ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ‘ರೇಣುಕಾಚಾರ್ಯರ ತತ್ವಗಳನ್ನು ಜನಸಾಮಾನ್ಯರಿಗೆ ಮುಟ್ಟಿಸಬೇಕು ಎಂದರೆ ಅವರ ಉತ್ಸವವನ್ನು ಸಾರ್ವತ್ರಿಕಗೊಳಿಸಬೇಕು ಎನ್ನುವ ಸದುದ್ದೇಶದಿಂದ ಶ್ರೀಮಠ ಸಂಕಲ್ಪ ಮಾಡಿದೆ. ರಂಭಾಪುರಿ ಶ್ರೀಗಳ ಆಜ್ಞೆಯಂತೆ ನಾವೆಲ್ಲರೂ ಜಯಂತಿಯನ್ನು ಅದ್ದೂರಿಯಾಗಿ ಎಲ್ಲಾ ಕಡೆಯೂ ನಡೆಸೋಣ’ ಎಂದರು.