‘ಮುದ್ರಿತ ನಾಡಗೀತೆ ಬದಲಿಗೆ ಅಧಿಕಾರಿಗಳು ಹಾಗೂ ಸದಸ್ಯರೇ ನಾಡಗೀತೆ ಹಾಡಬೇಕು ಎನ್ನುವುದು ನನ್ನ ಬಯಕೆ. ಇದರಿಂದ ಗಡಿಯಲ್ಲಿ ಕನ್ನಡ ಪ್ರೇಮ ಬೆಳೆಯುತ್ತದೆ. ಮರಾಠಿ ಭಾಷಿಕರು ಕೂಡ ಕಲಿತಂತಾಗುತ್ತದೆ. ಅಧಿಕಾರಿಗಳು ಬಾಯಿಪಾಠ ಮಾಡಿಕೊಂಡು ಬರಬೇಕು’ ಎಂದು ಅಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿ ಅವರು ಗಮನಸೆಳೆದಿದ್ದರು. ಈಗ, ಅಧಿಕಾರಿಗಳು ಹಾಡಲಿ ಬಿಡಲಿ, ತಾವು ಹಾಡುತ್ತಿದ್ದಾರೆ.