಾತ್ರಿ 9 ಗಂಟೆಗೆ ಮಲ್ಲಿಕಾರ್ಜುನ ಹವ್ಯಾಸಿ ನಾಟ್ಯ ಸಂಘದಿಂದ ಅಣ್ಣ ಕೊಟ್ಟ ಮಾಂಗಲ್ಯ ನಾಟಕ ನಡೆಯಲಿದೆ. ಗುರುವಾರ ಬೆಳಿಗ್ಗೆ 9 ಗಂಟೆಗೆ ಒಂದು ಕುದುರೆ ಓಡಿಸುವ ಶರ್ಯತ್ತು, ಮಧ್ಯಾಹ್ನ 2 ಗಂಟೆಗೆ ವಿವಿಧ ಗ್ರಾಮಗಳಿಂದ ಆಗಮಿಸಿರುವ ದೇವರ ಪಲ್ಲಕ್ಕಿಗಳ ಬೀಳ್ಕೊಡುವ ಸಮಾರಂಭ ನಡೆಯಲಿದೆ.</p>.<p>ಶುಕ್ರವಾರ ಬೆಳಿಗ್ಗೆ 9 ಗಂಟೆಗೆ ಜೋಡು ಕುದುರೆ ಗಾಡಿ ಶರ್ಯತ್ತು ನಡೆಯಲಿದೆ. ಶನಿವಾರ ಬೆಳಿಗ್ಗೆ 9 ಗಂಟೆಗೆ ಜೋಡೆತ್ತಿನ ಗಾಡಿ ಶರ್ಯತ್ತು ನಡೆಯಲಿದೆ. ನಾಲ್ಕು ದಿನಗಳವರೆಗೆ ಮಹಾ ಅನ್ನಪ್ರಸಾದ ಜರುಗುಲಿವೆ. ಜಾತ್ರೆಯಲ್ಲಿ ಕಲಬೆರಕೆ ಭಂಡಾರ ಬಳಕೆ ಸಂಪೂರ್ಣ ನಿಷೇಧವಿದೆ ಎಂದು ತಿಳಿಸಿದರು.<br /><br /> ಈ ವೇಳೆ ಜಾತ್ರಾ ಕಮಿಟಿ ಉಪಾಧ್ಯಕ್ಷ ಸಿದ್ದಪ್ಪ ಸೊಂದಕರ, ಸದಸ್ಯರಾದ ಬಾಳಪ್ಪ ನರಟ್ಟಿ, ಶ್ರೀಶೈಲ ಬಡಿಗೇರ,ಮುರಗೆಪ್ಪ ಹಳಮನಿ,ಬಸವರಾಜ ತೇಲಿ,ವಿಠೋಬಾ ಕೋಳೆಕರ, ಸುರೇಶ ಯರಂಡೋಲಿ, ಧರ್ಮಾಜಿ ಕೋಳೆಕರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>