<p><strong>ಮೂಡಲಗಿ</strong>: ತಾಲ್ಲೂಕಿನ ಅವರಾದಿ ಗ್ರಾಮದಲ್ಲಿ ಸೋಮವಾರ ಮದುವೆ ಮಂಟಪದಲ್ಲಿ ಮದುವೆ ಜೋಡಿಯ ಅಕ್ಷರಾರೋಪಣದ ನಂತರ ‘ಆರ್ಸಿಬಿ ಗೆದ್ದು ಬಾ’ ‘ಕಪ್ ಆರ್ಸಿಬಿಯದ್ದೇ’ ‘ಈ ಬಾರಿ ಕಪ್ ಕರ್ನಾಟಕದ್ದೇ’ ಎಂದು ಅಭಿಮಾನಿಗಳು ಘೋಷಣೆಗಳನ್ನು ಹಾಕಿ ಗಮನ ಸೆಳೆದರು.</p>.<p>ಅವರಾದಿ ಗ್ರಾಮದಲ್ಲಿ ಕಾಲತಿಪ್ಪಿ ಪರಿವಾರ ಬಸವರಾಜ ಮತ್ತು ನೇತ್ರಾ ಇವರ ಮದುವೆಯಲ್ಲಿ ಆರ್ಸಿಬಿ ಅಭಿಮಾನಿಗಳು ಗೆಲುವಿಗೆ ಶುಭ ಹಾರೈಸಿದರು. ಮದುಮಕ್ಕಳು ಕೈಯಲ್ಲಿ ಕನ್ನಡ ಧ್ವಜ ಹಿಡಿದು ಅಭಿಮಾನಿಗಳೊಂದಿಗೆ ಘೋಷಣೆ ಹಾಕಿದರು.</p>.<p>ಕಳೆದ 18 ವರ್ಷಗಳಿಂದ ಗೆಲುವನ್ನೇ ಕಾಣದ ಆರ್ಸಿಬಿ ಮತ್ತೊಮ್ಮೆ ಅಂತಿ ಹಣಾಹಣಿಗೆ ಮಂಗಳವಾರ ಅಹಮಾದಬಾದಲ್ಲಿ ಸಜ್ಜಾಗಿದೆ. ಎಲ್ಲೆಡೆ ಗೆಲುವಿನ ಪ್ರಾರ್ಥನೆಗಳು ಜರುಗುತ್ತಿದ್ದು, ಅವರಾದಿಯಲ್ಲಿ ಆರ್ಸಿಬಿ ಗೆಲುವಿಗೆ ಮದುವೆ ಮಂಟಪವನ್ನು ಬಳಸಿಕೊಂಡಿದ್ದು ವಿಶೇಷವಾಗಿದೆ.</p>.<p>ಆರ್ಸಿಬಿ ಅಭಿಮಾನಿ ಬಳಗವಾಗಿರುವ ಪ್ರಕಾಶ ಕಾಳಶೆಟ್ಟಿ, ಮಾನಿಂಗ ಬಡಿಗೇರ, ಬಸವರಾಜ ವಿರೇಶನವರ, ಶಿವು ಮೇಟಿ, ವಿಠಲ ದಂಡಪ್ಪನ್ನವರ, ಮಲ್ಲಯ್ಯ ಮಠಪತಿ, ಸುನಿಲ ಪಾಟೀಲ, ಆನಂದ ಮಹಾಲಿಂಗಪುರ ಮತ್ತಿತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೂಡಲಗಿ</strong>: ತಾಲ್ಲೂಕಿನ ಅವರಾದಿ ಗ್ರಾಮದಲ್ಲಿ ಸೋಮವಾರ ಮದುವೆ ಮಂಟಪದಲ್ಲಿ ಮದುವೆ ಜೋಡಿಯ ಅಕ್ಷರಾರೋಪಣದ ನಂತರ ‘ಆರ್ಸಿಬಿ ಗೆದ್ದು ಬಾ’ ‘ಕಪ್ ಆರ್ಸಿಬಿಯದ್ದೇ’ ‘ಈ ಬಾರಿ ಕಪ್ ಕರ್ನಾಟಕದ್ದೇ’ ಎಂದು ಅಭಿಮಾನಿಗಳು ಘೋಷಣೆಗಳನ್ನು ಹಾಕಿ ಗಮನ ಸೆಳೆದರು.</p>.<p>ಅವರಾದಿ ಗ್ರಾಮದಲ್ಲಿ ಕಾಲತಿಪ್ಪಿ ಪರಿವಾರ ಬಸವರಾಜ ಮತ್ತು ನೇತ್ರಾ ಇವರ ಮದುವೆಯಲ್ಲಿ ಆರ್ಸಿಬಿ ಅಭಿಮಾನಿಗಳು ಗೆಲುವಿಗೆ ಶುಭ ಹಾರೈಸಿದರು. ಮದುಮಕ್ಕಳು ಕೈಯಲ್ಲಿ ಕನ್ನಡ ಧ್ವಜ ಹಿಡಿದು ಅಭಿಮಾನಿಗಳೊಂದಿಗೆ ಘೋಷಣೆ ಹಾಕಿದರು.</p>.<p>ಕಳೆದ 18 ವರ್ಷಗಳಿಂದ ಗೆಲುವನ್ನೇ ಕಾಣದ ಆರ್ಸಿಬಿ ಮತ್ತೊಮ್ಮೆ ಅಂತಿ ಹಣಾಹಣಿಗೆ ಮಂಗಳವಾರ ಅಹಮಾದಬಾದಲ್ಲಿ ಸಜ್ಜಾಗಿದೆ. ಎಲ್ಲೆಡೆ ಗೆಲುವಿನ ಪ್ರಾರ್ಥನೆಗಳು ಜರುಗುತ್ತಿದ್ದು, ಅವರಾದಿಯಲ್ಲಿ ಆರ್ಸಿಬಿ ಗೆಲುವಿಗೆ ಮದುವೆ ಮಂಟಪವನ್ನು ಬಳಸಿಕೊಂಡಿದ್ದು ವಿಶೇಷವಾಗಿದೆ.</p>.<p>ಆರ್ಸಿಬಿ ಅಭಿಮಾನಿ ಬಳಗವಾಗಿರುವ ಪ್ರಕಾಶ ಕಾಳಶೆಟ್ಟಿ, ಮಾನಿಂಗ ಬಡಿಗೇರ, ಬಸವರಾಜ ವಿರೇಶನವರ, ಶಿವು ಮೇಟಿ, ವಿಠಲ ದಂಡಪ್ಪನ್ನವರ, ಮಲ್ಲಯ್ಯ ಮಠಪತಿ, ಸುನಿಲ ಪಾಟೀಲ, ಆನಂದ ಮಹಾಲಿಂಗಪುರ ಮತ್ತಿತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>