<p><strong>ಗೋಕಾಕ:</strong> ‘ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರವನ್ನೂ ನೀಡಿ ಅವರನ್ನು ಉತ್ತಮ ನಾಗರಿಕರನ್ನಾಗಿ ಮಾಡುವ ಜವಾಬ್ದಾರಿ ಪಾಲಕರ ಮೇಲಿದೆ’ ಎಂದು ಇಲ್ಲಿನ ದಿಗಂಬರ ಜೈನ ಸಮಾಜದ ಅಧ್ಯಕ್ಷ ವಿಜಯಕುಮಾರ ಖಾರೆಪಾಟಣ ಹೇಳಿದರು.</p>.<p>ಭಾನುವಾರ ಇಲ್ಲಿನ ಪಾಯಸಾಗರ ಶಿಕ್ಷಣ ಸಂಸ್ಥೆಯ ಮಹಾವೀರ ಭವನದಲ್ಲಿ ದಿಗಂಬರ ಜೈನ ಸಮಾಜದಿಂದ ಆಯೋಜಿಸಿದ್ದ ಜ್ಞಾನ ಜ್ಯೋತಿ ಶಿಬಿರ ಹಾಗೂ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಇಂದು ಮಕ್ಕಳನ್ನು ಅಂಕ ಗಳಿಸುವ ಯಂತ್ರಗಳನ್ನಾಗಿ ಮಾಡುವ ಜೊತೆಗೆ ಅವರ ಮೇಲೆ ಒತ್ತಡ ಹೇರಲಾಗುತ್ತಿದೆ. ಅವರಲ್ಲಿ ಹುದಿಗುರುವ ಸುಪ್ತ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಶಿಕ್ಷಣದೊಂದಿಗೆ ಅಧ್ಯಾತ್ಮವನ್ನೂ ಅವರಲ್ಲಿ ಕಲಿಸಿ ಅವರನ್ನು ಪರಿಪೂರ್ಣ ವ್ಯಕ್ತಿಗಳನ್ನಾಗಿ ರೂಪಿಸಬೇಕು’ ಎಂದು ಸಲಹೆ ನೀಡಿದರು.</p>.<p>ಶಿಕ್ಷಕ ಬಿ.ಎಸ್. ಜೋಲಾಪೂರೆ ಮಾತನಾಡಿದರು. ರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ಸ್ವಾಮಿ ವಿವೇಕಾನಂದರ ಕುರಿತು ನಡೆಸಿದ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.</p>.<p>ಸಮಾಜದ ಪ್ರಮುಖರಾದ ಜಂಬೂರಾವ ಭರಮಗೌಡ, ಚಂದ್ರಕಲಾ ಸೊಲ್ಲಾಪೂರೆ, ಶಿಕ್ಷಕರಾದ ಟಿ.ಬಿ. ಬಿಲ್, ತ್ರೀಶೀಲಾ ಅಂಗಡಿ, ಜಯಶ್ರೀ ಗುರ್ಲಹೊಸುರ, ಶೈಲಾ ಕೊಟಬಾಗಿ, ಭರಮಣ್ಣ ಖಾರೆಪಾಟಣ, ಧನ್ಯಕುಮಾರ ಕಿತ್ತೂರ, ಅಣ್ಣಾಸಾಹೇಬ ಥಬಾಜ, ಶಿಕ್ಷಕ ರಾಮಚಂದ್ರ ಕಾಕಡೆ ಇದ್ದರು.</p>.<p>ವಿದ್ಯಾರ್ಥಿಗಳಾದ ಸಹನಾ ಶೆಟ್ಟಿ ಸ್ವಾಗತಿಸಿದರು. ಇಶಾ ರಾಜಮಾನೆ ನಿರೂಪಿಸಿದರು. ವರ್ಷಾ ಚೌಗಲೆ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗೋಕಾಕ:</strong> ‘ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರವನ್ನೂ ನೀಡಿ ಅವರನ್ನು ಉತ್ತಮ ನಾಗರಿಕರನ್ನಾಗಿ ಮಾಡುವ ಜವಾಬ್ದಾರಿ ಪಾಲಕರ ಮೇಲಿದೆ’ ಎಂದು ಇಲ್ಲಿನ ದಿಗಂಬರ ಜೈನ ಸಮಾಜದ ಅಧ್ಯಕ್ಷ ವಿಜಯಕುಮಾರ ಖಾರೆಪಾಟಣ ಹೇಳಿದರು.</p>.<p>ಭಾನುವಾರ ಇಲ್ಲಿನ ಪಾಯಸಾಗರ ಶಿಕ್ಷಣ ಸಂಸ್ಥೆಯ ಮಹಾವೀರ ಭವನದಲ್ಲಿ ದಿಗಂಬರ ಜೈನ ಸಮಾಜದಿಂದ ಆಯೋಜಿಸಿದ್ದ ಜ್ಞಾನ ಜ್ಯೋತಿ ಶಿಬಿರ ಹಾಗೂ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಇಂದು ಮಕ್ಕಳನ್ನು ಅಂಕ ಗಳಿಸುವ ಯಂತ್ರಗಳನ್ನಾಗಿ ಮಾಡುವ ಜೊತೆಗೆ ಅವರ ಮೇಲೆ ಒತ್ತಡ ಹೇರಲಾಗುತ್ತಿದೆ. ಅವರಲ್ಲಿ ಹುದಿಗುರುವ ಸುಪ್ತ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಶಿಕ್ಷಣದೊಂದಿಗೆ ಅಧ್ಯಾತ್ಮವನ್ನೂ ಅವರಲ್ಲಿ ಕಲಿಸಿ ಅವರನ್ನು ಪರಿಪೂರ್ಣ ವ್ಯಕ್ತಿಗಳನ್ನಾಗಿ ರೂಪಿಸಬೇಕು’ ಎಂದು ಸಲಹೆ ನೀಡಿದರು.</p>.<p>ಶಿಕ್ಷಕ ಬಿ.ಎಸ್. ಜೋಲಾಪೂರೆ ಮಾತನಾಡಿದರು. ರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ಸ್ವಾಮಿ ವಿವೇಕಾನಂದರ ಕುರಿತು ನಡೆಸಿದ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.</p>.<p>ಸಮಾಜದ ಪ್ರಮುಖರಾದ ಜಂಬೂರಾವ ಭರಮಗೌಡ, ಚಂದ್ರಕಲಾ ಸೊಲ್ಲಾಪೂರೆ, ಶಿಕ್ಷಕರಾದ ಟಿ.ಬಿ. ಬಿಲ್, ತ್ರೀಶೀಲಾ ಅಂಗಡಿ, ಜಯಶ್ರೀ ಗುರ್ಲಹೊಸುರ, ಶೈಲಾ ಕೊಟಬಾಗಿ, ಭರಮಣ್ಣ ಖಾರೆಪಾಟಣ, ಧನ್ಯಕುಮಾರ ಕಿತ್ತೂರ, ಅಣ್ಣಾಸಾಹೇಬ ಥಬಾಜ, ಶಿಕ್ಷಕ ರಾಮಚಂದ್ರ ಕಾಕಡೆ ಇದ್ದರು.</p>.<p>ವಿದ್ಯಾರ್ಥಿಗಳಾದ ಸಹನಾ ಶೆಟ್ಟಿ ಸ್ವಾಗತಿಸಿದರು. ಇಶಾ ರಾಜಮಾನೆ ನಿರೂಪಿಸಿದರು. ವರ್ಷಾ ಚೌಗಲೆ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>