ಪತ್ರಿಕಾ ಹೇಳಿಕೆ ನೀಡಿದ ಅವರು, ‘ಕೇಂದ್ರ ಸರ್ಕಾರವು ಗೋಧಿ ಸೇರಿದಂತೆ ಪ್ರಮುಖ ಆರು ಹಿಂಗಾರು ಬೆಳೆಗಳಿಗೆ ಬೆಂಬಲ ಬೆಲೆ ಹೆಚ್ಚಳ ಮಾಡಿದೆ. ಚನ್ನಂಗಿ ಬೇಳೆ ಪ್ರತಿ ಕ್ವಿಂಟಲ್ಗೆ ₹ 425 ಕನಿಷ್ಠ ಬೆಂಬಲ ಬೆಲೆ ಹೆಚ್ಚಳವಾಗಿದ್ದು, ಒಂದು ಕ್ವಿಂಟಲ್ಗೆ ₹ 6,425 ನಿಗದಿ ಮಾಡಲಾಗಿದೆ. ಗೋಧಿಗೆ ಪ್ರತಿ ಕ್ವಿಂಟಲ್ಗೆ ₹ 150 ಹೆಚ್ಚಳ ಮಾಡಲಾಗಿದ್ದು ಕ್ವಿಂಟಲ್ಗೆ ₹ 2,275, ಕಡಲೆ ₹ 105 ಹೆಚ್ಚಳ ಮಾಡಲಾಗಿದ್ದು ಒಂದು ಕ್ವಿಂಟಲ್ಗೆ ₹ 5440, ಬಾರ್ಲಿಗೆ ₹ 115 ಹೆಚ್ಚಳ ಮಾಡಲಾಗಿದ್ದು ಒಂದು ಕ್ವಿಂಟಲ್ಗೆ ₹ 1850, ಸಾಸಿವೆಗೆ ₹ 200 ಹೆಚ್ಚಳ ಮಾಡಿದ್ದು, ಒಂದು ಕ್ವಿಂಟಲ್ಗೆ ₹ 5650, ಕುಸುಬೆಗೆ ₹ 150 ಹೆಚ್ಚಳ ಮಾಡಿದ್ದು ಒಂದು ಕ್ವಿಂಟಲ್ಗೆ ₹ 5800 ದರ ನಿಗದಿ ಪಡಿಸಲಾಗಿದೆ ಎಂದಿದ್ದಾರೆ.