ಶಿವಕುಮಾರ್ ವಾಹನಕ್ಕೆ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಡಿಕೆಶಿ ವಾಹನದ ಹಿಂದೆ ಹೋಗುತ್ತಿದ್ದ ವಾಹನಕ್ಕೆ ಕೆಲವರು ಕೈಯ್ಯಿಂದ ಬಡಿದರು. ಈ ವೇಳೆ ಸಫಾರಿ ಧರಿಸಿದ್ದ ಪೊಲೀಸರೊಬ್ಬರು ನಮ್ಮ ಮೇಲೆ ಹಲ್ಲೆ ನಡೆಸಿದರು ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಅಟ್ಟಾಡಿಸಿಕೊಂಡು ಹೋಗಿ ಥಳಿಸಿದರು. ಅವರನ್ನು ರಕ್ಷಿಸಿಕೊಳ್ಳಲು ಪೊಲೀಸರು ಹರಸಾಹಸ ಪಟ್ಟರು. ಈ ವೇಳೆ ಓಡುತ್ತಿದ್ದ ಗುಂಪಿನಲ್ಲಿದ್ದ ಹಲವರು ಮುಗ್ಗರಿಸಿ ಬಿದ್ದ ಘಟನೆಯೂ ನಡೆಯಿತು.