‘ಪೊಲೀಸರು ನಾವು ಒಳಗೆ ಬರಲು ಅಡ್ಡಿಪಡಿಸಿದರು. ಅಂಗವಿಕಲ ಬರುವುದಕ್ಕೂ ಅವಕಾಶ ಕೊಡಲಿಲ್ಲ. ಹೀಗಾಗಿ ತಡವಾಯಿತು. ಕಾರ್ಯಕ್ರಮದ ಸಮಯವನ್ನು ದಿಢೀರ್ ಬದಲಾವಣೆ ಮಾಡಿದ ಮಾಹಿತಿಯೂ ಇರಲಿಲ್ಲ. ನೇಕಾರರು, ರೈತರು, ಮನೆ ಕಳದುಕೊಂಡರ ಸಮಸ್ಯೆ ಹೇಳಿಕೊಳ್ಳಲು ಮತ್ತು ಪರಿಹಾರ ಕೇಳಲು ಇಲ್ಲಿಗೆ ಬಂದಿದ್ದೆವು. ಆದರೆ, ಅವಕಾಶವಾಗಲಿಲ್ಲ’ ಎಂದು ವಡಗಾವಿಯ ಸರ್ವೋದಯ ಸಂಘಟನೆ ಅಧ್ಯಕ್ಷ ಶ್ರೀನಿವಾಸ ತಾಳೂಕರ, ಕಿತ್ತೂರಿನ ರಾಷ್ಟ್ರೀಯ ಮಹಿಳಾ ಒಕ್ಕೂಟದವರು ಆರೋಪಿಸಿದರು.